ಈಗ ಖಾಲಿ ಆದ ಆಸನಗಳು 2024ರಲ್ಲಿ ಬಿಜೆಪಿಗರಿಂದ ಭರ್ತಿ: ಮೋದಿ

KannadaprabhaNewsNetwork |  
Published : Dec 20, 2023, 01:15 AM IST
ನರೇಂದ್ರ ಮೋದಿ | Kannada Prabha

ಸಾರಾಂಶ

ಚುನಾವಣೆ ಸೋಲಿನ ಹತಾಶೆಯಿಂದ ಸದನಕ್ಕೆ ಕಾಂಗ್ರೆಸ್‌ನಿಂದ ಅಡ್ಡಿಯಅಗುತ್ತಿದೆ, ಕೆಲವು ಪಕ್ಷಗಳು ಭದ್ರತಾ ಲೋಪಕ್ಕೆ ಬೆಂಬಲಿಸುವ ರೀತಿ ನಡೆಯುತ್ತಿವೆ, ಭದ್ರತಾ ಲೋಪಕ್ಕೆ ಬೆಂಬಲಿಸುವುದೂ ಭದ್ರತಾ ಲೋಪಕ್ಕೆ ಸಮವಾದಂತೆ, ಬಿಜೆಪಿಯನ್ನು ಕಿತ್ತೊಗೆಯುವುದು ಇಂಡಿಯಾ ಕೂಟದ ಧ್ಯೇಯವಾದರೆ, ರಾಷ್ಟ್ರವನ್ನು ಅಭಿವೃದ್ಧಿ ಮಾಡುವುದು ಬಿಜೆಪಿ ಧ್ಯೇಯವಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಚುನಾವಣೆ ಸೋಲಿನ ಹತಾಶೆಯಿಂದ ಸದನಕ್ಕೆ ಕಾಂಗ್ರೆಸ್‌ನಿಂದ ಅಡ್ಡಿಯಅಗುತ್ತಿದೆ, ಕೆಲವು ಪಕ್ಷಗಳು ಭದ್ರತಾ ಲೋಪಕ್ಕೆ ಬೆಂಬಲಿಸುವ ರೀತಿ ನಡೆಯುತ್ತಿವೆ, ಭದ್ರತಾ ಲೋಪಕ್ಕೆ ಬೆಂಬಲಿಸುವುದೂ ಭದ್ರತಾ ಲೋಪಕ್ಕೆ ಸಮವಾದಂತೆ, ಬಿಜೆಪಿಯನ್ನು ಕಿತ್ತೊಗೆಯುವುದು ಇಂಡಿಯಾ ಕೂಟದ ಧ್ಯೇಯವಾದರೆ, ರಾಷ್ಟ್ರವನ್ನು ಅಭಿವೃದ್ಧಿ ಮಾಡುವುದು ಬಿಜೆಪಿ ಧ್ಯೇಯವಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.ನವದೆಹಲಿ: ‘ಪಂಚರಾಜ್ಯ ಚುನಾವಣೆಯಲ್ಲಿ ಎದುರಿಸಿದ ಸೋಲಿನ ಹತಾಶೆಯಿಂದ ಪ್ರತಿಪಕ್ಷಗಳು ಸದನದಲ್ಲಿ ಕಾರ್ಯಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಅಲ್ಲದೆ, 141 ಸಂಸದರು ಸದನದಿಂದ ಅಮಾನತಾಗಿರುವುದನ್ನು ಉಲ್ಲೇಖಿಸಿರುವ ಅವರು, ‘ಈಗ ಖಾಲಿ ಆಗಿರುವ ಆಸನಗಳನ್ನು ಬಿಜೆಪಿ ಸಂಸದರು 2024ರಲ್ಲಿ ಅಲಂಕರಿಸಲಿದ್ದಾರೆ. ಈ ಮೂಲಕ ಮುಂದಿನ ಚುನಾವಣೆ ಬಳಿಕ ವಿಪಕ್ಷಗಳು ಮತ್ತಷ್ಟು ಬಲಹೀನ ಆಗಲಿವೆ’ ಎಂದಿದ್ದಾರೆ.ಮಂಗಳವಾರ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆಯ ಸೋಲಿನಿಂದ ಹತಾಶಗಿಂಡು, ಪ್ರತಿಪಕ್ಷಗಳು ಸದನದಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಬೆಂಬಲಿಸುವ ರೀತಿ ನಡೆದುಕೊಳ್ಳುತ್ತಿವೆ. ಭದ್ರತಾ ಲೋಪವು ಗಂಭೀರ ವಿಷಯವಾಗಿದ್ದು, ಅದನ್ನು ಬೆಂಬಲಿಸುವುದೂ ಸಹ ಭದ್ರತಾ ಲೋಪ ಮಾಡುವುದಕ್ಕೆ ಸಮನಾಗುತ್ತದೆ. ಇದರಿಂದಾಗಿ ಯುವಜನತೆ ದಾರಿ ತಪ್ಪುತ್ತಿದ್ದಾರೆ’ ಎಂದು ಕಿಡಿಕಾರಿದರು.

‘2014ರಲ್ಲಿ ಪ್ರಥಮ ಮತದಾನ ಮಾಡಿದವರು ಭ್ರಷ್ಟಾಚಾರ ಮತ್ತು ನಿರಾಶಾವಾದವನ್ನು ನೋಡಿರಲಿಲ್ಲ. ಆದರೆ ಇಂತಹ ಕೃತ್ಯವು ಹೊಸ ಮತದಾರರನ್ನು ಸಹ ನಕಾರಾತ್ಮಕ ರಾಜಕಾರಣಕ್ಕೆ ಸೆಳೆಯುತ್ತದೆ. ಈ ನಕಾರಾತ್ಮಕ ರಾಜಕಾರಣದ ಮೂಲ ಉದ್ದೇಶ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದಾಗಿದೆ. ಅದಕ್ಕಾಗಿ ಆರೋಗ್ಯ ಕ್ಷೀಣಿಸುತ್ತಿದ್ದವರು ಸಹ ಪುಟಿದೆದ್ದು ಕುಳಿತಿದ್ದಾರೆ. ಆದರೆ ಬಿಜೆಪಿಯ ಧ್ಯೇಯ ರಾಷ್ಟ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವುದಾಗಿದೆ. ಹಾಗಾಗಿ ಸಂಸತ್‌ ಭವನದಲ್ಲಿ ಈಗ ಖಾಲಿಯಿರುವ ಎಲ್ಲ ಸ್ಥಾನಗಳನ್ನು 2024ರಲ್ಲಿ ಬಿಜೆಪಿಗರು ಅಲಂಕರಿಸಲಿದ್ದಾರೆ’ ಎಂದರು.ಅಲ್ಲದೆ ಯುವಜನತೆಗೆ ರಜೆ ಇರುವ ಸಮಯದಲ್ಲಿ ರಾಷ್ಟ್ರದ ಮೂಲೆಮೂಲೆಗೂ ತೆರಳಿ ಅಭಿವೃದ್ಧಿಯ ಪಥವನ್ನು ಅವರಿಗೆ ಮನದಟ್ಟು ಮಾಡಿಸಬೇಕು ಎಂದು ಸಮಿತಿಯ ಸದಸ್ಯರನ್ನು ಕೋರಿದರು.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ : ಕಮಲ್‌