ಉತ್ತರ ಭಾರತೀಯರಿಗೆ ನಾಳೆಯಿಂದ ಅಶುಭ ಖಾರ್ ಮಾಸ
ಸದ್ಯಕ್ಕೆ ನಡ್ಡಾ ಬಳಿ ತರಬೇತಿ । ಮಧ್ಯಂತರ ಅವಧಿಗೆ ನೇಮಕನವದೆಹಲಿ: ಬಿಜೆಪಿ ದೀಢೀರನೇ ಏಕೆ ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡಿತು ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಬಿಜೆಪಿ ನಾಯಕರ ಪ್ರಕಾರ, ಕಾರ್ಯಕಾರಿ ಅಧ್ಯಕ್ಷರ ನೇಮಕವು ಮಧ್ಯಂತರ ವ್ಯವಸ್ಥೆಯಾಗಿದ್ದು. ಜ.14ರ ಮಕರ ಸಂಕ್ರಮಣದ ನಂತರ ನಿತಿನ್ ಕಾಯಂ ಅಧ್ಯಕ್ಷರಾಗುವ ನಿರೀಕ್ಷೆಯಿದೆ.‘ಹಿಂದುಗಳು ಅಶುಭವೆಂದು ಪರಿಗಣಿಸುವ 1 ತಿಂಗಳ ಅವಧಿಯಾದ ಖಾರ್ ಮಾಸ ಮಂಗಳವಾರದಿಂದ ಪ್ರಾರಂಭವಾಗುತ್ತದೆ. ನಿನ್ನೆ ನಿತಿನ್ ಅವರನ್ನು ಈ ಮಾಸ ಆರಂಭಕ್ಕೂ ಮುನ್ನವೇ ತರಾತುರಿಯಲ್ಲಿ ಈಗ ನೇಮಿಸಲಾಗಿದೆ. ಈ ಮಾಸ ಜ.14ರ ಮಕರ ಸಂಕ್ರಾಂತಿಯಂದು ಮುಗಿಯಲಿದೆ. ನಂತರ ಹೊಸ ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗಬಹುದು. ಅಲ್ಲಿಯವರೆಗೂ ನಡ್ಡಾ ಅವರ ಬಳಿ ನಿತಿನ್ ನಬೀನ್ ತರಬೇತಿ ಪಡೆಯಲಿದ್ದಾರೆ. ಈ ಹಿಂದೆ ಅಮಿತ್ ಶಾ ಬಳಿ ನಡ್ಡ ಕೂಡ ಇದೇ ರೀತಿ ತರಬೇತಿ ಪಡೆದಿದ್ದರು’ ಎಂದು ಅವು ಹೇಳಿವೆ.
ಬಿಜೆಪಿ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆ ಜ.14ರ ನಂತರ 4 ದಿನ ಕಾಲ ನಡೆಯಬಹುದು ಎಂದು ಅವು ತಿಳಿಸಿವೆ.==
ಪಿಟಿಐ ನವದೆಹಲಿಭಾನುವಾರ ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿಹಾರ ಸಚಿವ ನಿತಿನ್ ನಬೀನ್ ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದರು.
ಬಿಹಾರಕ್ಕೆ ಅಧ್ಯಕ್ಷ ನೇಮಕ: