ಶಾಲಾ ಮಕ್ಕಳಿಗೆ ಕನ್ನಡ ಸೇರಿ 5 ಭಾಷೆಗಳಲ್ಲಿ ಟಿಟಿಡಿಯಿಂದ ಭಗವದ್ಗೀತೆ ವಿತರಣೆ

KannadaprabhaNewsNetwork |  
Published : Feb 05, 2024, 01:47 AM IST
ಭಗವದ್ಗೀತೆ | Kannada Prabha

ಸಾರಾಂಶ

ದೇಶಾದ್ಯಂತ 1 ಕೋಟಿ ಭಗವದ್ಗೀತೆ ಪ್ರತಿಗಳನ್ನು 5 ಭಾಷೆಗಳಲ್ಲಿ ಮುದ್ರಿಸಿ ಸನಾತನ ಧರ್ಮ ಪ್ರಚುರಪಡಿಸಲು ತಿರುಪತಿ ತಿರುಮಲ ದೇಗುಲ ಮಂಡಳಿ ನಿರ್ಧರಿಸಿದೆ.

ತಿರುಮಲ: ಕನ್ನಡವೂ ಸೇರಿ ಐದು ಭಾಷೆಗಳಲ್ಲಿ ಭಗವದ್ಗೀತೆಯನ್ನು ಸರಳ ಭಾಷೆಯಲ್ಲಿ ಅರ್ಥವಾಗುವಂತೆ ಮುದ್ರಿಸಿ 1 ಕೋಟಿ ಪ್ರತಿಗಳನ್ನು ದೇಶಾದ್ಯಂತ ಶಾಲಾ ಮಕ್ಕಳಿಗೆ ವಿತರಿಸಲು ತಿರುಪತಿ ತಿರುಮಲ ದೇಗುಲ ಟ್ರಸ್ಟ್‌ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿದ ಟಿಟಿಡಿ ಅಧ್ಯಕ್ಷರಾದ ಬಿ. ಕರುಣಾಕರ ರೆಡ್ಡಿ, ‘ಸನಾತನ ಧರ್ಮವನ್ನು ಪ್ರಚುರಪಡಿಸುವ ಅಂಗವಾಗಿ ಭಗವದ್ಗೀತೆಯನ್ನು ಸರಳವಾಗಿ ಅರ್ಥವಾಗುವಂತೆ ಅನುವಾದಿಸಿ 1 ಕೋಟಿ ಪ್ರತಿಗಳನ್ನು ಮುದ್ರಿಸಲು ತೀರ್ಮಾನಿಸಲಾಗಿದೆ. ಇದನ್ನು ಮೊದಲಿಗೆ ದೇಶಾದ್ಯಂತ ಶಾಲಾ ಮಕ್ಕಳಿಗೆ ವಿತರಿಸಲು ತೀರ್ಮಾನಿಸಲಾಗಿದೆ. ಈ ಪುಸ್ತಕವನ್ನು ತೆಲುಗು, ಕನ್ನಡ, ಇಂಗ್ಲಿಷ್‌, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಹೊರತರಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಯುದ್ಧ 100 ದಿನ ಮುಂದುವರಿಯುವ ಸಾಧ್ಯತೆ!
ಕನ್ನಡತಿ ಕೃತಿ ಕಾರಂತ್‌ಗೆ ಜಾಗತಿಕ ಪ್ರಶಸ್ತಿ