ಮಮತಾ ಸೋದರಳಿಯ ಅಭಿಷೇಕ್‌ ಮನೆ ಮೇಲೆ ರಾತ್ರಿ 2 ಗಂಟೆಗೆ ದಾಳಿ

KannadaprabhaNewsNetwork |  
Published : Jun 14, 2026, 02:00 AM IST
Abhishek

ಸಾರಾಂಶ

ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಅವರ ಕಾಳಿಘಾಟ್‌ನ ಮನೆಯ ಮೇಲೆ ಶುಕ್ರವಾರ ರಾತ್ರಿ 2 ಗಂಟೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅಭಿಷೇಕ್‌ರ ಆಪ್ತ ಕಾರ್ಯದರ್ಶಿ ಸುಮಿತ್ ರಾಯ್‌ ವಿರುದ್ಧದ ಸುಲಿಗೆ ಪ್ರಕರಣ ಸಂಬಂಧ ಈ ದಾಳಿ ನಡೆಸಲಾಗಿದೆ.

 ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಅವರ ಕಾಳಿಘಾಟ್‌ನ ಮನೆಯ ಮೇಲೆ ಶುಕ್ರವಾರ ರಾತ್ರಿ 2 ಗಂಟೆ ವೇಳೆಗೆ ಪೊಲೀಸರು ದಾಳಿ ನಡೆಸಿದ್ದಾರೆ.  

ಬಾಗಿಲು ಮುರಿದು ಒಳನುಗ್ಗಿದರು

ಅಭಿಷೇಕ್‌ರ ಆಪ್ತ ಕಾರ್ಯದರ್ಶಿ ಸುಮಿತ್ ರಾಯ್‌ ವಿರುದ್ಧದ ಸುಲಿಗೆ ಪ್ರಕರಣ ಸಂಬಂಧ ಈ ದಾಳಿ ನಡೆಸಲಾಗಿದೆ. ದಾಳಿ ಸುದ್ದಿ ತಿಳಿಯುತ್ತಲೇ ಮಮತಾ, ಸೋದರಳಿಯನ ನಿವಾಸಕ್ಕೆ ದೌಡಾಯಿಸಿದ್ದು, ಕೆಲಕಾಲ ಹೈಡ್ರಾಮಾ ಸೃಷ್ಟಿಯಾಗಿತ್ತು. ರಾತ್ರೋರಾತ್ರಿ ಬಂದ ಪೊಲೀಸರನ್ನು 4 ತಾಸು ಕಾಯಿಸಲಾಗಿದ್ದರಿಂದ ಕೊನೆಗೆ ಅವರು ಬಾಗಿಲು ಮುರಿದು ಒಳನುಗ್ಗಿದರು ಎನ್ನಲಾಗಿದೆ. 

ಆ ವೇಳೆ ಬ್ಯಾನರ್ಜಿ ಅವರ ಭದ್ರತಾ ಪಡೆ ಸಿಬ್ಬಂದಿ ತಡೆದರಾದರೂ, ಶೋಧ ಮುಂದುವರಿಯಿತು. ರಾಯ್‌ ಸಿಗದ ಕಾರಣ ಪೊಲೀಸರು ಬೆಳಗ್ಗೆ 7.30ಕ್ಕೆ ಹೊರಟ ಬಳಿಕ ಮಮತಾ ಕೂಡ ಅಲ್ಲಿಂದ ತೆರಳಿದರು.

ರಾಜಕೀಯ ದ್ವೇಷದ ನಡೆ - ಟಿಎಂಸಿ

 ಇದನ್ನು ಟಿಎಂಸಿ ರಾಜಕೀಯ ದ್ವೇಷದ ನಡೆ ಎಂದು ಕರೆದಿದೆ. ಈ ಬಗ್ಗೆ ಅಭಿಷೇಕ್‌ರನ್ನು ಪ್ರಶ್ನಿಸಿದಾಗ, ‘ತನಿಖಾ ಸಂಸ್ಥೆಗಳನ್ನೇ ಕೇಳಿ. ನಾನು ಅವರ ವಕ್ತಾರನಲ್ಲ’ ಎಂಬ ಖಾರವಾದ ಪ್ರತಿಕ್ರಿಯೆ ಬಂದಿದೆ. ಇವರು, ಸಂಸದರ ನಕಲಿ ಸಹಿ ಮಾಡಿದ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಮೆರಿಕದಲ್ಲಿನ ಸ್ವಯಂ ಶ್ರೀಮಂತರಲ್ಲಿ ಜಯಶ್ರೀ: 64000 ಕೋಟಿ ರು.ಆಸ್ತಿ
ಪುರುಷ ಶವ ಬಗ್ಗೆ ಕೀಳು ಹೇಳಿಕೆ ನೀಡಿದ್ದ ವೈದ್ಯೆಗೆ ಕಡ್ಡಾಯ ರಜೆ