ಶಬರಿಮಲೇಲಿ ಇನ್ನಷ್ಟುಚಿನ್ನಕ್ಕೆ ಕನ್ನ : ಎಸ್‌ಐಟಿ

KannadaprabhaNewsNetwork |  
Published : Jan 02, 2026, 02:15 AM IST
Gold

ಸಾರಾಂಶ

ಶಬರಿಮಲೆ ದೇಗುಲದ ಚಿನ್ನಕ್ಕೆ ಕನ್ನ ಪ್ರಕರಣದಲ್ಲಿ ಪ್ರಸ್ತುತ ತಿಳಿದಿರುವುದಕ್ಕಿಂತ ಅಧಿಕ ಪ್ರಮಾಣದ ಹೊನ್ನು ಕಳುವಾಗಿದೆ ಎಂದು ವಿಶೇಷ ತನಿಖಾ ತಂಡ ತಿಳಿಸಿದೆ. 3 ಆರೋಪಿಗಳ ಕಸ್ಟಡಿಗೆ ಕೋರಿ ಕೊಲ್ಲಂ ವಿಚಕ್ಷಣಾ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೀಗೆ ಹೇಳಲಾಗಿದೆ.

ತಿರುವನಂತಪುಂ: ಶಬರಿಮಲೆ ದೇಗುಲದ ಚಿನ್ನಕ್ಕೆ ಕನ್ನ ಪ್ರಕರಣದಲ್ಲಿ ಪ್ರಸ್ತುತ ತಿಳಿದಿರುವುದಕ್ಕಿಂತ ಅಧಿಕ ಪ್ರಮಾಣದ ಹೊನ್ನು ಕಳುವಾಗಿದೆ ಎಂದು ವಿಶೇಷ ತನಿಖಾ ತಂಡ ತಿಳಿಸಿದೆ. 3 ಆರೋಪಿಗಳ ಕಸ್ಟಡಿಗೆ ಕೋರಿ ಕೊಲ್ಲಂ ವಿಚಕ್ಷಣಾ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೀಗೆ ಹೇಳಲಾಗಿದೆ.ಈ ಮೊಲದು ಗರ್ಭಗುಡಿಯ ದ್ವಾರಪಾಲಕ ಮೂರ್ತಿಗಳು ಮತ್ತು ಬಾಗಿಲಿನ ಚೌಕಟ್ಟಿನ ತಾಮ್ರ ಲೇಪಿತ ಕವಚದಿಂದ ಚಿನ್ನದಲ್ಲಿ ಗೋಲ್ಮಾಲ್‌ ಮಾಡಿದ ಬಗ್ಗೆ ವರದಿಯಾಗಿತ್ತು. ಆದರೀಗ ಎಸ್‌ಐಟಿ, ಅದರೊಂದಿಗೆ ದೇಗುಲದ ಪ್ರಭಾ ಮಂಡಲದ 7 ತಾಮ್ರದ ಕವಚಗಳಿಂದಲೂ ಚಿನ್ನವನ್ನು ಕದಿಯಲಾಗಿದೆ ಎಂದು ಹೇಳಿದೆ.

ವಿಶೇಷ ರಾಸಾಯನಿಕವೊಂದನ್ನು ಬಳಸಿ ಕನ್ನ

ಅರ್ಜಿಯ ಪ್ರಕಾರ, ಆರೋಪಿಯಾಗಿರುವ ಚೆನ್ನೈನ ಪಂಕಜ್‌ ಭಂಡಾರಿಯವರ ಸ್ಮಾರ್ಟ್‌ ಕ್ರಿಯೇಷನ್ಸ್‌ನಲ್ಲಿ ವಿಶೇಷ ರಾಸಾಯನಿಕವೊಂದನ್ನು ಬಳಸಿ ಚಿನ್ನವನ್ನು ಕವಚಗಳಿಂದ ತೆಗೆಯಲಾಗಿತ್ತು. ಹೀಗೆ ತೆಗೆಯಲಾದ ಲೋಹವೀಗ ಬಳ್ಳಾರಿಯ ಆಭರಣ ವ್ಯಾಪಾರಿ ಗೋವರ್ಧನ್‌ ರೊಡ್ಡಂ ಮತ್ತು ಭಂಡಾರಿಯ ಬಳಿಯಿದೆ.ಪ್ರಸ್ತುತ ಈ ಚಿನ್ನಕ್ಕೆ ಕನ್ನ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿದೆ. ತಾಮ್ರ ಕವಚಗಳ ಮೇಲಿನ ಲೇಪಿತ ಚಿನ್ನದ ಮಾದರಿಗಳನ್ನು ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ(ವಿಎಸ್‌ಎಸ್‌ಸಿ) ಕಳುಹಿಸಲಾಗಿದ್ದು, ಅದರ ವೈಜ್ಞಾನಿಕ ವಿಶ್ಲೇಷಣಾ ವರದಿ ಬರುವುದು ಬಾಕಿ ಇದೆ.

30 ಕೆ.ಜಿ. ಚಿನ್ನವನ್ನು ನೀಡಿದ್ದರು

ಈ ಮೊದಲು, 1998ರಲ್ಲಿ ಉದ್ಯಮಿ ವಿಜಯ್‌ ಅವರು ಶಬರಿಮಲೆ ಮುಖ್ಯ ದೇಗುಲದ ಆವರಣದಲ್ಲಿರುವ ಅನ್ಯ ದೇವಸ್ಥಾನಗಳ ಲೇಪನಕ್ಕೆಂದು 30 ಕೆ.ಜಿ. ಚಿನ್ನವನ್ನು ನೀಡಿದ್ದರು. ಅದರ ದಾಖಲೆಗಳೂ ಕಾಣೆಯಾಗಿರುವುದಾಗಿ ವರದಿಯಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ಬೀದೀಲಿ ಹೆಣವಾದ ಪುಣೆ ಬಾಂಬ್‌ ಸ್ಫೋಟದ ಉಗ್ರ!