ಜು.20ರಂದು ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಿ: ವಾಂಗ್ಚುಕ್‌ ಕರೆ

Published : Jul 17, 2026, 08:14 AM IST
Sonam Wangchuk

ಸಾರಾಂಶ

ನೀಟ್‌ ಪರೀಕ್ಷಾ ವೈಫಲ್ಯ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ 19 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್‌ಚುಕ್‌, ಜು.20ರ ಜಿರಳೆ ಪಕ್ಷದ ಸಂಸತ್‌ ಚಲೋ ಬೆಂಬಲಿಸಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.

ನವದೆಹಲಿ: ನೀಟ್‌ ಪರೀಕ್ಷಾ ವೈಫಲ್ಯ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ 19 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್‌ಚುಕ್‌, ಜು.20ರ ಜಿರಳೆ ಪಕ್ಷದ ಸಂಸತ್‌ ಚಲೋ ಬೆಂಬಲಿಸಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.  

ಅಂದು ಸಂಸತ್‌ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಅಂದೇ ಈ ಪ್ರತಿಭಟನೆ ನಡೆಯುವುದು ವಿಶೇಷವಾಗಿದೆ.

19 ದಿನದಿಂದ ವಾಂಗ್ಚುಕ್‌ ಉಪವಾಸ

ಈ ನಡುವೆ, 19 ದಿನದಿಂದ ವಾಂಗ್ಚುಕ್‌ ಉಪವಾಸನಿರತರಾಗಿದ್ದರೂ ಸರ್ಕಾರ ವಾಂಗ್ಚುಕ್ ಜತೆ ಮಾತನಾಡದೆ ಮೌನಕ್ಕೆ ಶರಣಾಗಿರುವುದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆರೋಗ್ಯ ಕ್ಷೀಣಿಸುತ್ತಿದ್ದರೂ ನಿರಶನ ಮುಂದುವರಿಸುತ್ತಿರುವ ಸೋನಂ ವಾಂಗ್ಚುಕ್‌ ಪರ ಬೆಂಬಲವೂ ಹೆಚ್ಚಾಗತೊಡಗಿದೆ.

ವಿಡಿಯೋ ಸಂದೇಶ ಬಿಡುಗಡೆ

ಶುಕ್ರವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ‘ನಾನು ಉದ್ದೇಶ ಈಡೇರದೇ ಉಪವಾಸ ಅರ್ಧಕ್ಕೇ ನಿಲ್ಲಿಸಿದರೆ ಸರಿ ಇರುವುದಿಲ್ಲ. ಹೋರಾಟ ನಿಲ್ಲಿಸಿದರೆ ಪ್ರತಿಭಟನಾಕಾರರು ಸುಮ್ಮನೇ ಪ್ರತಿಭಟಿಸಿ ಎದ್ದು ಹೋಗುತ್ತಾರೆ ಎನ್ನುವ ಸಂದೇಶ ಸರ್ಕಾರಕ್ಕೆ ಹೋಗುತ್ತದೆ. ಅದರ ಬದಲು ಜು.20ರಂದು ಜಿರಳೆ ಪಕ್ಷ ಕರೆ ನೀಡಿರುವ ಸಂಸತ್‌ ಚಲೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ, ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಹೋರಾಟ ಬಲಪಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

1 ವರ್ಷದಲ್ಲೇ ಇಸ್ರೋಗೆ 120 ವಿಜ್ಞಾನಿಗಳಿಂದ ರಾಜೀನಾಮೆ!
ಪಾಸ್‌ಪೋರ್ಟೇ ಇಲ್ಲದಿದ್ದರೂ ಮೈಸೂರಿನಲ್ಲಿದ್ದ ಅಮೆರಿಕನ್‌!