ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ ಇಂಡಿಯ ಲಿಂಬೆಕಾಯಿ ಬಗ್ಗೆ ಪ್ರಧಾನಿ ಮೋದಿ ಫಿದಾ

KannadaprabhaNewsNetwork |  
Published : Feb 23, 2026, 01:45 AM IST
ನಂಜನಗೂಡು ಬಾಳೆ | Kannada Prabha

ಸಾರಾಂಶ

ನಂಜನಗೂಡಿನ ರಸಬಾಳೆಹಣ್ಣು, ಮೈಸೂರಿನ ವೀಳ್ಯದೆಲೆ ಮತ್ತು ವಿಜಯಪುರದ ಇಂಡಿ ನಿಂಬೆ ರುಚಿ ಮತ್ತು ಗುಣಮಟ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಇದೇ ಕಾರಣಕ್ಕೆ ಇವು ವಿದೇಶಗಳಿಗೆ ಕೂಡ ರಫ್ತಾಗುತ್ತಿವೆ ಎಂದು ಹೇಳಿದ್ದಾರೆ.

ಮೂರೂ ಉತ್ಪನ್ನ ಗುಣಮಟ್ಟಕ್ಕೆ ಹೆಸರುವಾಸಿ

ವಿಮಾನದಲ್ಲಿ ವಿದೇಶಕ್ಕೆ ರಫ್ತು: ಮನ್‌ ಕೀ ಬಾತ್‌

ನವದೆಹಲಿ: ನಂಜನಗೂಡಿನ ರಸಬಾಳೆಹಣ್ಣು, ಮೈಸೂರಿನ ವೀಳ್ಯದೆಲೆ ಮತ್ತು ವಿಜಯಪುರದ ಇಂಡಿ ನಿಂಬೆ ರುಚಿ ಮತ್ತು ಗುಣಮಟ್ಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಇದೇ ಕಾರಣಕ್ಕೆ ಇವು ವಿದೇಶಗಳಿಗೆ ಕೂಡ ರಫ್ತಾಗುತ್ತಿವೆ ಎಂದು ಹೇಳಿದ್ದಾರೆ.

ಭಾನುವಾರ ಪ್ರಸಾರವಾದ ಮಾಸಿಕ ‘ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೃಷಿಯಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ ರಾಜ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ, ಈ ವೇಳೆ ಕರ್ನಾಟಕದ ಕೃಷಿ ಉತ್ಪನ್ನಗಳ ಬಗ್ಗೆಯೂ ಪ್ರಸ್ತಾಪಿಸಿದರು.

‘ಕೃಷಿಕರ ಪರಿಶ್ರಮವು ಭಾರತದ ಸಾಧನೆಯ ಅಂಕಿ-ಅಂಶಗಳನ್ನು ಪ್ರತಿಫಲಿಸಿದ್ದು, 15 ಕೋಟಿ ಟನ್‌ ಅಕ್ಕಿ ಉತ್ಪಾದಿಸುವ ಮೂಲಕ ದೇಶ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕನಾಗಿ ಹೊರಹೊಮ್ಮಿದೆ. ಅನ್ನದಾತರಾಗಿರುವ ರೈತರೇ ಭೂಮಿತಾಯಿಯ ನಿಜವಾದ ಆರಾಧಕರಾಗಿದ್ದಾರೆ. ಮಣ್ಣನ್ನು ಚಿನ್ನ ಮಾಡುವ ಕಲೆಯನ್ನು ಅವರಿಂದ ಕಲಿಯಬೇಕು’ ಎಂದು ಮೋದಿ ಕೊಂಡಾಡಿದರು.

ಇದೇ ವೇಳೆ ಭಾರತೀಯ ಕೃಷಿ ಉತ್ಪನ್ನಗಳು ಮಾಲ್ಡೀವ್ಸ್‌ನಂತಹ ರಾಷ್ಟ್ರಗಳಿಗೆ ರಫ್ತಾಗುತ್ತಿರುವುದನ್ನು ಉಲ್ಲೇಖಿಸುತ್ತಾ, ‘ವಿಮಾನಗಳ ಮೂಲಕ ನಂಜನಗೂಡಿನ ಬಾಳೆ, ಮೈಸೂರಿನ ವೀಳ್ಯದೆಲೆ, ಇಂಡಿ ನಿಂಬೆ ಈಗ ಅನ್ಯ ದೇಶಗಳ ಮಾರುಕಟ್ಟೆಯನ್ನೂ ಪ್ರವೇಶಿಸುತ್ತಿವೆ. ಇವುಗಳು ರುಚಿ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಜಿಐ ಟ್ಯಾಗ್‌ ಕೂಡ ಪಡೆದಿವೆ. ಇಂದು ರೈತರು ಪ್ರಮಾಣದ ಜತೆ ಗುಣವರ್ಧನೆಯ ಕಡೆಗೂ ಗಮನಹರಿಸುತ್ತಿದ್ದಾರೆ’ ಎಂದು ಹೇಳಿದರು.

ಉಳಿದಂತೆ ಒಂದೇ ಹೊಲದಲ್ಲಿ 570 ವಿಧದ ಅಕ್ಕಿಗಳನ್ನು ಬೆಳೆಯುತ್ತಿರುವ ಕೇರಳದ ತ್ರಿಶೂರು ಗ್ರಾಮ ಹಾಗೂ ತಂತ್ರಜ್ಞಾನದ ಅಳವಡಿಕೆಯಿಂದ ಭೂಮಿಯ ಉತ್ತಮ ಬಳಕೆ ಮತ್ತು ಕಡಿಮೆ ನೀರನ್ನು ಬಳಸುವ ತಂತ್ರಗಳ ಮೂಲಕ ಹೆಚ್ಚಿನ ಆದಾಯ ಗಳಿಸಿದ ಒಡಿಶಾದ ಕೃಷಿಕ ಹಿರೋದ್‌ ಪಟೇಲ್‌ರನ್ನು ಶ್ಲಾಘಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಾರತ-ಅಮೆರಿಕದ ವ್ಯಾಪಾರಒಪ್ಪಂದ ಮಾತುಕತೆ ಮುಂದಕ್ಕೆ
ಬೆತ್ತಲಾಗಿದ್ದರೂ ಕಾಂಗ್ರೆಸ್‌ ಬಟ್ಟೆ ಬಚ್ಚಿದ್ದೇಕೆ?: ಮೋದಿ