ದುರಂತಕ್ಕೀಡಾದ ವಿಮಾನದ ಟೇಕಾಫ್‌ಅಸಹಜವಾಗಿತ್ತು: ಪೈಲಟ್‌ ವಿಶ್ಲೇಷಣೆ

KannadaprabhaNewsNetwork |  
Published : Jun 13, 2025, 02:19 AM IST
ವಿಮಾನ ಪತನ | Kannada Prabha

ಸಾರಾಂಶ

ಅಹಮದಾಬಾದ್‌ನಲ್ಲಿ ದುರಂತಕ್ಕೀಡಾದ ಏರ್‌ ಇಂಡಿಯಾ ಎ1171 ವಿಮಾನ ಟೇಕ್‌ ಆಫ್‌ ಅಸಹಜವಾಗಿತ್ತು. ಬಹುಶಃ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನದ ಲ್ಯಾಂಡಿಂಗ್‌ ಗೇರ್‌ ತೆರೆದೇ ಇತ್ತು, ರೆಕ್ಕೆಯ ವಿಸ್ತರಿಸಬಹುದಾದ ಭಾಗ ಅಥವಾ ಮಡಿಕೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಸರಿಸಲಾಗಿತ್ತು.

- ಲ್ಯಾಂಡಿಂಗ್‌ ಗೇರ್ ಕೆಳಮುಖವಾಗಿಯೇ ಇತ್ತು

- ತಾಂತ್ರಿಕ ಸಮಸ್ಯೆಯತ್ತ ಬೊಟ್ಟು ಮಾಡಿದ ತಜ್ಞರು

ನವದೆಹಲಿ: ಅಹಮದಾಬಾದ್‌ನಲ್ಲಿ ದುರಂತಕ್ಕೀಡಾದ ಏರ್‌ ಇಂಡಿಯಾ ಎ1171 ವಿಮಾನ ಟೇಕ್‌ ಆಫ್‌ ಅಸಹಜವಾಗಿತ್ತು. ಬಹುಶಃ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನದ ಲ್ಯಾಂಡಿಂಗ್‌ ಗೇರ್‌ ತೆರೆದೇ ಇತ್ತು, ರೆಕ್ಕೆಯ ವಿಸ್ತರಿಸಬಹುದಾದ ಭಾಗ ಅಥವಾ ಮಡಿಕೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಸರಿಸಲಾಗಿತ್ತು. ಟೇಕ್‌ ಆಫ್‌ ವೇಳೆ ಈ ರೀತಿಯ ಸ್ಥಿತಿ ಅಪಾಯಕಾರಿ ಎಂದು ವಾಣಿಜ್ಯ ವಿಮಾನದ ಪೈಲಟ್‌ವೊಬ್ಬರು ವಿಶ್ಲೇಷಣೆ ಮಾಡಿದ್ದಾರೆ.

ವಿಮಾನ ಟೇಕ್‌ ಆಫ್‌ ಆದ ದೃಶ್ಯಗಳನ್ನು ಆಧರಿಸಿ ವಾಣಿಜ್ಯ ವೈಲಟ್‌ವೊಬ್ಬರು ಈ ರೀತಿ ವಿಶ್ಲೇಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ಟೇಕ್‌ ಆಫ್‌ ನಂತರದ ವಿಮಾನವೊಂದು ಈ ಸ್ಥಿತಿಯಲ್ಲಿರುವುದು ಅಸಹಜವಾಗಿದೆ ಎಂದು ಅವರು ಹೇಳಿದ್ದಾರೆ.

ಟೇಕಾಫ್‌ ವೇಳೆಗೆ 787 ಡ್ರೀಮ್‌ಲೈನರ್‌ ವಿಮಾನಗಳ ವಿಂಗ್‌ ಫ್ಲ್ಯಾಪ್‌(ರೆಕ್ಕೆಯ ಮಡಿಕೆಗಳು- ವಿಮಾನದ ವೇಗೆ ಹೆಚ್ಚಳ, ತಗ್ಗಿಸಲು ನೆರವಾಗುವ ರೆಕ್ಕೆಡ ಭಾಗ)ಗಳನ್ನು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಗೆ ಸೆಟ್‌ ಮಾಡಿಟ್ಟಿರಬೇಕು. ನಂತರ ಹಂತ ಹಂತವಾಗಿ ಅದನ್ನು ಹಿಂತೆಗೆದುಕೊಳ್ಳಬೇಕು. ಅದೇ ರೀತಿ ಟೇಕಾಫ್‌ ಯಶಸ್ವಿಯಾಗಿದೆ ಎಂದು ಖಚಿತವಾದ ಬಳಿಕವಷ್ಟೇ ಲ್ಯಾಂಡಿಂಗ್‌ ಗೇರ್‌ ಅನ್ನು ಹಿಂತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ವಿಮಾನವೊಂದು ಟೇಕ್ ಆಫ್‌ ಆದ ಕೆಲವೇ ಸೆಕೆಂಡುಗಳಲ್ಲಿ ಮತ್ತು ಸುಮಾರು 600 ಅಡಿ ತಲುಪುವ ಮೊದಲು ಲ್ಯಾಂಡಿಂಗ್‌ ಗೇರ್‌ ಅನ್ನು ಮಡಚಲಾಗುತ್ತದೆ.

ಮೇಲ್ನೋಟಕ್ಕೆ ಲ್ಯಾಂಡಿಂಗ್‌ ಗೇರ್‌ ಯಾಂತ್ರಿಕ ಅಥವಾ ಹೈಡ್ರಾಲಿಕ್‌ ವೈಫಲ್ಯದಿಂದಾಗಿ ಕೆಳ ಮುಖಮಾಡಿಕೊಂಡಿರುವ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿರಬೇಕು. ಇಂಥ ಪರಿಸ್ಥಿತಿಯಲ್ಲಿ ಪೈಲಟ್‌ ವಿಮಾನದ ರೆಕ್ಕೆಗಳ ಪಟ್ಟಿಯನ್ನು ಹಿಂತೆಗೆದುಕೊಂಡು ವೇಗ ಹೆಚ್ಚಿಸಲು ಪ್ರಯತ್ನಿಸಿರಬೇಕು. ಆದರೆ, ಕಡಿಮೆ ಎತ್ತರ ಮತ್ತು ಕಡಿಮೆ ವೇಗದಲ್ಲಿ ಈ ರೀತಿ ಮಾಡುವುದು ತುಂಬಾ ಅಪಾಯಕಾರಿ. ಇದು ವಿಮಾನ ಮೇಲೆತ್ತುವಲ್ಲಿ ಸಮಸ್ಯೆ ಸೃಷ್ಟಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಷ್ಟಾದರೂ ವಿಮಾನ ಸಂಚಾರದ ವೇಳೆ ಯಾವುದೇ ಗಮನಾರ್ಹ ಬದಲಾವಣೆ ಆಗಿಲ್ಲ. ಇದು ಪೈಲಟ್‌ಗೆ ವಿಮಾನದ ಮೇಲೆ ಒಂದಷ್ಟು ನಿಯಂತ್ರಣ ಸಾಧಿಸಿದ್ದ ಎಂಬುದನ್ನು ತಿಳಿಸುತ್ತದೆ ಎಂದು ವಾಣಿಜ್ಯ ವಿಮಾನದ ಪೈಲಟ್‌ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ