- ಪ್ರಿಯಕರನ ಹಿಂಸೆ ತಾಳಲಾಗದೇ ಪ್ರಿಯತಮೆ ಕೃತ್ಯ । ಕೋಲ್ಕತಾದಲ್ಲಿ ಘಟನೆ
ಈ ನಡುವೆ ಸದ್ದಾಂ ನದಾಫ್ ಮೇ 18ರಂದು ಮನೆಯಿಂದ ಹೋಗಿದ್ದವನು ಹಿಂದಿರುಗಿ ಬಂದಿರಲಿಲ್ಲ. ಈ ಸಂಬಂಧ ಆತನ ಪತ್ನಿ ನಾಸ್ರಿನ್ ಖಾತುನ್ ಮೇ 23ರಂದು ದೂರು ದಾಖಲಿಸಿದ್ದರು. ಜತೆಗೆ ತಮಗೆ ತಮ್ಮ ಸಂಬಂಧಿಯೇ ಆಗಿದ್ದ ರೆಹಮಾನ್ ನದಾಫ್ ಮತ್ತು ಮೌಮಿತಾ ಹಸನ್ ವಿರುದ್ಧ ಅನುಮಾನ ಇರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮೌಮಿತಾಳನ್ನು ವಿಚಾರಣೆ ಮಾಡಿದಾಗ ಮೊದಲಿಗೆ ಒಪ್ಪಿಕೊಳ್ಳದೇ ಇದ್ದರೂ ಕೊನೆಗೆ ಪ್ರಿಯಕರನ ಕಾಟ ತಾಳಲಾಗದೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.ಆಗಿದ್ದೇನು?:ಸದ್ದಾಂ ನದಾಫ್ ಎಂಬಾತ ನಾಸ್ರಿನ್ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ ಇದರ ನಡುವೆ ತನ್ನ ಸಂಬಂಧಿಯೇ ಆಗಿದ್ದ ಮೌಮಿತಾ ಎಂಬಾಕೆಯ ಜೊತೆಗೂ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಹಲವು ವರ್ಷಗಳಿಂದ ಈ ಅಕ್ರಮ ಸಂಬಂಧ ಮುಂದುವರೆದುಕೊಂಡು ಬಂದಿತ್ತು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಪದೇ ಪದೇ ಜಗಳ ಆಗುತ್ತಿತ್ತು. ಈ ವೇಳೆ ನಮ್ಮಿಬ್ಬರ ಸಂಬಂಧದ ಬಗ್ಗೆ ನಿನ್ನ ಪತಿಗೆ ಹೇಳುತ್ತೇನೆ ಎಂದು ಸದ್ದಾಂ ನಾಸ್ರಿನ್ಗೆ ಬೆದರಿಕೆ ಹಾಕಿದ್ದ. ಇದರಿಂದ ಬೇಸತ್ತ ಆಕೆ ಇತ್ತೀಚೆಗೆ ಕೆಲ ಆಪ್ತರ ಜೊತೆಗೆ ಸೇರಿಕೊಂಡು ಸದ್ದಾಂನನ್ನು ಹತ್ಯೆಗೈದು, ಬಳಿಕ ಮನೆಯ ಗೋಡೆಯೊಂದರಲ್ಲಿ ಆತನ ಶವ ಇಟ್ಟು ಹೊರಗಿನಿಂದ ಪ್ಲಾಸ್ಟರ್ ಮಾಡಿದ್ದಳು.