ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ

KannadaprabhaNewsNetwork |  
Published : Dec 07, 2025, 04:15 AM IST
BV Nagaratna

ಸಾರಾಂಶ

‘ಹಿಂದಿ ಭಾಷೆ ಬಾರದು ಎಂಬ ಏಕೈಕ ಕಾರಣಕ್ಕೆ ದೇಶದ ಮುಖ್ಯವಾಹಿನಿಯಿಂದ ಹೊರಗುಳಿಯಲು ದಕ್ಷಿಣ ಭಾರತದವರು ಬಯಸುವುದಿಲ್ಲ’ ಎಂದು ಕರ್ನಾಟಕದವರಾದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶೆ ನ್ಯಾ। ಬಿ.ವಿ. ನಾಗರತ್ನ ಹೇಳಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಬಗ್ಗೆ ಅವರು ಪರೋಕ್ಷವಾಗಿ ಬೇಸರಿಸಿದ್ದಾರೆ.

 ನವದೆಹಲಿ: ‘ಹಿಂದಿ ಭಾಷೆ ಬಾರದು ಎಂಬ ಏಕೈಕ ಕಾರಣಕ್ಕೆ ದೇಶದ ಮುಖ್ಯವಾಹಿನಿಯಿಂದ ಹೊರಗುಳಿಯಲು ದಕ್ಷಿಣ ಭಾರತದವರು ಬಯಸುವುದಿಲ್ಲ’ ಎಂದು ಕರ್ನಾಟಕದವರಾದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶೆ ನ್ಯಾ। ಬಿ.ವಿ. ನಾಗರತ್ನ ಹೇಳಿದ್ದಾರೆ. 

 ಹಿಂದಿ ಹೇರಿಕೆ ಬಗ್ಗೆ ಅವರು ಪರೋಕ್ಷವಾಗಿ ಬೇಸರ

ಈ ಮೂಲಕ ಹಿಂದಿ ಹೇರಿಕೆ ಬಗ್ಗೆ ಅವರು ಪರೋಕ್ಷವಾಗಿ ಬೇಸರಿಸಿದ್ದಾರೆ.ಸುಪ್ರೀಂ ಕೋರ್ಟ್‌ ವಕೀಲರ ಸಂಘ ಆಯೋಜಿಸಿದ್ದ ‘ಕಾನೂನಿನಲ್ಲಿ ಮಹಿಳಾ ಸಬಲೀಕರಣ’ ಕಾರ್ಯಕ್ರಮದಲ್ಲಿ, ಆಂಗ್ಲ ಭಾಷೆ ಬಾರದ, ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ವಕೀಲರನ್ನು ಬೆಂಬಲಿಸಲು ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ವಕೀಲೆಯೊಬ್ಬರು ಕೇಳಿದ್ದರು.

 ಭಾರತದಲ್ಲಿ ದಕ್ಷಿಣ ಭಾಗದಲ್ಲೇ 6 ಭಾಷೆಗಳಿವೆ

ಇದಕ್ಕೆ ಉತ್ತರಿಸಿದ ನ್ಯಾ। ನಾಗರತ್ನ, ‘ವೈವಿಧ್ಯಮಯ ದೇಶವಾಗಿರುವ ಭಾರತದಲ್ಲಿ, ದಕ್ಷಿಣ ಭಾಗದಲ್ಲೇ 6 ಭಾಷೆಗಳಿವೆ. ಕನ್ನಡಿಗ ಬಾಹುಳ್ಯ ಪ್ರದೇಶಕ್ಕೆ ತಮಿಳಿಗ ಬಂದರೆ ಏನು ಮಾತನಾಡಬೇಕು? ವಿವಿಧ ಭಾಷೆಗಳನ್ನು ಮಾತನಾಡುವ ಜನರಿರುವ ಪ್ರದೇಶಗಳನ್ನು ಬೆಸೆಯಲು ಇಂಗ್ಲಿಷ್‌ ಅಗತ್ಯ. ಹಾಗೆಂದು, ಹಿಂದಿ ಬರುವುದಿಲ್ಲ ಎಂಬ ಏಕೈಕ ಕಾರಣಕ್ಕೆ (ಮುಖ್ಯವಾಹಿನಿಯಿಂದ) ಹೊರಗುಳಿಯಲು ದಕ್ಷಿಣ ಭಾರತೀಯರು ಬಯಸುವುದಿಲ್ಲ’ ಎಂದರು. 

ಇದೇ ವೇಳೆ, ‘ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಮತ್ತು ಆದೇಶ ಹೊರಡಿಸಲು ಪ್ರಾದೇಶಿಕ ಭಾಷೆಗಳನ್ನು ಬಳಸಲಾಗುತ್ತದೆ. ಆದರೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಇದು ಸಾಧ್ಯವಿಲ್ಲ. ಕಾರಣ, ಇಲ್ಲಿ ಇಂಗ್ಲಿಷ್‌ ಅಧಿಕೃತ ಭಾಷೆಯಾಗಿದೆ. ಇಲ್ಲದಿದ್ದರೆ ಒಂದು ನ್ಯಾಯಾಲಯದಿಂದ ಇನ್ನೊಂದಕ್ಕೆ ನ್ಯಾಯಾಧೀಶರ ವರ್ಗಾವಣೆ ಹೇಗೆ ಸಾಧ್ಯವಾಗುತ್ತಿತ್ತು?’ ಎಂದು ವಿವರಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಿಷ್ಣು ಆಚಾರಿ ಸೇರಿ ಹಲವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ