ಕೋಲ್ಕತಾ: ಸಂದೇಶ್ಖಾಲಿ ಮಹಿಳಾ ಅತ್ಯಾಚಾರ ಪ್ರಕರಣ ಹಾಗೂ ಭೂಕಬಳಿಕೆ ಪ್ರಕರಣ ಆರೋಪಿ ಶಾಜಹಾನ್ ಬಂಧನ ಕೇವಲ ತೋರಿಕೆಯದ್ದು. ಆತ ಇಷ್ಟು ದಿನ ಬಂಗಾಳ ಪೊಲೀಸ್ ಆಶ್ರಯದಲ್ಲೇ ಸುರಕ್ಷಿತವಾಗಿದ್ದ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಮೂಲಗಳು ಆರೋಪಿಸಿವೆ.
ಆಗ ಆತ ತಪ್ಪಿಸಿಕೊಂಡು ಓಡಿಹೋದ. ಇದಕ್ಕೆ ಬಂಗಾಳ ಪೊಲೀಸರ ಶ್ರೀರಕ್ಷೆ ಇತ್ತು.
ಆತನನ್ನು ಅವರು ಸುರಕ್ಷಿತವಾಗಿಟ್ಟಿದ್ದರು.ಈಗ ಹೈಕೋರ್ಟ್ ಆದೇಶಿಸಿರುವ ಕಾರಣ ಬಂಧನದ ನಾಟಕವಾಡುತ್ತಿದ್ದಾರೆ ಎಂದು ಇ.ಡಿ. ಮೂಲಗಳು ಹೇಳಿವೆ.