ರಾಮಂದಿರ: 2ನೇ ದಿನವೂ 5 ಲಕ್ಷ ಮಂದಿಯಿಂದ ದರ್ಶನ

KannadaprabhaNewsNetwork |  
Published : Jan 25, 2024, 02:04 AM ISTUpdated : Jan 25, 2024, 05:18 AM IST
ಅಯೋಧ್ಯೆಯಲ್ಲಿ ಜನಸಾಗರ | Kannada Prabha

ಸಾರಾಂಶ

ರಾಮಮಂದಿರದಲ್ಲಿ ಭಕ್ತರಿಗಾಗಿ ಮಧ್ಯಾಹ್ನದ ವಿರಾಮ 1 ತಾಸಿಗೆ ಇಳಿಕೆ ಮಾಡಲಾಗಿದೆ. ಎರಡೇ ದಿನದಲ್ಲಿ 10 ಲಕ್ಷ ಜನರಿಂದ ಅಯೋಧ್ಯೆ ದೇಗುಲ ಭೇಟಿಯಾಗಿದೆ.

ಅಯೋಧ್ಯೆ: ಸೋಮವಾರ ಪ್ರತಿಷ್ಠಾಪಿಸಲಾದ ಅಯೋಧ್ಯೆ ಶ್ರೀರಾಮನ ವಿಗ್ರಹವನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಿದ 2ನೇ ದಿನವೂ 5 ಲಕ್ಷ ಮಂದಿ ಬಾಲರಾಮನ ದರ್ಶನ ಪಡೆದಿದ್ದಾರೆ. 

ಮೊದಲ ದಿನ ಉಂಟಾಗಿದ್ದ ನೂಕುನುಗ್ಗಲು ಸಮಸ್ಯೆಯನ್ನು ಪರಿಹರಿಸಿರುವ ಸ್ಥಳೀಯ ಆಡಳಿತ ಉತ್ತಮ ಸರತಿ ಸಾಲು ವ್ಯವಸ್ಥೆಯನ್ನು ರೂಪಿಸಿದ್ದಾರೆ. 

2ನೇ ಮಧ್ಯಾಹ್ನದ ವೇಳೆಗೆ 3 ಲಕ್ಷ ಮಂದಿ ರಾಮನ ದರ್ಶನ ಪಡೆದಿದ್ದು, ರಾತ್ರಿಯ ವೇಳೆಗೆ ಅಂದಾಜು 5 ಲಕ್ಷ ಜನ ರಾಮನ ದರ್ಶನ ಪಡೆಯಲು ಸಫಲರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸೋಮವಾರ ಪ್ರಾಣಪ್ರತಿಷ್ಠಾಪನೆ ಇದ್ದ ಕಾರಣ ಮಂದಿರಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಮಂಗಳವಾರದಿಂದ ಭಕ್ತರಿಗೆ ರಾಮಮಂದಿರವನ್ನು ತೆರೆಯಲಾಗಿದೆ.

ಮಧ್ಯಾಹ್ನದ ವಿರಾಮ ಕಡಿತ: ರಾಮಮಂದಿರದಲ್ಲಿ ನೈವೇದ್ಯದ ಬಳಿಕ ಮಧ್ಯಾಹ್ನ 2 ಗಂಟೆಗಳ ಬಿಡುವನ್ನು ಘೋಷಿಸಲಾಗಿತ್ತು. ಆದರೆ ದೇವಸ್ಥಾನದ ಬಳಿ ನೆರೆದಿರುವ ಭಕ್ತರಿಗೆ ದರ್ಶನ ಒದಗಿಸುವ ನಿಟ್ಟಿನಲ್ಲಿ ಈ ವಿರಾಮದ ಸಮಯವನ್ನು 1 ಗಂಟೆಗೆ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಕಲ ವ್ಯವಸ್ಥೆಗೆ ಯೋಗಿ ಕರೆ:ರಾಮನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. 

ಮುಖ್ಯವಾಗಿ ದೇವಸ್ಥಾನದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಅವರು ಸೂಚನೆ ನೀಡಿದ್ದಾರೆ.

PREV

Recommended Stories

ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ರಾಹುಲ್‌ ಆರೋಪ ನಿರಾಧಾರ: ಆಯೋಗ ಸ್ಪಷ್ಟನೆ