ಕೇದಾರ ; ಹೈವೇನಲ್ಲೇ ಕಾಪ್ಟರ್‌ ತುರ್ತು ಭೂಸ್ಪರ್ಶ

KannadaprabhaNewsNetwork |  
Published : Jun 08, 2025, 02:32 AM ISTUpdated : Jun 08, 2025, 04:27 AM IST
ಉತ್ತರಾಖಂಡ | Kannada Prabha

ಸಾರಾಂಶ

ಉತ್ತರಾಖಂಡದಲ್ಲಿ ಕೇದಾರನಾಥದಿಂದ ಹೊರಟಿದ್ದ ಹೆಲಿಕಾಪ್ಟರ್‌ ಕೆಲ ಕ್ಷಣದಲ್ಲಿಯೇ ನಡು ರಸ್ತೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್‌ ಅದರಲ್ಲಿದ್ದ 6 ಜನರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಕಾಪ್ಟರ್‌ ಹಿಂಬದಿ ರೆಕ್ಕೆ ಮುರಿದಿದೆ.

ರುದ್ರಪ್ರಯಾಗ: ಉತ್ತರಾಖಂಡದಲ್ಲಿ ಕೇದಾರನಾಥದಿಂದ ಹೊರಟಿದ್ದ ಹೆಲಿಕಾಪ್ಟರ್‌ ಕೆಲ ಕ್ಷಣದಲ್ಲಿಯೇ ನಡು ರಸ್ತೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್‌ ಅದರಲ್ಲಿದ್ದ 6 ಜನರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಕಾಪ್ಟರ್‌ ಹಿಂಬದಿ ರೆಕ್ಕೆ ಮುರಿದಿದೆ.

ಶುಕ್ರವಾರ ಮಧ್ಯಾಹ್ನ 12:52ರ ವೇಳೆಗೆ ಕೇದಾರನಾಥ ಸಮೀಪ ಬದಾಸುವಿನಿಂದ ಹೊರಟು ಬರುತ್ತಿತ್ತು. ಹಾರಾಟ ಆರಂಭಿಸಿದ ಕೆಲ ಹೊತ್ತಿನಲ್ಲಿಯೇ ಕಂಟ್ರೋಲಿಂಗ್ಸ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಪೈಲೆಟ್‌ ಸಾಹಸಮಯವಾಗಿ ನಡು ರಸ್ತೆಯಲ್ಲಿ ಕಾಪ್ಟರ್‌ ಇಳಿಸಿದ್ದಾರೆ. ಇದರಿಂದಾಗಿ ಪೈಲೆಟ್‌ಗೆ ಮಾತ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪ್ಟರ್‌ನ ಹಿಂಬದಿ ರೆಕ್ಕೆ ಮುರಿದಿದೆ. ಇದರ ಕೆಳಗೆ ನಿಂತಿದ್ದ ಕಾರಿಗೂ ಸಹ ಹಾನಿಯಾಗಿದೆ.

ಇದು ವರ್ಷದಲ್ಲಿ ನಡೆಯುತ್ತಿರುವ 4ನೇ ಕಾಪ್ಟರ್‌ ಅಪಘಾತವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!
ಒಂದೇ ದಿನ 2 ಬಾರಿ ಪ್ರಜ್ಞೆ ತಪ್ಪಿದ ಧನಕರ್‌ : ದಿಲ್ಲಿ ಏಮ್ಸ್‌ಗೆ ದಾಖಲು