ದ್ರಾವಿಡ ಹೆಸರಿನಲ್ಲಿ ಡಿಎಂಕೆ ರಾಜ್ಯದ ಲೂಟಿ ಮಾಡುತ್ತಿದೆ - ತಮಿಳ್ನಾಡಿನ ದೊಡ್ಡ ಶತ್ರು : ನಟ ವಿಜಯ್‌

KannadaprabhaNewsNetwork |  
Published : Oct 28, 2024, 01:16 AM ISTUpdated : Oct 28, 2024, 04:26 AM IST
ವಿಜಯ್‌ | Kannada Prabha

ಸಾರಾಂಶ

 ‘ದ್ರಾವಿಡ ಹೆಸರಿನಲ್ಲಿ ಡಿಎಂಕೆ ರಾಜ್ಯದ ಲೂಟಿ ಮಾಡುತ್ತಿದೆ. ಈ ರಾಜ್ಯದ ದೊಡ್ಡ ಶತ್ರುವೇ ಡಿಎಂಕೆ’ ಎಂದು ವಾಗ್ದಾಳಿ ನಡೆಸಿದ್ದಾರೆ.ಅಲ್ಲದೆ, ‘ನೇರ ಆಡಳಿತಕ್ಕೆ ಅಡ್ಡಿ ಆಗಿರುವ ರಾಜ್ಯಪಾಲ ಎಂಬ ಹುದ್ದೆಯನ್ನೇ ತೆಗೆದುಹಾಕಬೇಕು’ ಎಂದು  ಖ್ಯಾತ ತಮಿಳು ನಟ ವಿಜಯ್‌ ಆಗ್ರಹಿಸಿದ್ದಾರೆ.

ಚೆನ್ನೈ: ‘ರಾಜಕೀಯ ಎಂಬುದು ಸಿನಿಮಾ ಅಖಾಡವಲ್ಲ, ಅದು ಯುದ್ಧದ ಅಖಾಡ. ರಾಜಕೀಯಕ್ಕೆ ನಾನು ಹೊಸಬನಾದರೂ ಮುಗ್ಧ ಬಾಲಕನಲ್ಲ. ನಾನು ಹಾವಿನ ಜತೆ ಆಟವಾಡುವ ಬಾಲಕ’ ಎಂದಿರುವ ಖ್ಯಾತ ತಮಿಳು ನಟ ಹಾಗೂ ನೂತನ ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್‌, ‘ದ್ರಾವಿಡ ಹೆಸರಿನಲ್ಲಿ ಡಿಎಂಕೆ ರಾಜ್ಯದ ಲೂಟಿ ಮಾಡುತ್ತಿದೆ. ಈ ರಾಜ್ಯದ ದೊಡ್ಡ ಶತ್ರುವೇ ಡಿಎಂಕೆ’ ಎಂದು ವಾಗ್ದಾಳಿ ನಡೆಸಿದ್ದಾರೆ.ಅಲ್ಲದೆ, ‘ನೇರ ಆಡಳಿತಕ್ಕೆ ಅಡ್ಡಿ ಆಗಿರುವ ರಾಜ್ಯಪಾಲ ಎಂಬ ಹುದ್ದೆಯನ್ನೇ ತೆಗೆದುಹಾಕಬೇಕು’ ಎಂದು ಆಗ್ರಹಿಸಿದ್ದಾರೆ.

ಪಕ್ಷ ಸ್ಥಾಪನೆ ಬಳಿಕ ಇದೇ ಮೊದಲ ಬಾರಿ ವಿಲ್ಲುಪುರಂನಲ್ಲಿ ಪಕ್ಷದ ಮೊದಲ ರಾಜ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಪ್ರತ್ಯೇಕ ದ್ರಾವಿಡವಾದ ಮತ್ತು ತಮಿಳುವಾದದ ಪ್ರತಿಪಾದಕನಲ್ಲ. ಇವೆರಡೂ ನಮ್ಮ ನೆಲದ 2 ಕಣ್ಣುಗಳು. ಸಾಮಾಜಿಕ ನ್ಯಾಯದ ಪರ ನಾವು ಕೆಲಸ ಮಾಡಬೇಕು’ ಎಂದರು.

‘ಒಂದು ಕುಟುಂಬವು ಭೂಗತ ಚಟುವಟಿಕೆ ಮೂಲಕ ರಾಜ್ಯವನ್ನು ಲೂಟಿ ಮಾಡುತ್ತಿದೆ. ಇದು ದ್ರಾವಿಡ ಮಾದರಿ ಆಡಳಿತದ ನೆಪದಲ್ಲಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ’ ಎಂದು ಆರೋಪಿಸಿದ ಅವರು, ‘ಇಂಥದ್ದಕ್ಕೆ ಅಂತ್ಯ ಹಾಡಲೆಂದೇ ನಾನು ನಟನೆ ಬಿಟ್ಟು ರಾಜಕೀಯಕ್ಕೆ ಬಂದಿದ್ದೇನೆ. ಪೆರಿಯಾರ್ ಹಾಗೂ ಕಾಮರಾಜ್‌ ತತ್ವ ಅಳವಡಿಸಿಕೊಂಡ ಪಕ್ಷ ನಮ್ಮದು’ ಎಂದರು.

ಇದೇ ವೇಳೆ, ‘ರಾಜ್ಯದಲ್ಲಿ ಎಲ್ಲ ಕೋರ್ಟುಗಳಲ್ಲೂ ಅಧಿಕೃತವಾಗಿ ತಮಿಳು ಬಳಕೆ ಆಗಬೇಕು’ ಎಂದು ಆಗ್ರಹಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸುಪ್ರೀಂನಲ್ಲಿ ವಕೀಲೆ ಆದ ಬಂಗಾಳದ ಮುಖ್ಯಮಂತ್ರಿ ದೀದಿ!
7 ಲಕ್ಷ ಸೇಬು ಮರ ಉಳಿಸಲು ಚಿಪ್ಕೋ ಚಳವಳಿ : 3 ಕಾಶ್ಮೀರ ರೈಲ್ವೆಗಳ ರದ್ದು