ಕನ್ನಡಪ್ರಭ ವಾರ್ತೆ ಅರಸೀಕೆರೆ
ಈ ಆಹಾರಗಳಲ್ಲಿ ಪೌಷ್ಟಿಕಾಂಶ ಕಡಿಮೆ ಮತ್ತು ಕೊಬ್ಬು, ಉಪ್ಪು, ಸಕ್ಕರೆ ಇತ್ಯಾದಿಗಳ ಪ್ರಮಾಣ ಹೆಚ್ಚಾಗಿರುವುದರಿಂದ, ಇವು ಅನುಕೂಲಕರ ಅನುಭವವನ್ನು ಕೊಡುವುದಷ್ಟೆ ಹೊರತು, ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಇಂತಹ ಆಹಾರಗಳ ಅನಿಯಮಿತ ಸೇವನೆಯಿಂದಾಗಿ ಮನುಷ್ಯನು ತಾನೂ ತಿಳಿಯದಂತೆ ಅಧಿಕ ರಕ್ತದೊತ್ತಡ , ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು, ಗ್ಯಾಸ್ಟ್ರಿಕ್, ಮುಂತಾದ ಅನೇಕ ಜೀವಘಾತಕ ಕಾಯಿಲೆಗಳತ್ತ ಮನುಷ್ಯ ಆಕರ್ಷಿತನಾಗುತ್ತಿದ್ದಾನೆ. ಅಲ್ಲದೆ, ಈ ಆಹಾರಶೈಲಿಯ ಜೊತೆಗೆ ಆಲಸ್ಯ, ಚಟುವಟಿಕೆ ಕೊರತೆ, ನಿದ್ರೆ ಕೊರತೆ ಸೇರಿ ಇವು ಆರೋಗ್ಯದ ಮೇಲೆ ದ್ವಿಗುಣವಾದ ನಷ್ಟವನ್ನು ಉಂಟುಮಾಡುತ್ತವೆ. ಇದರ ಪರಿಣಾಮವಾಗಿ ಒಬ್ಬ ವ್ಯಕ್ತಿಯ ದೈನಂದಿನ ಕಾರ್ಯಕ್ಷಮತೆ ಕುಸಿಯುತ್ತದೆ ಮತ್ತು ಜೀವಮಾನ ಮಟ್ಟದಲ್ಲಿಯೇ ಅನಾರೋಗ್ಯದ ಪ್ರಭಾವ ಬೀರುತ್ತದೆ ಎಂದು ತಿಳಿಸಿದರು.
ಪ್ರೊ. ಉಷಾ ಮಾತನಾಡುತ್ತಾ, ಅತಿ ಸುಖ ಬಯಸಿದ ಮನುಷ್ಯ ಈಗ ಶ್ರಮರಹಿತ ಜೀವನಶೈಲಿಯನ್ನೇ ಅಳವಡಿಸಿಕೊಂಡಿದ್ದಾನೆ. ಇದರಿಂದಾಗಿ ನಾನಾ ರೋಗಗಳು ವ್ಯಕ್ತಿಯ ದೈನಂದಿನ ಜೀವನಕ್ಕೆ ನುಗ್ಗುತ್ತಿವೆ. ದೀಪಾಲಿ ಧಾಮ ಶಟಲ್ ಟೀಮ್ ಇಂತಹ ಶಿಬಿರವನ್ನು ರಿಯಾಯಿತಿದರದಲ್ಲಿ ನಡೆಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಶಿಸಿದರು.ಮಾಜಿ ಯೋಧ ಅನಿಲ್ ಮಾತನಾಡಿ, ಇಂತಹ ತಪಾಸಣಾ ಶಿಬಿರಗಳು ಮನೆ ಬಾಗಿಲಿಗೆ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ. ಇದರ ಸದ್ಬಳಕೆಯಾಗಬೇಕು ಎಂದು ಹೇಳಿದರು.ನ್ಯೂ ಮೆಡ್ ಹೆಲ್ತ್ ಮೈಸೂರಿನ ಪ್ರತಿನಿಧಿ ಗೋಕುಲ್ ಕೃಷ್ಣ ಮಾತನಾಡಿ, ನಮ್ಮ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನದಿಂದ ಪ್ರತಿಷ್ಠಿತ ಲ್ಯಾಬ್ಗಳನ್ನು ಹೊಂದಿದ್ದು, ಆರೋಗ್ಯ ತಪಾಸಣೆಯಲ್ಲಿ ನಿಖರತೆ ಹಾಗೂ ಸಮರ್ಥ ಸೇವೆ ನೀಡಲು ಬದ್ಧವಾಗಿದೆ. ನಮ್ಮ ಧ್ಯೇಯವೇ ಜನರ ಆರೋಗ್ಯ ಕಾಪಾಡುವುದು ಎಂದು ಹೇಳಿದರು.ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ. ಮೋಹನ್ ಕುಮಾರ್ ಚಾಲನೆ ನೀಡಿದರು. ಅವರು ಸ್ವತಃ ರಕ್ತಪರೀಕ್ಷೆಗೆ ಒಳಗಾಗಿ ಮಾದರಿಯಾದರು. ಕಾರ್ಯಕ್ರಮದಲ್ಲಿ ಬಿ. ಪರಮೇಶ್, ಹೇಮಂತ್ ಕುಮಾರ್, ಕಿರಣ್ ಕುಮಾರ್, ನ್ಯೂ ಮೆಡ್ ಹೆಲ್ತ್ನ ಮಲ್ಲಿಕಾರ್ಜುನ್, ದೀಪಾಲಿ ಧಾಮ ಶಟಲ್ ಟೀಮ್ನ ಕೃಷ್ಣಮೂರ್ತಿ, ಸತೀಶ್, ಹರೀಶ್, ಕೇಶವಮೂರ್ತಿ, ಮಯೂರ್ ನಾಯಕ್, ಚಂದ್ರ ನಾಯಕ್, ಯಲ್ಲಪ್ಪ,ಕೆಪಿಎಸ್ ವಿಶ್ವನಾಥ್, ಡಿಜಿ ಗಿರಿ ಗೌಡ, ಶಿವು ಪಾಟೀಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.