ಇಂಡಿಯಾ ಕೂಟದ ಆಹ್ವಾನದ ಬೆನ್ನಲ್ಲೇ ಉಭಯ ಪಕ್ಷಗಳ ಹೇಳಿಕೆ ನೀಡಿದ್ದು, ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿ ಎನ್ಡಿಎ ಕೇಂದ್ರದಲ್ಲಿ ಅಧಿಕಾರ ರಚಿಸಲು ಹಾದಿ ಸುಗಮವಾಗಿದೆ
ನವದೆಹಲಿ: ಇಂಡಿಯಾ ಕೂಟದ ಭಾಗವಾಗುವಂತೆ ಆಹ್ವಾನ ಬಂದಿದೆ ಎಂಬ ವದಂತಿಗಳ ಬೆನ್ನಲ್ಲೇ, ನಮ್ಮ ಬೆಂಬಲ ಎನ್ಡಿಎಗೆ ಎಂದು ಟಿಡಿಪಿ ಮತ್ತು ಜೆಡಿಯು ಸ್ಪಷ್ಟಪಡಿಸಿವೆ. ಈ ಮೂಲಕ ಎನ್ಡಿಎ ಮೈತ್ರಿಕೂಟ ಅಚಲವಾಗಿದೆ ಎಂಬ ಸಂದೇಶ ರವಾನಿಸಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ‘ನಾವು ಎನ್ಡಿಎನಲ್ಲಿದ್ದೇವೆ. ಮುಂದೆಯೂ ಇರುತ್ತೇವೆ. ಕಳೆದ 5 ವರ್ಷಗಳಲ್ಲಿ ಆಂಧ್ರಪ್ರದೇಶ ನಷ್ಟ ಅನುಭವಿಸಿದೆ. ಅದನ್ನು ಸರಿಪಡಿಸುವ ಹೊಣೆ ನಮ್ಮ ಮುಂದಿದೆ’ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಜೆಡಿಯು ವಕ್ತಾರ ಕೆ.ಸಿ. ತ್ಯಾಗಿ ಕೂಡಾ ‘ನಿತೀಶ್ ಕುಮಾರ್ ನೇತೃತ್ವದಲ್ಲಿ ಎನ್ಡಿಎ ಮೈತ್ರಿಕೂಟದಲ್ಲೇ ಮುಂದುವರೆಯುವ ನಮ್ಮ ಭರವಸೆಯನ್ನು ನಾವು ಪುನರುಚ್ಚರಿಸುತ್ತೇವೆ’ ಎಂದು ಹೇಳಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.