ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕೇರಳದ ಪದ್ಮನಾಭ ದೇಗುಲದಲ್ಲಿ 270 ವರ್ಷ ಬಳಿಕ ಮಹಾಕುಂಭಾಭಿಷೇಕ

KannadaprabhaNewsNetwork | Published : Jun 9, 2025 12:34 AM

ಕೇರಳದ ಪ್ರಸಿದ್ಧ ಪದ್ಮನಾಭಸ್ವಾಮಿ ದೇಗುಲದಲ್ಲಿ 270 ವರ್ಷಗಳ ಬಳಿಕ ಅದ್ಧೂರಿಯಾಗಿ ಭಾನುವಾರ ಮಹಾ ಕುಂಭಾಭಿಷೇಕ ನಡೆದಿದ್ದು, 2 ಶತಮಾನಕ್ಕೂ ಅಧಿಕ ವರ್ಷದ ಬಳಿಕ ನಡೆದ ಅಷ್ಟಬಂಧ ಕಲಶ ಧಾರ್ಮಿಕ ಆಚರಣೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು.

ತಿರುವನಂತಪುರಂ: ಕೇರಳದ ಪ್ರಸಿದ್ಧ ಪದ್ಮನಾಭಸ್ವಾಮಿ ದೇಗುಲದಲ್ಲಿ 270 ವರ್ಷಗಳ ಬಳಿಕ ಅದ್ಧೂರಿಯಾಗಿ ಭಾನುವಾರ ಮಹಾ ಕುಂಭಾಭಿಷೇಕ ನಡೆದಿದ್ದು, 2 ಶತಮಾನಕ್ಕೂ ಅಧಿಕ ವರ್ಷದ ಬಳಿಕ ನಡೆದ ಅಷ್ಟಬಂಧ ಕಲಶ ಧಾರ್ಮಿಕ ಆಚರಣೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಸಾಮಾನ್ಯವಾಗಿ 12 ವರ್ಷಕ್ಕೊಮ್ಮೆ ಕುಂಭಾಬಿಷೇಕ ಮತ್ತು 100 ವರ್ಷಕ್ಕೊಮ್ಮೆ ಅಷ್ಟಬಂಧ ನಡೆಸಲಾಗುತ್ತದೆ. ಆದರೆ ಇತ್ತೀಚಿನ ಪರಿಶೀಲನೆ ವೇಳೆ ದೇಗುಲದ ಹಲವು ಮೂರ್ತಿಗಳು ಭಗ್ನಗೊಂಡಿದ್ದು ಕಂಡುಬಂದಿತ್ತು. ಹೀಗಾಗಿ ಹೊಸದಾಗಿ ಅಷ್ಟಬಂಧ ನಡೆಸಿ, ಕುಂಭಾಬಿಷೇಕ ನಡೆಸಲು ಉದ್ದೇಶಿಸಲಾಗಿತ್ತು. ಇಂಥ ಪ್ರಕ್ರಿಯೆ ಈ ಹಿಂದೆ 270 ವರ್ಷಗಳ ಹಿಂದೆ ನಡೆದಿತ್ತು. ಇದೀಗ ಹಲವು ಹೊಸ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿ ಬಳಿಕ ಕುಂಭಾಬಿಷೇಕ ನಡೆಸಲಾಗಿದೆ.

==

ಬಕ್ರೀದ್‌ ದಿನ ಅಲ್ಲಾಗಾಗಿ ಕತ್ತು ಸೀಳಿಕೊಂಡು ಯುಪಿ ವ್ಯಕ್ತಿ ಪ್ರಾಣತ್ಯಾಗ

ದೇವರಿಯಾ (ಉತ್ತರ ಪ್ರದೇಶ): ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅಲ್ಲಾ ಮತ್ತು ಪ್ರವಾದಿ ಮೊಹಮ್ಮದ್ ಪೈಗಂಬರರಿಗಾಗಿ ಪ್ರಾಣತ್ಯಾಗ ಮಾಡುವುದಕ್ಕಾಗಿ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ 60 ವರ್ಷದ ವ್ಯಕ್ತಿಯೊಬ್ಬ ಚಾಕುವಿನಿಂದ ತನ್ನ ಕತ್ತನ್ನು ಸೀಳಿಕೊಂಡು ಜೀವಬಿಟ್ಟ ದಾರುಣ ಘಟನೆ ಶನಿವಾರ ನಡೆದಿದೆ. ಅಲ್ಲಾ ಮತ್ತು ಪ್ರವಾದಿ ಪೈಗಂಬರರಿಗಾಗಿ ಪ್ರಾಣತ್ಯಾಗ ಮಾಡುತ್ತಿರುವುದಾಗಿ ಹೇಳಿ ಆತ ಪ್ರಾಣ ಬಿಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಆ ಬಗ್ಗೆ ಯಾವುದೇ ದಾಖಲೆ ದೊರೆತಿಲ್ಲ. ಮನೆಯ ಸಮೀಪದ ಗುಡಿಸಲಿನಲ್ಲಿ ಚಾಕುವಿನಿಂದ ಕತ್ತನ್ನು ಸೀಳಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಶನಿವಾರ ಬೆಳಿಗ್ಗೆ 10 ಗಂಟೆಗೆ ಸುಲ್ತಾನ್ ಸೈಯದ್ ಮಖ್ದೂಮ್ ಅಶ್ರಫ್ ಷಾ ಅವರ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಮನೆಗೆ ವಾಪಸಾದರು. ಮನೆಗೆ ಬಂದ ತಕ್ಷಣ ಪಕ್ಕದ ಗುಡಿಸಲಿಗೆ ಹೋದರು. ಆ ಬಳಿಕ ಅವರು ಕೂಗಾಟ ಕೇಳಿತು. ಹೋಗಿ ನೋಡುವಷ್ಟರಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದರು’ ಎಂದು ಮೃತನ ಪತ್ನಿ ತಿಳಿಸಿದ್ದಾರೆ.

ದೇವರಿಯಾ (ಉತ್ತರ ಪ್ರದೇಶ): ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅಲ್ಲಾ ಮತ್ತು ಪ್ರವಾದಿ ಮೊಹಮ್ಮದ್ ಪೈಗಂಬರರಿಗಾಗಿ ಪ್ರಾಣತ್ಯಾಗ ಮಾಡುವುದಕ್ಕಾಗಿ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ 60 ವರ್ಷದ ವ್ಯಕ್ತಿಯೊಬ್ಬ ಚಾಕುವಿನಿಂದ ತನ್ನ ಕತ್ತನ್ನು ಸೀಳಿಕೊಂಡು ಜೀವಬಿಟ್ಟ ದಾರುಣ ಘಟನೆ ಶನಿವಾರ ನಡೆದಿದೆ. ಅಲ್ಲಾ ಮತ್ತು ಪ್ರವಾದಿ ಪೈಗಂಬರರಿಗಾಗಿ ಪ್ರಾಣತ್ಯಾಗ ಮಾಡುತ್ತಿರುವುದಾಗಿ ಹೇಳಿ ಆತ ಪ್ರಾಣ ಬಿಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಆ ಬಗ್ಗೆ ಯಾವುದೇ ದಾಖಲೆ ದೊರೆತಿಲ್ಲ. ಮನೆಯ ಸಮೀಪದ ಗುಡಿಸಲಿನಲ್ಲಿ ಚಾಕುವಿನಿಂದ ಕತ್ತನ್ನು ಸೀಳಿಕೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಶನಿವಾರ ಬೆಳಿಗ್ಗೆ 10 ಗಂಟೆಗೆ ಸುಲ್ತಾನ್ ಸೈಯದ್ ಮಖ್ದೂಮ್ ಅಶ್ರಫ್ ಷಾ ಅವರ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಮನೆಗೆ ವಾಪಸಾದರು. ಮನೆಗೆ ಬಂದ ತಕ್ಷಣ ಪಕ್ಕದ ಗುಡಿಸಲಿಗೆ ಹೋದರು. ಆ ಬಳಿಕ ಅವರು ಕೂಗಾಟ ಕೇಳಿತು. ಹೋಗಿ ನೋಡುವಷ್ಟರಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದರು’ ಎಂದು ಮೃತನ ಪತ್ನಿ ತಿಳಿಸಿದ್ದಾರೆ.

==

ಮತ್ತೆ 769 ಜನರಿಗೆ ಕೋವಿಡ್‌, 6000 ಗಡಿ ದಾಟಿದ ಕೇಸ್‌

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಸೋಂಕಿನ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು. ಸದ್ಯ ಭಾರತದಲ್ಲಿ ಕಳೆದ 48 ಗಂಟೆಯಲ್ಲಿ 769 ಜನರಲ್ಲಿ ವೈರಸ್‌ ಪತ್ತೆಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 6133ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ 6 ಜನರು ಮಹಾಮಾರಿಯಾಗಿ ಬಲಿಯಾಗಿದ್ದಾರೆ. ಕೋವಿಡ್‌ ಸೋಂಕಿಗೆ ಕೇರಳವೇ ಹೆಚ್ಚು ಬಾಧಿತ ರಾಜ್ಯವಾಗಿದ್ದು, ನಂತರದ ರಾಜ್ಯಗಳಲ್ಲಿ ಗುಜರಾತ್, ಪಶ್ಚಿಮ ಬಂಗಾಳ ಮತ್ತು ದೆಹಲಿ ನಂತರದ ಸ್ಥಾನದಲ್ಲಿದೆ. ಈಗಾಗಲೇ ಅಗತ್ಯ ಪ್ರಮಾಣದ ಆಕ್ಸಿಜನ್‌ ಸಿಲಿಂಡರ್‌, ವೆಂಟಿಲೇಟರ್‌, ಹಾಸಿಗೆ ವ್ಯವಸ್ಥೆ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

==

ಗ್ರೇಟಾ ಥನ್‌ಬರ್ಗ್‌ ದೋಣಿ ಗಾಜಾ ಪ್ರವೇಶಿಸದಂತೆ ತಡೆಗೆ ಇಸ್ರೇಲ್ ಕ್ರಮ

ಟೆಲ್‌ ಅವೀವ್: ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಮತ್ತು 12 ಕಾರ್ಯಕರ್ತರು ಹಾಗೂ ನೆರವನ್ನು ಹೊತ್ತ ಫ್ರೀಡಂ ಫ್ಲೊಟಿಲ್ಲಾ ನೌಕೆ ಗಾಜಾ ಪ್ರವೇಶಕ್ಕೆ ಇಸ್ರೇಲ್ ವಿರೋಧ ವ್ಯಕ್ತಪಡಿಸಿದ್ದು, ದೋಣಿ ಗಾಜಾ ಪ್ರವೇಶಿಸುವುದನ್ನು ತಡೆಯುವು ದಾಗಿ ಹೇಳಿದೆ. ಈ ಬಗ್ಗೆ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜಾ ಪ್ರತಿಕ್ರಿಯಿಸಿದ್ದು, ‘ಪ್ಯಾಲೆಸ್ತೀನ್ ಪ್ರದೇಶದ ಮೇಲಿನ ತನ್ನ ನೌಕಾ ದಿಗ್ಬಂಧನ ವನ್ನು ಮುರಿಯಲು ಇಸ್ರೇಲ್ ಯಾರಿಗೂ ಅವಕಾಶ ನೀಡುವುದಿಲ್ಲ. ಹಮಾಸ್‌ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳು ವುದನ್ನು ತಡೆಯುವ ಗುರಿ ಹೊಂದಿದ್ದೇವೆ’ ಎಂದಿದ್ದಾರೆ. ಗಾಜಾಕ್ಕಿರುವ ಸಮುದ್ರ ದಿಗ್ಬಂಧನವನ್ನು ಮುರಿಯುವ ಮತ್ತು ಮಾನವೀಯ ನೆರವನ್ನು ನೀಡುವ ಗುರಿಯನ್ನು ಹೊಂದಿರುವ ಫ್ರೀಡಂ ಫ್ಲೊಟಿಲ್ಲಾ ಕಳೆದ ಭಾನುವಾರ ಸಿಸಿಲಿಯಿಂದ ಹೊರಟಿದೆ.

==

ಮಾತೃಭಾಷೆ ಶಿಕ್ಷಣಕ್ಕೆ ತೆಲಂಗಾಣ ಸಿಬಿಎಸ್‌ಇ ಶಾಲೆಗಳ ವಿರೋಧ

ಹೈದರಾಬಾದ್‌: ಪೂರ್ವ ಪ್ರಾಥಮಿಕ ಹಂತದಿಂದ 2ನೇ ತರಗತಿವರೆಗೆ ಮಾತೃಭಾಷೆ ಶಿಕ್ಷಣ ಕಡ್ಡಾಯ ಎಂಬ ಸಿಬಿಎಸ್‌ಇ ಮಂಡಳಿಯ ನಿರ್ಧಾರಕ್ಕೆ ಆಂಧ್ರಪ್ರದೇಶದ ಹಲವು ಸಿಬಿಎಸ್‌ಸಿ ಶಾಲೆಗಳು ಅಪಸ್ವರ ಎತ್ತಿವೆ. ರಾಜ್ಯದ ಶಾಲೆಗಳಲ್ಲಿ ಬಹುಭಾಷಾ ಮಕ್ಕಳು ಹೆಚ್ಚಾಗಿದ್ದು, ಅವರಿಗೆ ಒಂದೇ ಬಾರಿ ಒಂದು ಭಾಷೆಯಿಂದ ಕಲಿಕೆ ಆರಂಭಿಸಿದರೆ ತುಂಬಾ ಕಷ್ಟವಾಗುತ್ತದೆ. ಜೊತೆಗೆ ಒಂದೇ ಭಾಷೆಯಲ್ಲಿ ಶಿಕ್ಷಣವು ಶಿಕ್ಷಕರಿಗೂ ಸಹ ಕ್ಲಿಷ್ಟಕರವಾಗಿದ್ದು, ಅದಕ್ಕಾಗಿ ನುರಿತ ಬೋಧಕರ ಕೊರತೆ ಕಾಣಿಸಲಿದೆ. ಪಠ್ಯಗಳು ಸಂಪೂರ್ಣವಾಗಿ ಬದಲಾಗಬೇಕಿದ್ದು, ಇದಕ್ಕೆ ಶಿಕ್ಷಕರು ಒಗ್ಗಿಕೊಳ್ಳುವುದು ಕಷ್ಟವಾಗಲಿದೆ. ಮತ್ತೊಂದೆಡೆ ತೆಲುಗು ಮಾತನಾಡುವವ ಪೋಷಕರಿಗೂ ಇದು ಬಿಸಿತುಪ್ಪವಾಗಿ ಪರಿಣಮಿಸಿದ್ದು, ಹೆಚ್ಚಿನವರು ಇಂಗ್ಲಿಷ್‌ ಮಾಧ್ಯಮವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೈದರಾಬಾದ್‌ನ ಶಾಲೆಯೊಂದರ ಪ್ರಾಂಶುಪಾಲರು ಹೇಳಿದ್ದಾರೆ. ಜೊತೆಗೆ ಮಾತೃಭಾಷೆ ಶಿಕ್ಷಣವು ಆಯ್ಕೆಯಾಗಿರಬೇಕೆ ಹೊರತು ಕಡ್ಡಾಯವಾಗಿ ಅಲ್ಲ. ಅಧ್ಯಯನವು ಮಕ್ಕಳಿಗೆ ಸರಿಯಾಗಿ ಅರ್ಥವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.