ಏಷ್ಯಾ ಸರ್ಫಿಂಗ್‌: ಕನ್ನಡಿಗ ರಮೇಶ್‌ ಫೈನಲ್‌ಗೆ ಪ್ರವೇಶ

KannadaprabhaNewsNetwork |  
Published : Aug 10, 2025, 01:30 AM ISTUpdated : Aug 10, 2025, 04:35 AM IST
ರಮೇಶ್‌  | Kannada Prabha

ಸಾರಾಂಶ

ಇಲ್ಲಿ ನಡೆಯುತ್ತಿರುವ ಏಷ್ಯನ್‌ ಸರ್ಫಿಂಗ್ ಚಾಂಪಿಯನ್‌ಶಿಪ್‌ನ ಪುರುಷರ ಮುಕ್ತ ವಿಭಾಗದಲ್ಲಿ ಕರ್ನಾಟಕದ ರಮೇಶ್‌ ಬುಧಿಯಾಲ ಫೈನಲ್ ಪ್ರವೇಶಿಸಿದ್ದಾರೆ.

ಚೆನ್ನೈ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಸರ್ಫಿಂಗ್ ಚಾಂಪಿಯನ್‌ಶಿಪ್‌ನ ಪುರುಷರ ಮುಕ್ತ ವಿಭಾಗದಲ್ಲಿ ಕರ್ನಾಟಕದ ರಮೇಶ್‌ ಬುಧಿಯಾಲ ಫೈನಲ್ ಪ್ರವೇಶಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಶನಿವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಫಿಲಿಪ್ಪೀನ್ಸ್‌ನ ನೀಲ್‌ ಸ್ಯಾಂಚೆಸ್‌ರನ್ನು ಹಿಂದಿಕ್ಕಿದ ರಮೇಶ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಆ ಬಳಿಕ ಸೆಮಿಫೈನಲ್‌ನಲ್ಲಿ 2ನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದರು.

ಭಾರತದ ಕಿಶೋರ್‌ ಕುಮಾರ್‌ ಸೆಮಿಫೈನಲ್ ಪ್ರವೇಶಿಸಿದರೂ 4ನೇ ಸ್ಥಾನ ಪಡೆಯುವ ಮೂಲಕ ಫೈನಲ್‌ ಅವಕಾಶ ತಪ್ಪಿಸಿಕೊಂಡರು. ಡಿ.ಶ್ರೀಕಾಂತ್ ಕ್ವಾರ್ಟರ್‌ ಫೈನಲ್‌ನಲ್ಲೇ ಪರಾಭವಗೊಂಡರು.

ಲೀಡ್ಸ್‌ ಪಿಚ್‌ ಅತ್ಯುತ್ತಮ,  ಬಾಕಿ 3 ತೃಪ್ತಿಕರ: ಐಸಿಸಿ

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಸರಣಿಗೆ ಆತಿಥ್ಯ ವಹಿಸಿದ 4 ಕ್ರೀಡಾಂಗಣಗಳ ಪಿಚ್‌ಗೆ ಐಸಿಸಿ ರೇಟಿಂಗ್ ನೀಡಿದೆ. ಈ ಪೈಕಿ ಲೀಡ್ಸ್‌ನ ಹೆಡಿಂಗ್ಲೆ ‘ಅತ್ಯುತ್ತಮ’ ರೇಟಿಂಗ್ ಪಡೆದಿದೆ. ಉಳಿದ 3 ಪಿಚ್‌ಗಳಾದ ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್‌ ಟ್ರಾಫರ್ಡ್‌ಗೆ ‘ತೃಪ್ತಿಕರ’ ರೇಟಿಂಗ್ ಲಭಿಸಿದೆ. ಓವಲ್‌ ಪಿಚ್‌ ರೇಟಿಂಗ್ ಇನ್ನಷ್ಟೇ ಬರಬೇಕಿದೆ.

1ನೇ ಏಕದಿನ: ವಿಂಡೀಸ್‌

ವಿರುದ್ಧ ಪಾಕ್‌ಗೆ ಗೆಲುವು

ತರೌಬ: ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 49 ಓವರ್‌ಗಳಲ್ಲಿ 280 ರನ್‌ಗೆ ಆಲೌಟಾಯಿತು. ಎವಿನ್‌ ಲೆವಿಸ್‌ 60, ಶಾಯಿ ಹೋಪ್‌ 55, ರಾಸ್ಟನ್‌ ಚೇಸ್ 53 ರನ್‌ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕ್‌ 48.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಹಸನ್‌ ನವಾಜ್‌ ಔಟಾಗದ 63, ನಾಯಕ ರಿಜ್ವಾನ್‌ 53, ಬಾಬರ್‌ ಆಜಂ 47 ರನ್‌ ಸಿಡಿಸಿದರು.

ಟಿ20: ಭಾರತ ಮಹಿಳಾ

‘ಎ’ಗೆ 114 ರನ್ ಸೋಲು

ಮಕಾಯ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ‘ಎ’ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಭಾರತ ‘ಎ’ ತಂಡ 114 ರನ್‌ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಆಸೀಸ್‌ 2-0 ಅಂತರದಲ್ಲಿ ಗೆದ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 4 ವಿಕೆಟ್‌ಗೆ 187 ರನ್‌ ಕಲೆಹಾಕಿತು. ನಾಯಕಿ ಅಲೀಸಾ ಹೀಲಿ 44 ಎಸೆತಕ್ಕೆ 70 ರನ್‌ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ರಾದಾ ಯಾದವ್‌ ನಾಯಕತ್ವದ ಭಾರತ 15.1 ಓವರ್‌ಗಳಲ್ಲಿ 73 ರನ್‌ಗೆ ಆಲೌಟಾಯಿತು. ಕಿಮ್‌ ಗಾರ್ಥ್‌ 7 ರನ್‌ಗೆ 4 ವಿಕೆಟ್‌ ಪಡೆದರು. 3ನೇ ಪಂದ್ಯ ಭಾನುವಾರ ನಡೆಯಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಸ್ಸಾಂನಲ್ಲಿ ಇನ್ನು 18 ವರ್ಷ ಮೇಲಿನವರಿಗೆ ಆಧಾರ್‌ ಇಲ್ಲ
ಪರೀಕ್ಷಾ ಅಕ್ರಮ ವಿರುದ್ಧ 17ರಿಂದ ಕೈ ದೇಶವ್ಯಾಪಿ ಆಂದೋಲನ