ಉತ್ತರಾ ಖಂಡ : ಪ್ರತಿಭಟನೆ ಆಯೋಜಕರಿಂದಲೇ ನಷ್ಟವನ್ನು ವಸೂಲಿ ಮಾಡುವ ಕಾನೂನು ಜಾರಿಗೆ

KannadaprabhaNewsNetwork |  
Published : Sep 21, 2024, 01:59 AM ISTUpdated : Sep 21, 2024, 06:31 AM IST
ಉತ್ತರಾಖಂಡ | Kannada Prabha

ಸಾರಾಂಶ

ಉತ್ತರಾಖಂಡದಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳ ಸಮಯದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ಪ್ರತಿಭಟನಾಕಾರರಿಂದ ನಷ್ಟವನ್ನು ವಸೂಲಿ ಮಾಡುವ ಕಾನೂನನ್ನು ಜಾರಿಗೆ ತರಲಾಗಿದೆ.  

ಡೆಹ್ರಾಡೂನ್: ಪ್ರತಿಭಟನೆ ಮತ್ತು ಗಲಾಭೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದರೆ, ಪ್ರತಿಭಟನೆ ಆಯೋಜಕರಿಂದಲೇ ನಷ್ಟವನ್ನು ವಸೂಲಿ ಮಾಡುವ ಕಾನೂನು ಉತ್ತರಾಖಂಡದಲ್ಲಿ ಜಾರಿಗೆ ಬಂದಿದೆ. ಈ ಕುರಿತ ಕಾಯ್ದೆಗೆ ರಾಜ್ಯಪಾಲರ ಅನುಮೋದನೆ ಸಿಕ್ಕಿದೆ.

ಉತ್ತರಾಖಂಡ್‌ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ವಸೂಲಾತಿ ಮಸೂದೆಯನ್ನು ರಾಜ್ಯ ಸರ್ಕಾರ ಕಳೆದ ತಿಂಗಳು ವಿಧಾನಸಭೆಯಲ್ಲಿ ಅಂಗೀಕರಿಸಿ, ರಾಜ್ಯಪಾಲರ ಒಪ್ಪಿಗೆಗಾಗಿ ಕಾಯುತ್ತಿತ್ತು . ಆದರೆ ಇದೀಗ ಗವರ್ನರ್‌ ಗುರ್ಮಿತ್ ಸಿಂಗ್ ಸಮ್ಮತಿ ಸೂಚಿಸಿದ್ದಾರೆ.

ರಾಜ್ಯಪಾಲರ ಅನುಮತಿಗೆ ಸಂತಸ ವ್ಯಕ್ತ ಪಡಿಸಿರುವ ಪುಷ್ಕರ್ ಸಿಂಗ್, ‘ಹಾನಿಗೊಳಗಾದ ಸೊತ್ತಿನ ಪ್ರತಿ ಪೈಸೆಯನ್ನು ಅದಕ್ಕೆ ಕಾರಣವಾದ ವ್ತಕ್ತಿಯಿಂದ ವಸೂಲಿ ಮಾಡಿಸಲಾಗುವುದು. ನಷ್ಟದ ಸಂಪೂರ್ಣ ಹಣವನ್ನು ಅವರಿಂದ ಮಸೂಲಿ ಮಾಡುವುದರ ಜೊತೆಗೆ 8 ಲಕ್ಷ ರು. ತನಕ ದಂಡ ವಿಧಿಸಲಾಗುತ್ತದೆ ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಈಗ ಖರ್ಗೆ ಹೆಗಲಿಗೆ ನಿರ್ಧಾರ ಯಾರು ಆಗ್ತಾರೆ ಕೇರಳಂ ಸಿಎಂ?
ಪಶ್ಚಿಮ ಬಂಗಾಳ ವಿಧಾನಸಭೆ ವಿರ್ಸಜನೆ ಗೌರ್‍ನರ್‌ ಗೇಟ್‌ ಪಾಸ್‌ : ದೀದಿ ಈಗ ಬೀದಿಗೆ!