ಈಶಾನ್ಯದ ವಲಸೆ ಕಾರ್ಮಿಕರಿಗೆ ಕೇರಳ ಹೊಸ ಲವ್‌ಸ್ಪಾಟ್‌

KannadaprabhaNewsNetwork |  
Published : Feb 05, 2025, 12:30 AM IST
ಕೇರಳ | Kannada Prabha

ಸಾರಾಂಶ

ವಾರಕ್ಕೆ 60/70/90 ಗಂಟೆ ಕೆಲಸ, ಉದ್ಯೋಗ ಮತ್ತು ಕೌಟುಂಬಿಕ ಸಮತೋಲನದ ಕುರಿತು ದೇಶವ್ಯಾಪಿ ಉನ್ನತ ವೇತನ ವರ್ಗದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದರೆ, ಇತ್ತ ಕೇರಳದಲ್ಲಿ ಈಶಾನ್ಯ ರಾಜ್ಯಗಳ ಯುವಕರು ಕರ್ತವ್ಯದ ಸ್ಥಳದಲ್ಲೇ ಪ್ರೀತಿ ಪ್ರೇಮದ ಹಾದಿಯಲ್ಲಿ ಸಾಗಿ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ.

ತಿರುವನಂತಪುರಂ: ವಾರಕ್ಕೆ 60/70/90 ಗಂಟೆ ಕೆಲಸ, ಉದ್ಯೋಗ ಮತ್ತು ಕೌಟುಂಬಿಕ ಸಮತೋಲನದ ಕುರಿತು ದೇಶವ್ಯಾಪಿ ಉನ್ನತ ವೇತನ ವರ್ಗದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದರೆ, ಇತ್ತ ಕೇರಳದಲ್ಲಿ ಈಶಾನ್ಯ ರಾಜ್ಯಗಳ ಯುವಕರು ಕರ್ತವ್ಯದ ಸ್ಥಳದಲ್ಲೇ ಪ್ರೀತಿ ಪ್ರೇಮದ ಹಾದಿಯಲ್ಲಿ ಸಾಗಿ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಈಶಾನ್ಯ ರಾಜ್ಯಗಳ ವಲಸೆ ಕಾರ್ಮಿಕರಿಗೀಗ ಕೇರಳ ಹೊಸ ಲವ್‌ ಹಾಟ್‌ಸ್ಪಾಟ್‌ ಆಗಿ ಹೊರಹೊಮ್ಮಿದೆ!

ಹೌದು. ಕೇರಳದ ಯುವಕರು ಉತ್ತಮ ಉದ್ಯೋಗ ಅರಸಿ ಗಲ್ಫ್‌ ದೇಶಗಳತ್ತ ಮುಖ ಮಾಡುತ್ತಿದ್ದರೆ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ, ಒಡಿಶಾದಂಹ ಈಶಾನ್ಯ ರಾಜ್ಯದಿಂದ ಕೆಲಸದ ನಿಮಿತ್ತ ಆಗಮಿಸುವ ಕಾರ್ಮಿಕರ ಪಾಲಿಗೆ ಕೇರಳ, ತಿಂಗಳಿಗೆ ಕಡಿಮೆಯೆಂದರೂ 25 ಸಾವಿರ ರು. ವರೆಗೆ ಆದಾಯ ನೀಡುವ ಗಲ್ಫ್‌ ಆಗಿದೆ. ಇವರು ರಾಜ್ಯದ ಉತ್ಪಾದಕತೆಗೂ ಕೊಡುಗೆ ನೀಡುತ್ತಿದ್ದಾರೆ. ಅಂತಹವರನ್ನು ಸರ್ಕಾರ ‘ಅತಿಥಿ ಕಾರ್ಮಿಕರು’ ಎಂದು ಪರಿಗಣಿಸಿದ್ದು, ಹಲವು ಯೋಜನೆಗಳ ಮೂಲಕ ರಾಜ್ಯದಲ್ಲೇ ನೆಲೆಸಿ, ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲ ಮಾಡಿಕೊಡುತ್ತಿದೆ.

ಹೀಗೆ ಹೊಟ್ಟೆಪಾಡಿಗಾಗಿ ಕೇರಳಕ್ಕೆ ಆಗಮಿಸಿ, ನೆಲೆಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಒಗ್ಗಿಕೊಳ್ಳುತ್ತಿರುವ ವಲಸೆ ಕಾರ್ಮಿಕರು ತಮ್ಮ ಹಳೆ ವೃತ್ತಿಯನ್ನು ತ್ಯಜಿಸಿ, ವ್ಯಾಪಾರ ಸೇರಿದಂತೆ ಉತ್ತಮ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಇಂಥವರನ್ನು ಇಲ್ಲಿನ ಯುವತಿಯರು ವಿವಾಹವಾಗುತ್ತಿರುವುದು ಸಾಮಾನ್ಯವಾಗುತ್ತಿದೆ. ಇದು ಗ್ರಾಮೀಣ ಭಾಗದಲ್ಲಿ ಅಧಿಕವಿದ್ದು, ಈ ಸಂಖ್ಯೆ 2017-18ರಲ್ಲಿ 31 ಲಕ್ಷ ಇದ್ದು, 2030ರ ವೇಳೆಗೆ 50 ಲಕ್ಷ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಇಂತಹ ಹಲವು ಜೋಡಿಗಳನ್ನು ರಾಜ್ಯಾದ್ಯಂತ ಕಾಣಬಹುದಾಗಿದೆ. ಈ ಕುರಿತು ಮಾತನಾಡಿರುವ ಸಂಯೋಜಿತ ರಾಷ್ಟ್ರೀಯ ವಲಸೆ ಕಾರ್ಮಿಕರ ಒಕ್ಕೂಟ(ಎಈಟಿಯುಸಿ) ಉಪಾಧ್ಯಕ್ಷ ರಾಜೇಂದ್ರ ನಾಯಕ್‌, ‘ಈಶಾನ್ಯದ ಯುವಕರು ಶ್ರಮಜೀವಿಗಳಾಗಿದ್ದು, ಕೇರಳದಲ್ಲೇ ನೆಲೆಸಿ ಇಲ್ಲಿನ ಸಂಸ್ಕೃತಿಗೆ ಒಗ್ಗಿಕೊಳ್ಳಲು ಸಿದ್ಧರಿದ್ದಾರೆ. ಜೊತೆಗೆ, ಮದುವೆ ವೇಳೆ ವರದಕ್ಷಿಣೆಯನ್ನೂ ಬಯಸುವುದಿಲ್ಲ’ ಎಂದಿದ್ದಾರೆ. ಇವರೂ ಕೂಡ ಒಡಿಶಾ ಮೂಲದವರಾಗಿದ್ದು, ಕೇರಳದ ರಜನಿ ಎಂಬುವರನ್ನು ವಿವಾಹವಾಗಿರುವುದು ಗಮನಾರ್ಹ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ