ಲೋಕ ಅದಾಲತ್‍ನಲ್ಲಿ ₹9.98 ಕೋಟಿ ಮೊತ್ತದ ಪ್ರಕರಣ ಇತ್ಯರ್ಥ

KannadaprabhaNewsNetwork |  
Published : Sep 16, 2024, 01:53 AM IST
15ಹೆಚ್‍ಆರ್‍ಆರ್1ಹರಿಹದಲ್ಲಿ ಲೋಕ್ ಅದಾಲತ್ ನಿಮಿತ್ತ ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಪ್ರಕರಣಗಳ ರಾಜಿ ಸಂಧಾನ ಪ್ರಕ್ರಿಯೆ ಜರುಗಿತು. | Kannada Prabha

ಸಾರಾಂಶ

ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ವಿಚಾರಣೆಗೆ

ಕನ್ನಡಪ್ರಭ ವಾರ್ತೆ ಹರಿಹರ

ನಗರದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ವಿಚಾರಣೆಗೆ ಬಾಕಿ ಇದ್ದ 134 ಮತ್ತು ವ್ಯಾಜ್ಯ ಪೂರ್ವದ 37,575 ದಾವೆ ಸೇರಿ ಒಟ್ಟು 9.98 ಕೋಟಿ ರು. ಮೊತ್ತದ, 37,709 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪದ್ಮಶ್ರಿ ಮುನ್ನೋಳಿ ತಿಳಿಸಿದ್ದಾರೆ.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 2,755 ಪ್ರಕರಣಗಳಲ್ಲಿ, 353 ಪ್ರಕರಣಗಳನ್ನು ಲೋಕ್ ಅದಲತ್‍ಗೆ ನಿಗಧಿಪಡಿಸಲಾಗಿತ್ತು. ಇವುಗಳಲ್ಲಿ 47.95 ಲಕ್ಷ ರು. ಮೌಲ್ಯದ 27 ಪ್ರಕರಣಗಳು ಇತ್ಯರ್ಥವಾಗಿದ್ದು, ವ್ಯಾಜ್ಯ ಪೂರ್ವದ 37 ಪ್ರಕರಣಗಳಲ್ಲಿ 2.5 ಲಕ್ಷ ಮೌಲ್ಯದ 2 ಪ್ರಕರಣ ಇತ್ಯರ್ಥವಾಗಿವೆ.

ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 1,156 ಪ್ರಕರಣಗಳಲ್ಲಿ, 890 ಪ್ರಕರಣಗಳನ್ನು ಲೋಕ ಅದಾಲತ್‍ಗೆ ನಿಗಧಿಪಡಿಸಲಾಗಿತ್ತು. ಇವುಗಳಲ್ಲಿ 9.6 ಲಕ್ಷ ರು.ಮೌಲ್ಯದ 33 ಪ್ರಕರಣಗಳು ಇತ್ಯರ್ಥವಾಗಿವೆ. ವ್ಯಾಜ್ಯ ಪೂರ್ವದ 12,844 ಪ್ರಕರಣಗಳಲ್ಲಿ 3.01 ಕೋಟಿ ರು. ಮೌಲ್ಯದ 12,528 ಪ್ರಕರಣಗಳು ಇತ್ಯರ್ಥವಾಗಿವೆ.

1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 2,373 ಪ್ರಕರಣಗಳಲ್ಲಿ, 1,096 ಪ್ರಕರಣಗಳನ್ನು ಲೋಕ ಅದಲತ್‍ಗೆ ನಿಗಧಿಪಡಿಸಲಾಗಿತ್ತು. ಇವುಗಳಲ್ಲಿ 16 ಲಕ್ಷ ರು. ಮೌಲ್ಯದ 45 ಪ್ರಕರಣಗಳು ಇತ್ಯರ್ಥವಾಗಿವೆ. ವ್ಯಾಜ್ಯ ಪೂರ್ವದ 12,835 ಪ್ರಕರಣಗಳಲ್ಲಿ 3.04 ಕೋಟಿ ರು.ಮೌಲ್ಯದ 12,520 ಪ್ರಕರಣ ಇತ್ಯರ್ಥವಾಗಿವೆ.

2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 1,140 ಪ್ರಕರಣಗಳಲ್ಲಿ, 1,066 ಪ್ರಕರಣಗಳನ್ನು ಲೋಕ್ ಅದಲತ್‍ಗೆ ನಿಗಧಿಪಡಿಸಲಾಗಿತ್ತು. ಇವುಗಳಲ್ಲಿ 7.16 ಲಕ್ಷ ರು.ಮೌಲ್ಯದ 29 ಪ್ರಕರಣಗಳು ಇತ್ಯರ್ಥವಾಗಿವೆ. ವ್ಯಾಜ್ಯ ಪೂರ್ವದ 12,839 ಪ್ರಕರಣಗಳಲ್ಲಿ 3.08 ಕೋಟಿ ರು. ಮೌಲ್ಯದ 12,525 ಪ್ರಕರಣ ಇತ್ಯರ್ಥವಾಗಿವೆ.

ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ವೀಣಾ ಕೋಳೇಕರ, ಜ್ಯೋತಿ ಅಶೋಕ ಪತ್ತಾರ ಮತ್ತು ಹಿರಿ-ಕಿರಿಯ ವಕೀಲರು, ಕಕ್ಷಿದಾರರು ಭಾಗವಹಿಸಿದ್ದರು.

ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಗೆ ನೆರವು: ಅದಾಲತ್‍ಗೆ ಆಗಮಿಸಿದ್ದ ಕಕ್ಷಿಗಾರರಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ವ್ಯಕ್ತಿಯೊಬ್ಬನ ಸಂಕಷ್ಟವನ್ನು ಆಲಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣನವರ್ ಅವರು ರಾಜಿ ಸಂಧಾನದ ಮೂಲಕ ಆತನ ಮೇಲಿದ್ದ ಸಾಲದ ಹೊರೆಯನ್ನು ಇಳಿಸಿದ ಘಟನೆ ನಡೆಯಿತು.

ಕೆನರಾ ಬ್ಯಾಂಕ್‍ನಲ್ಲಿ 8.18 ಲಕ್ಷ ಸಾಲ ಪಡೆದಿದ್ದ ತಾಲೂಕಿನ ಬನ್ನಿಕೋಡು ಗ್ರಾಮದ ಕಾಡಸಿದ್ದಪ್ಪ ಎಂಬುವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರಿಂದ ಸಾಲ ತೀರಿಸಲಾಗಿರಲಿಲ್ಲ. ಅವರ ವಿರುದ್ಧ ಸಾಲ ವಸೂಲಾತಿಗೆ ದಾಖಲಿಸಿದ್ದ ಪ್ರಕರಣದಲ್ಲಿ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಿಗೆ ಕಾಡಸಿದ್ದಪ್ಪನ ಅಸಹಾಯಕತೆ ವಿವರಿಸಿದ ಕರೆಣ್ಣನವರ್ ಸಹಕರಿಸುವಂತೆ ಕೇಳಿದ್ದರಿಂದ 1.35 ಲಕ್ಷ ರು.ಗೆ ಪ್ರಕರಣ ರಾಜಿಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!