ಬೀಡ್/ಅಹ್ಮದ್ನಗರ: 26/11 ಮುಂಬೈ ಬಾಂಬ್ ದಾಳಿಯಲ್ಲಿ ಉಗ್ರ ಕಸಬ್ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆಯನ್ನು ಕೊಂದಿಲ್ಲ. ಅವರನ್ನು ಕೊಂದಿದ್ದು ಆರೆಸ್ಸೆಸ್ ನಂಟಿನ ಪೊಲೀಸ್ ಅಧಿಕಾರಿ ಎಂಬ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ವಿಜಯ ವಡೆಟ್ಟಿವಾರ್ ಹೇಳಿಕೆಗೆ ಪ್ರಧಾನಿ ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ‘ಅಂದು ದಾಳಿ ಮಾಡಿದ 10 ಪಾಕ್ ಉಗ್ರರ ಜೊತೆ ಕಾಂಗ್ರೆಸ್ಗೆ ಸಂಬಂಧ ಇದೆ ಎಂಬ ಭಾವನೆ ಮೂಡುತ್ತಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, ‘ರಾಹುಲ್ ಗಾಂಧಿ ಪ್ರಧಾನಿ ಆಗಬೇಕೆಂದು ಕಾಂಗ್ರೆಸ್ನ ಬಿ ಟೀಂ ಪಾಕಿಸ್ತಾನದಲ್ಲಿ ಕಾಯುತ್ತಿದೆ’ ಎಂದೂ ಕಿಡಿಕಾರಿದರು.
ಇದೇ ವೇಳೆ ಉಗ್ರರ ಮೇಲೆ ದಿಲ್ಲಿಯ ಬಾಟ್ಲಾ ಹೌಸ್ ಎಂಕೌಂಟರ್ ನಡೆದಾಗ ಒಬ್ಬರು ಅತ್ತಿದ್ದರು ಎಂದು ಕಾಂಗ್ರೆಸ್ ನಾಯಲಿ ಸೋನಿಯಾ ಗಾಂಧಿ ಅವರನ್ನು ಮೋದಿ ಕುಟುಕಿದರು.ಅಲ್ಲದೆ, ವೋಟ್ ಜಿಹಾದ್ ನಡೆಸಬೇಕು ಎಂಬ ಇಂಡಿಯಾ ಕೂಟದ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಮೋದಿ, ಜನರು ವೋಟ್ ಜಿಹಾದ್ ಬೇಕೋ ರಾಮರಾಜ್ಯ ಬೇಕೋ ನಿರ್ಧರಿಸಬೇಕು ಎಂದು ಮನವಿ ಮಾಡಿದರು.