ಉತ್ತರ ಪ್ರದೇಶದ ಸೀತಾಪುರದಲ್ಲಿ ಹಾಡಹಗಲೇ ದುಷ್ಕರ್ಮಿಗಳಿಂದ ಗುಂಡಿಕ್ಕಿ ಪತ್ರಕರ್ತ ಬಾಜಪೈ ಹತ್ಯೆ

KannadaprabhaNewsNetwork |  
Published : Mar 09, 2025, 01:49 AM ISTUpdated : Mar 09, 2025, 04:22 AM IST
ಹತ್ಯೆ | Kannada Prabha

ಸಾರಾಂಶ

ಉತ್ತರ ಪ್ರದೇಶದ ಸೀತಾಪುರದಲ್ಲಿ ಹಾಡಹಗಲೇ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೃತ ಪತ್ರಕರ್ತನನ್ನು ‘ದೈನಿಕ ಜಾಗರಣ್‌’ ವರದಿಗಾರ ರಾಘವೇಂದ್ರ ಬಾಜಪೈ ಎಂದು ಗುರುತಿಸಲಾಗಿದೆ.

ಸೀತಾಪುರ: ಉತ್ತರ ಪ್ರದೇಶದ ಸೀತಾಪುರದಲ್ಲಿ ಹಾಡಹಗಲೇ ಪತ್ರಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 

ಮೃತ ಪತ್ರಕರ್ತನನ್ನು ‘ದೈನಿಕ ಜಾಗರಣ್‌’ ವರದಿಗಾರ ರಾಘವೇಂದ್ರ ಬಾಜಪೈ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಮೇಲ್ಸೇತುವೆ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಪತ್ರಕರ್ತ ರಾಘವೇಂದ್ರ ಅವರನ್ನು ದುಷ್ಕರ್ಮಿಗಳು ಗುಂಡು ಹೊಡೆದು ಸಾಯಿಸಿದ್ದಾರೆ ಹಾಗೂ ಪರಾರಿಯಾಗಿದ್ದಾರೆ.

 ರಾಘವೇಂದ್ರ ಇತ್ತೀಚೆಗೆ ಕೆಲವು ಸುದ್ದಿಗಳನ್ನು ಪ್ರಕಟಿಸಿದ್ದರು, ಇದರಿಂದಾಗಿ ಕೆಲವು ದುಷ್ಟಶಕ್ತಿಗಳು ಕೋಪಗೊಂಡಿದ್ದವು ಎನ್ನಲಾಗಿದೆ. ಈ ಬಗ್ಗೆ ಎಲ್ಲ ಕೋನದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ