ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಹೇಳಿಕೆ : ನಟಿ ಕಸ್ತೂರಿ ಶಂಕರ್ ಬಂಧನ

KannadaprabhaNewsNetwork |  
Published : Nov 17, 2024, 01:15 AM ISTUpdated : Nov 17, 2024, 05:22 AM IST
ಕಸ್ತೂರಿ ಶಂಕರ್ | Kannada Prabha

ಸಾರಾಂಶ

ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಎಂದು ಹೇಳಿ ತೆಲುಗರ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳು ನಟಿ ಕಸ್ತೂರಿ ಶಂಕರ್ ಅವರನ್ನು ಶನಿವಾರ ಬಂಧಿಸಲಾಗಿದೆ.

ಚೆನ್ನೈ/ಹೈದರಾಬಾದ್‌: ತಮಿಳುನಾಡಿಗೆ ತೆಲುಗರು 300 ವರ್ಷಗಳ ಹಿಂದೆ ಬಂದಿದ್ದು ತಮಿಳುನಾಡಿನ ರಾಣಿಯರ ಸೇವೆ ಮಾಡಲು ಎಂದು ಹೇಳಿ ತೆಲುಗರ ಆಕ್ರೋಶಕ್ಕೆ ತುತ್ತಾಗಿದ್ದ ತಮಿಳು ನಟಿ ಕಸ್ತೂರಿ ಶಂಕರ್ ಅವರನ್ನು ಶನಿವಾರ ಬಂಧಿಸಲಾಗಿದೆ.

ಕಸ್ತೂರಿ ಹೇಳಿಕೆ ಖಂಡಿಸಿ ತೆಲುಗರು ಪ್ರತಿಭಟನೆ ನಡೆಸಿದ್ದರು ಹಾಗೂ ಅವರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ಅವರು ಒಮ್ಮೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರೂ ಸಮರ್ಥಿಸಿಕೊಂಡಿದ್ದರು. ಆದರೆ ಆಕ್ರೋಶ ತೀವ್ರಗೊಂಡ ಬಳಿಕ ಕ್ಷಮೆಯಾಚಿಸಿದ್ದರು. ‘ನನ್ನ ಮಾತು ಈಗ ಇರುವ ತಮಿಳುನಾಡಿನಲ್ಲಿನ ತೆಲುಗರನ್ನು ಉದ್ದೇಶಿಸಿ ಅಲ್ಲ. ಈ ಹಿಂದಿನ ಇತಿಹಾಸದ ಬಗ್ಗೆ ಮಾತನಾಡಿದ್ದೆ ಅಷ್ಟೆ. ಇದಕ್ಕಾಗಿ ಕ್ಷಮೆ ಕೋರುವೆ’ ಎಂದಿದ್ದರು. ಆದರೂ ಅವರ ವಿರುದ್ಧದ ಆಕ್ರೋಶ ತಣಿದಿರಲಿಲ್ಲ.

ಈ ನಡುವೆ, ಕೇಸು ದಾಖಲಾದ ಕಾರಣ ಕೆಲ ದಿನ ನಾಪತ್ತೆ ಆಗಿದ್ದ ಕಸ್ತೂರಿ ಅವರನ್ನು ಶನಿವಾರ ಚೆನ್ನೈ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ