ನಗರದಲ್ಲಿ ಸಂಭ್ರಮದಿಂದ ಜರುಗಿದ ಹರೇ ಕೃಷ್ಣ ರಥಯಾತ್ರೆ

KannadaprabhaNewsNetwork |  
Published : Feb 11, 2024, 01:46 AM IST
ಅಅಅಅ | Kannada Prabha

ಸಾರಾಂಶ

ಈ ರಥ ಯಾತ್ರೆಗೆ ಹಿರಿಯ ಸನ್ಯಾಸಿ ಭಕ್ತಿ ರಸಮೃತ ​​ಸ್ವಾಮಿ ಮಹಾರಾಜ್ ಮತ್ತು ಚೈತನ್ಯ ಸುಂದರ ಮಹಾರಾಜ್, ಮಾರಿಷಸ್ ಮತ್ತು ವೃಂದಾವಂದಾಸ್ ಮಹಾರಾಜರು, ಶಾಸಕ ಅಭಯ ಪಾಟೀಲ, ರಮಾಕಾಂತ್ ಕೊಂಡೂಸ್ಕರ, ಎಂ. ಎಲ್. ಅಗರವಾಲ್, ಅರುಣ ಕಟಾಂಬಳೆ, ಕಾನುಭಾಯಿ ಠಕ್ಕರ್, ರಾಜು ಹತ್ತರಗಿ ಹಾಗೂ ಇಸ್ಕಾನ್ ಹಲವು ಹಿರಿಯರು ರಥಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿನಗರದಲ್ಲಿ ಇಸ್ಕಾನ್‌ ಆಯೋಜಿಸಿರುವ 26ನೇ ಶ್ರೀ ಹರೇ ಕೃಷ್ಣ ರಥ ಯಾತ್ರೆ ಶನಿವಾರ ಜರುಗಿತು. ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾಯಿತು.

ಈ ರಥ ಯಾತ್ರೆಗೆ ಹಿರಿಯ ಸನ್ಯಾಸಿ ಭಕ್ತಿ ರಸಮೃತ ​​ಸ್ವಾಮಿ ಮಹಾರಾಜ್ ಮತ್ತು ಚೈತನ್ಯ ಸುಂದರ ಮಹಾರಾಜ್, ಮಾರಿಷಸ್ ಮತ್ತು ವೃಂದಾವಂದಾಸ್ ಮಹಾರಾಜರು, ಶಾಸಕ ಅಭಯ ಪಾಟೀಲ, ರಮಾಕಾಂತ್ ಕೊಂಡೂಸ್ಕರ, ಎಂ. ಎಲ್. ಅಗರವಾಲ್, ಅರುಣ ಕಟಾಂಬಳೆ, ಕಾನುಭಾಯಿ ಠಕ್ಕರ್, ರಾಜು ಹತ್ತರಗಿ ಹಾಗೂ ಇಸ್ಕಾನ್ ಹಲವು ಹಿರಿಯರು ರಥಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ರಥ ಯಾತ್ರೆ ಕಾಲೇಜು ರಸ್ತೆ, ಸಮಾದೇವಿ ಗಲ್ಲಿ, ಖಡೇಬಜಾರ ಗಣಪತ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ ಗಲ್ಲಿ, ಪಾಟೀಲ ಗಲ್ಲಿ, ರೈಲ್ವೆ ಮೇಲ್ಸೆತುವೆ ಮೂಲಕ ಕಪಿಲೇಶ್ವರ ರಸ್ತೆ ಮೂಲಕ ಖಡೇಬಜಾರ ಶಹಾಪುರ, ಆಯುರ್ವೇದಿಕ್ ಕಾಲೇಜು ರಸ್ತೆ ಮೂಲಕ ಟಿಳಕವಾಡಿಯ ಇಸ್ಕಾನ್ ದೇವಸ್ಥಾನ ತಲುಪಿತು. ಇಸ್ಕಾನ್ ದೇವಸ್ಥಾನದ ಮಂಟಪದಲ್ಲಿ. ಹೂವಿನಿಂದ ಅಲಂಕೃತಗೊಂಡ ರಥ ಅದರಲ್ಲಿರುವ ಮೂರ್ತಿಗಳು ಎಲ್ಲರ ಗಮನ ಸೆಳೆದವು. ರಥಯಾತ್ರೆಯ ಸಂದರ್ಭದಲ್ಲಿ ಇದನ್ನು ಅಲಂಕರಿಸಲಾಗಿತ್ತು.

ರಥಯಾತ್ರೆ ಸಾಗುವ ಮಾರ್ಗದಲ್ಲಿ ಹಲವೆಡೆ ರಥಯಾತ್ರೆಗೆ ಪುಷ್ಪಾರ್ಚನೆ ಮಾಡಲಾಯಿತು.ರಥಯಾತ್ರೆಯ ಮುಂಭಾಗದಲ್ಲಿ 5 ತಂಡಗಳು ರಂಗೋಲಿ ಬಿಡಿಸುತ್ತಿದ್ದವು, ನಂತರ ಸುಮಾರು 20 ಅಲಂಕೃತ ಎತ್ತುಗಳು, ಸಾವಿರಾರು ಭಕ್ತರು ಭಜನೆ, ಕೀರ್ತನೆಯಲ್ಲಿ ಮಗ್ನರಾಗಿದ್ದರು. ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತಾ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಕೃಷ್ಣನ ಲೀಲೆಯನ್ನು ಬಿಂಬಿಸುವ ಅನೇಕ ದೃಶ್ಯಗಳು ಹಾಗೂ ರಾಮಾಯಣದ ಅನೇಕ ದೃಶ್ಯಗಳನ್ನು ವಿವಿಧ ರೈಲುಗಳಲ್ಲಿ ಪ್ರದರ್ಶಿಸಲಾಯಿತು. ಹಂದಿಗನೂರಿನ ಜ್ಞಾನೇಶ್ವರ ಭಜನೆ ಮಂಡಳಿಯ ಡೋಲು ವಾದನ ತಂಡ ಹಾಗೂ ಭಜನೆ ಎಲ್ಲರ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ