ಬೆಳ್ಳಿ ಈಗ ಕೇಜಿಗೆ ₹ 1 ಲಕ್ಷ!

KannadaprabhaNewsNetwork |  
Published : May 30, 2024, 12:56 AM ISTUpdated : May 30, 2024, 05:21 AM IST
ಬೆಳ್ಳಿ | Kannada Prabha

ಸಾರಾಂಶ

ಸಾರ್ವಕಾಲಿಕ ಗರಿಷ್ಠ ದರ ತಲುಪಿದ ಆಭರಣ ಲೋಹ ಬೆಳ್ಳಿ ಒಂದೇ ತಿಂಗಳಿನಲ್ಲಿ 17000 ರು.ನಷ್ಟು ಭಾರೀ ಏರಿಕೆ ಕಂಡಿದೆ.

ಮುಂಬೈ: ಆಭರಣ ಮತ್ತು ಕೈಗಾರಿಕೆ ಎರಡೂ ವಲಯಗಳಲ್ಲಿ ಪ್ರಮುಖವಾಗಿ ಬಳಕೆಯಾಗುವ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ಸಾರ್ವಕಾಲಿಕ ಗರಿಷ್ಠ ಎನ್ನಬಹುದಾದ 1 ಲಕ್ಷ ರು. ತಲುಪಿದೆ. 

ಇದು ಹಬ್ಬ ಮತ್ತು ಶುಭ ಸಮಾರಂಭಗಳಿಗೆ ಬೆಳ್ಳಿ ಆಭರಣ ಖರೀದಿಗೆ ಮುಂದಾಗಿದ್ದವರಿಗೆ ಭಾರೀ ಶಾಕ್‌ ನೀಡಿದೆ.ತಿಂಗಳ ಹಿಂದಷ್ಟೇ ಕೆ.ಜಿ.ಗೆ 83000 ರು.ನ ಆಸುಪಾಸಿನಲ್ಲಿದ್ದ ಬೆಳ್ಳಿ ಬೆಲೆ ಕಳೆದ 3 ದಿನಗಳಲ್ಲಿ 6000-7000 ರು.ನಷ್ಟು ಹೆಚ್ಚಳವಾಗಿದೆ.

 ಪರಿಣಾಮ ದೇಶದ ವಿವಿಧ ನಗರಗಳ ಮಾರುಕಟ್ಟೆಯಲ್ಲಿ 1 ಲಕ್ಷ ರು.ಗಳ ಗಡಿ ದಾಟಿದೆ.ಚಿನ್ನದ ಪ್ರಮುಖ ಮಾರುಕಟ್ಟೆಗಳಾದ ಚೆನ್ನೈ, ಹೈದ್ರಾಬಾದ್‌, ತಿರುವನಂತಪುರ, ಕಟಕ್‌ ಸೇರಿದಂತೆ ಹಲವು ನಗರಗಳಲ್ಲಿ ಬುಧವಾರ ಬೆಳ್ಳಿ ಬೆಲೆ ಕೆ.ಜಿ.ಗೆ 1 ಲಕ್ಷ ರು.ಗಳ ಗಡಿ ದಾಟಿದೆ. ಉಳಿದಂತೆ ದೆಹಲಿಯಲ್ಲಿ 97100 ರು., ಮುಂಬೈನಲ್ಲಿ 94180 ರು., ಬೆಂಗಳೂರಿನಲ್ಲಿ 97100 ರು. ತಲುಪಿದೆ.ಇದೇ ವೇಳೆ ಬುಧವಾರ ದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 250 ರು. ಏರಿಕೆ ಕಂಡು 73200 ರು. ತಲುಪಿದೆ.ಬೆಲೆ ಏರಿಕೆ ಏಕೆ:

ಚಿನ್ನವನ್ನು ಕೇವಲ ಆಭರಣ ಅಥವಾ ಹೂಡಿಕೆ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆ. ಆದರೆ ಬೆಳ್ಳಿಯನ್ನು ಆಭರಣದ ಜೊತೆಗೆ ಕೈಗಾರಿಕಾ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.ಕಳೆದ ಕೆಲ ವರ್ಷಗಳಿಂದ ಉತ್ಪಾದನೆ ಹಿಂದಿನ ಮಟ್ಟದಲ್ಲೇ ಮುಂದುವರೆದಿದ್ದರೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 

ಎಲೆಕ್ಟ್ರಿಕ್ ವಾಹನಗಳು, ಸೌರಫಲಕ, 5ಜಿ ಆ್ಯಂಟೆನಾ, ಫೋಟೋಗ್ರಾಫಿ ಮೊದಲಾದ ವಲಯಗಳಲ್ಲಿ ಬೇಡಿಕೆ ಹೆಚ್ಚಳವಾಗಿರುವುದು ಕಳೆದ ಕೆಲ ವರ್ಷಗಳಲ್ಲಿ ಬೆಳ್ಳಿ ಬೆಲೆ ಭಾರೀ ಏರಿಕೆ ಕಾರಣವಾಗಿದೆ.ಮತ್ತೊಂದೆಡೆ ಮಧ್ಯಪ್ರಾಚ್ಯ ದೇಶಗಳ ನಡುವಿನ ಬಿಕ್ಕಟ್ಟು, ಮಧ್ಯಪ್ರಾಚ್ಯ ದೇಶಗಳ ಮೂಲಕ ಹಾದುಹೋಗುವ ಸರಕು ಹಡಗುಗಳ ಮೇಲೆ ಮುಂದುವರೆದ ದಾಳಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ. ಜೊತೆಗೆ ಅಮೆರಿಕದಲ್ಲಿ ಹಣದುಬ್ಬರದ ಆತಂಕ ಮುಂದುವರೆದಿರುವುದು ಕೂಡಾ ಬೆಳ್ಳಿ ಬೆಲೆ ದಾಖಲೆ ಮಟ್ಟ ತಲುಪಲು ಕಾರಣವಾಗಿದೆ.

ಬೆಲೆ ಏರಿಕೆಗೆ ಕಾರಣ ಏನು?1. ಮಧ್ಯಪ್ರಾಚ್ಯ ಬಿಕ್ಕಟ್ಟು ಇತ್ಯರ್ಥವಾಗದೇ ಇರುವುದು2. ಬೇಡಿಕೆ, ಲಭ್ಯತೆ ನಡುವಿನ ವ್ಯತ್ಯಾಸ ದಿನೇ ದಿನೇ ಏರಿಕೆ3. ಕೈಗಾರಿಕಾ ವಲಯದಿಂದ ಬೆಳ್ಳಿಗೆ ಭಾರೀ ಬೇಡಿಕೆ ವ್ಯಕ್ತಬೆಳ್ಳಿ ಬೆಲೆ ಏರಿಕೆಯ ಹಾದಿ1980-2500 ರು.2004-10000 ರು.2010-25000 ರು.2011-50000 ರು.2024-100000 ರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

16 ವರ್ಷದೊಳಗಿನ ಮಕ್ಕಳಿಗೆ ರಾಜ್ಯದಲ್ಲಿ ಮೊಬೈಲ್‌ ನಿಷೇಧ?
ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ ಇಂಡಿಯ ಲಿಂಬೆಕಾಯಿ ಬಗ್ಗೆ ಪ್ರಧಾನಿ ಮೋದಿ ಫಿದಾ