ಜಮ್ಮು: ‘ದೇಶದಲ್ಲಿ ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆ ಇರುವ ತನಕ ಮೀಸಲಾತಿ ಇರಲಿದೆ. ಕಾಂಗ್ರೆಸ್ ಮೀಸಲಾತಿಗೆ ಸಂಪೂರ್ಣವಾಗಿ ಬೆಂಬಲಿಸಲಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ‘ ಹಿಂದೂ ಧರ್ಮದಲ್ಲಿ ಜಾತಿ ಪದ್ಧತಿ ಇರುವ ತನಕ ಮೀಸಲಾತಿ ರದ್ದಾಗುವುದಿಲ್ಲ. ಎಲ್ಲಿಯವರೆಗೆ ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಇರುತ್ತದೆಯೋ ಅಲ್ಲಿಯ ತನಕ ಮೀಸಲಾತಿ ಮುಂದುವರೆಯುತ್ತದೆ. ನಾನು ಸಾಯುವ ತನಕವೂ ಮೀಸಲಾತಿ ಇರುತ್ತದೆ. ನನ್ನ ಮಕ್ಕಳಿಗೆ ಇದಕ್ಕೆ ಹೋರಾಡಲು ಹೇಳುತ್ತೇನೆ’ ಎಂದಿದ್ದಾರೆ.