ನಮೋ ಮೇಳದಲ್ಲಿ ಶರದ್‌, ಅಜಿತ್‌, ಶಿಂಧೆ, ಫಡ್ನವೀಸ್‌ ಸಮ್ಮಿಲನ

KannadaprabhaNewsNetwork | Updated : Mar 03 2024, 09:29 AM IST

ಸಾರಾಂಶ

ಅಪರೂಪದ ಘಟನೆಗೆ ಸಾಕ್ಷಿಯಾದ ಮಹಾರಾಷ್ಟ್ರ ಉದ್ಯೋಗಮೇಳದ ಉದ್ಘಾಟನಾ ಕಾರ್ಯಕ್ರಮ ರಾಜ್ಯದ ನಾಲ್ಕು ಪ್ರಮುಖ ರಾಜಕೀಯ ನಾಯಕರು ಒಂದೇ ವೇದಿಕೆಯಲ್ಲಿ ಸಮಾಗಮವಾಗುವಂತೆ ಮಾಡಿದೆ.

ಬಾರಾಮತಿ: ರಾಜಕೀಯ ವೈರತ್ವದ ನಡುವೆಯೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಉಪಮುಖ್ಯಮಂತ್ರಿಗಳಾದ ಅಜಿತ್‌ ಪವಾರ್‌ ಮತ್ತು ದೇವೇಂದ್ರ ಫಡ್ನವೀಸ್‌ ಹಾಗೂ ಎನ್‌ಸಿಪಿ ಶರದ್‌ಚಂದ್ರ ಪವಾರ್‌ ವರಿಷ್ಠ ಶರದ್‌ ಪವಾರ್‌ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದಾರೆ.

ನಗರದಲ್ಲಿ ನಡೆದ ನಮೋ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮ ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಇದಕ್ಕೂ ಮೊದಲು ಶರದ್‌ ಪವಾರ್‌ ಅವರನ್ನು ಆಹ್ವಾನಿತರ ಪಟ್ಟಿಯಿಂದ ಕೈಬಿಟ್ಟ ಕಾರಣ ಪ್ರತಿಪಕ್ಷಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. 

ಆ ಬಳಿಕ ಮೂವರನ್ನೂ ಶರದ್‌ ಭೋಜನಕ್ಕೆ ಆಹ್ವಾನಿಸಿದ್ದರೂ ಬಿಡುವಿಲ್ಲದ ವೇಳಾಪಟ್ಟಿಯ ಕಾರಣ ನೀಡಿ ಗೈರಾಗಿದ್ದರು. ಆದರೆ ಈಗ ಒಂದೇ ವೇದಿಕೆಯಲ್ಲಿ ಎಲ್ಲರೂ ಕಾಣಿಸಿಕೊಂಡಿದ್ದಾರೆ.

ಅಜಿತ್ ಪವಾರ್‌ ಎನ್‌ಸಿಪಿ ಬಿಟ್ಟ ನಂತರ ಶರದ್‌-ಅಜಿತ್‌ ಸಂಬಂಧ ಹಳಸಿದೆ.

Share this article