ದೀದಿ ಅವಧಿಯಲ್ಲಿ ಫಲಾನುಭವಿಗಳ ಹಣ ಪೀಕಿದ್ದ
ಇತ್ತೀಚೆಗೆ ಮಮತಾ ನಿರ್ಗಮಿಸಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯದಲ್ಲಿ ಅನೇಕ ಟಿಎಂಸಿಗರು ತಾವು ಮಮತಾ ಅವಧಿಯಲ್ಲಿ ಪೀಕಿದ್ದ ಭ್ರಷ್ಟಾಚಾರದ ಹಣ ಹಿಂತಿರುಗಿಸಿದ್ದರು.
==ಬಂಧನ ಭೀತಿಯಿಂದ ಸೀರೆ ರಾಶೀ ಅಡಿ ಅವಿತ ಟಿಎಂಸಿ ನಾಯಕ ಚಕ್ರವರ್ತಿ ಸೆರೆ
ಕೋಲ್ಕತಾ: ಅಕ್ರಮವಾಗಿ ಲಂಚ ಪಡೆದ ಆರೋಪದಲ್ಲಿ ಬಂಧಿಸಲ್ಪಡುವ ಭೀತಿಯಿಂದ ಟಿಎಂಸಿ ನಾಯಕ ಬ್ರಹ್ಮಾನಂದ ಚಕ್ರವರ್ತಿ, ಬಟ್ಟೆ ಅಂಗಡಿಯೊಂದರ ಗೋದಾಮಿನಲ್ಲಿ ಸೀರೆ ರಾಶಿಗಳ ಅಡಿಯಲ್ಲಿ ಅವಿತಿದ್ದ ಘಟನೆ ನಡೆದಿದೆ. ಆದರೆ ಆ ಸ್ಥಳ ಪತ್ತೆ ಮಾಡಿದ ಪೊಲೀಸರು, ಚರ್ಕ್ರವರ್ತಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಸರ್ಕಾರದ ವಸತಿ ಯೋಜನೆ ನಿಧಿಯ ಹಣದಲ್ಲಿ ಅದರ ಫಲಾನುಭವಿಗಳಿಂದ ಪಾಲನ್ನು ಕೇಳುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು, ಪ್ರಕರಣ ದಾಖಲಾಗಿತ್ತು. ತಾವು ಬಂಧಿಸಲ್ಪಡುವುದು ಖಚಿತ ಎಂದರಿತ ಚಕ್ರವರ್ತಿ, ಹತ್ತಿರದ ಸೀರೆ ಅಂಗಡಿಯನ್ನು ಹೊಕ್ಕು, ಸೀರೆ ಅಟ್ಟಿಗಳನ್ನು ಮೈಮೇಲೆಳೆದುಕೊಂಡು ಕುಳಿತಿದ್ದರು. ಆದರೆ ಅಲ್ಲಿಗೆ ಬಂದ ಪೊಲೀಸರಿಗೆ ಸೀರೆಗಳನ್ನು ಸೆರಿಸಿ ಚಕ್ರವರ್ತಿಯನ್ನು ಹಿಡಿಯುವುದರಲ್ಲಿ ಹೆಚ್ಚು ಸಮಯ ಹಿಡಿಸಲಿಲ್ಲ.-
ಟಿಎಂಸಿ ಕೌನ್ಸಿಲರ್ಸ್ಥಳೀಯರಿಂದ ಅಕ್ರಮವಾಗಿ ವಸೂಲಿ ಮಾಡಿದ್ದ 1 ಲಕ್ಷ ರು.ವನ್ನು ಮಠಭಂಗ ಪುರಸಭೆಯ ಕೌನ್ಸಿಲರ್ ಆಗಿರುವ ಟಿಎಂಸಿಯ ಕಕೋಲಿ ಘೋಷ್ ಮರಳಿಸಿದ್ದಾರೆ. ಉಳಿದ ಹಣವನ್ನೂ ಕಂತುಗಳಲ್ಲಿ ನೀಡುವುದಾಗಿ ಭರವಸೆ ನೀಡಿದ್ದಾರೆ.