ನವೀನ್‌ ಜಿಂದಾಲ್‌, ರಂಜಿತ್‌ ಚೌಟಾಲಾ ಬಿಜೆಪಿಗೆ

KannadaprabhaNewsNetwork |  
Published : Mar 25, 2024, 01:45 AM ISTUpdated : Mar 25, 2024, 03:22 PM IST
ಬಿಜೆಪಿ | Kannada Prabha

ಸಾರಾಂಶ

ಲೋಕ ಸಮರಕ್ಕೂ ಮುನ್ನ ಕೈಗೆ ಹಿನ್ನಡೆಯಾಗಿದ್ದು, ನವೀನ್‌ ಜಿಂದಾಲ್‌ ಮತ್ತು ರಂಜಿತ್‌ ಚೌಟಾಲಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ನವದೆಹಲಿ: ಹರ್ಯಾಣದ ಕುರುಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಸಂಸದರಾಗಿದ್ದ ಖ್ಯಾತ ಉದ್ಯಮಿ ನವೀನ್ ಜಿಂದಾಲ್ ಅವರು ಕಾಂಗ್ರೆಸ್ ತೊರೆದು ಭಾನುವಾರ ಬಿಜೆಪಿ ಸೇರಿದ್ದಾರೆ. 

ಇದರಿಂದಾಗಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರುವ ಯುವ ನಾಯಕರ ಸರಣಿ ಮುಂದುವರಿದುದ್ದು, ಲೋಕಸಭೆ ಚುನಾವಣೆಗೂ ಮುನ್ನ ಮಲ್ಲಿಕಾರ್ಜುನ ಖರ್ಗೆ ಪಡೆಗೆ ದೊಡ್ಡ ಹಿನ್ನಡೆಯಾಗಿದೆ.

ಇದೇ ವೇಳೆ, ಹರ್ಯಾಣದ ಚೌಟಾಲಾ ಕುಟುಂಬದ ಹಿರಿಯ ಸದಸ್ಯ ಹಾಗೂ ಮಾಜಿ ಸಚಿವ ರಂಜಿತ್‌ ಚೌಟಾಲಾ ಅವರೂ ಬಿಜೆಪಿ ಸೇರಿದ್ದಾರೆ. ಅವರು ಹರ್ಯಾಣದ ಹಿಸಾರ್‌ನಿಂದ ಬಿಜೆಪಿ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!