ಮ.ಪ್ರ. ರೈಲಿಗೆ ಬೆಂಕಿ ಬಿದ್ದ ಮರುದಿನವೇ ಘಟನೆ
==
ಸೋಶಿಯಲ್ ಮೀಡಿಯಾ ಪ್ರಭಾವ ಬಳಸಿ ಟಿವಿಕೆ ಪಕ್ಷ ಗೆಲುವು: ಸ್ಟಾಲಿನ್ ಆರೋಪತಂಜಾವೂರು: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷವು ಕ್ಷೇತ್ರ ಕಾರ್ಯ ಮಾಡದೆ, ಸಾಮಾಜಿಕ ಮಾಧ್ಯಮದ ಮೂಲಕ ಜನರನ್ನು ಪ್ರಭಾವಿಸಿ ಗೆದ್ದಿದೆ ಎಂದು ಡಿಎಂಕೆ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಆರೋಪಿಸಿದ್ದಾರೆ. ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಟಿವಿಕೆ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಲಿಲ್ಲ. ಬೂತ್ ಏಜೆಂಟ್ಗಳನ್ನು ಕೂಡ ಹಲವು ಕಡೆ ನೇಮಕ ಮಾಡಲಿಲ್ಲ. ಆದರೆ ಮಕ್ಕಳ ಮೂಲಕ ಕುಟುಂಬಗಳನ್ನು ಸಾಮಾಜಿಕ ಮಾಧ್ಯಮದಿಂದ ಪ್ರಭಾವಿಸಿ ಗೆದ್ದರು. ಇದು ನಮ್ಮ ಗಮನಕ್ಕೆ ಬರಲಿಲ್ಲ’ ಎಂದರು. ‘ಡಿಎಂಕೆ ಚುನಾವಣಾ ರಣತಂತ್ರದಲ್ಲಿ ಬೂತ್ ಕಮಿಟಿಗಳ ರಚನೆ, ಪಕ್ಷ ಸದಸ್ಯತ್ವ ಅಭಿಯಾನ, ಯುವ ಮತ್ತು ಮಹಿಳಾ ಸಮ್ಮೇಳನಗಳು, ವಿಶೇಷ ಚುನಾವಣಾ ಪಟ್ಟಿ ನವೀಕರಣ ಕೆಲಸ ಸೇರಿದಂತೆ ಬಹಳ ದೊಡ್ಡ ಮಟ್ಟದಲ್ಲಿ ಕ್ಷೇತ್ರ ಕೆಲಸ ಮಾಡಿತ್ತು. ಆದರೂ ಸ್ಥಳೀಯವಾಗಿ ಏನೂ ಕೆಲಸ ಮಾಡದ ಟಿವಿಕೆ ಹೇಗೆ ಗೆದ್ದಿತು?’ ಎಂದು ಪ್ರಶ್ನಿಸಿದರು.==
==
ಟೆಹ್ರಾನ್: ಹೋರ್ಮುಜ್ ಅನ್ನು ಇರಾನ್ನಿಂದ ವಶಪಡಿಸಿಕೊಳ್ಳುವ ಅಮೆರಿಕದ ಆಸೆಗೆ ಇರಾನ್ ಮತ್ತೆ ಶಾಕ್ ನೀಡಿದೆ. ಹೋರ್ಮುಜ್ ಜಲಸಂಧಿ ನಿರ್ವಹಣೆಗೆ ಸಮಿತಿ ರಚಿಸಿದ್ದು, ಈ ಮೂಲಕ ತನ್ನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ.
ಈ ಬಗ್ಗೆ ಇರಾನ್ನ ಸರ್ವೋಚ್ಛ ರಾಷ್ಟ್ರೀಯ ಭದ್ರತಾ ಮಂಡಳಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.‘ ಪರ್ಷಿಯನ್ ಜಲಸಂಧಿ ಪ್ರಾಧಿಕಾರ( ಪಿಜಿಎಸ್ಎ)ವನ್ನು ಸ್ಥಾಪಿಸಲಾಗಿದೆ. ಇದು ಹೋರ್ಮುಜ್ ಕಾರ್ಯಾಚರಣೆಗಳು ಮತ್ತು ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡಲಿದೆ’ ಎಂದಿದೆ. ಈ ಸಮಿತಿ ಯಾವ ಕಾರ್ಯಗಳನ್ನು ಮಾಡುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ.
ಬಂಗಾಳ: ಧರ್ಮಾಧಾರಿತ ಗೌರವಧನ ರದ್ದು
ಕೋಲ್ಕತಾ: ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಧರ್ಮದ ಆಧಾರದ ಮೇಲೆ ಇಮಾಮ್ಗಳು, ಮುಲ್ಲಾಗಳು ಮತ್ತು ದೇಗುಲಗಳ ಅರ್ಚಕರಿಗೆ ನೀಡಲಾಗುತ್ತಿದ್ದ ಮಾಸಿಕ ಗೌರವಧನ ಮತ್ತು ಕಲ್ಯಾಣ ಯೋಜನೆಗಳನ್ನು ಜೂನ್ನಿಂದ ನಿಲ್ಲಿಸಲು ನಿರ್ಧರಿಸಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆ ಟಿಎಂಸಿ ಸರ್ಕಾರವು ಇಮಾಮ್ ಮತ್ತು ಮುಲ್ಲಾಗಳಿಗೆ ಮಾಸಿಕ 2,500 ರು, ಅರ್ಚಕರಿಗೆ 2,000 ರು. ಗೌರವಧನ ನೀಡುತ್ತಿತ್ತು.