ಕನ್ನಡಪ್ರಭ ವಾರ್ತೆ, ವಿಧಾನಸಭೆ
ಈ ವೇಳೆ ಸ್ಪೀಕರ್ ಯು.ಟಿ. ಖಾದರ್, ಸದನಕ್ಕೆ ಕಪ್ಪು ಬಟ್ಟೆ ಧರಿಸಿ ಬರುವಂತಿಲ್ಲ. ಇನ್ನೊಮ್ಮೆ ಈ ರೀತಿ ಮಾಡಬೇಡಿ ಎಂದರು.
------------------ಮಾತು ಮುಂದುವರೆಸಿದ ಬಸವರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ 12 ಬೋರ್ವೆಲ್ ಹಾಗೂ 8 ಮಂದಿಗೆ ನೇರ ಸಾಲಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದವರಿಗೆ ಏನು ಸಮಾಯಿಷಿ ನೀಡಬೇಕು? ಲಕ್ಷಾಂತರ ರು. ಖರ್ಚು ಮಾಡಿ ಉಪಯೋಗವಿಲ್ಲದ ಸಮಾವೇಶಗಳನ್ನು ಮಾಡುತ್ತೀರಿ. ಜನರಿಗೆ ಸೌಲಭ್ಯಗಳನ್ನು ಕೊಡಲು ನಿಮ್ಮ ಬಳಿ ಹಣ ಇರುವುದಿಲ್ಲವೇ? ಎಂದು ಸಚಿವರನ್ನು ಪ್ರಶ್ನಿಸಿದರು.
ಇದಕ್ಕೆ ಖಾದರ್, ಕೋಟ್ಯಂತರ ರು. ಖರ್ಚು ಮಾಡಿ ಶಾಸಕರಾಗುತ್ತೀರಿ. ನಿಮ್ಮ ಬಳಿ ಜನರಿಗೆ ಸೌಲಭ್ಯ ಕಲ್ಪಿಸಲು ಹಣ ಇರುವುದಿಲ್ಲವೇ ಎಂದು ಹೇಳಿದರು.ಜತೆಗೆ ‘ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅರ್ಜಿ ಸಲ್ಲಿಸಿದವರಲ್ಲಿ ಶೇ.50 ರಷ್ಟು ಮಂದಿಗಾದರೂ ಸೌಲಭ್ಯ ಒದಗಿಸಲು ಪ್ರರಿಶೀಲಿಸಲಾಗುವುದು’ ಎಂದು ಉತ್ತರಿಸಿದ ಸಚಿವ ಶಿವರಾಜ್ ತಂಗಡಗಿ ಅವರನ್ನು ತಡೆದ ಸ್ಪೀಕರ್, ‘ನೀವು ಭರವಸೆ ನೀಡಿ ಅವರಿಗೆ ಕಾಯುವಂತೆ ಮಾಡಬೇಡಿ. ಅದು ಸಾಧ್ಯವಿಲ್ಲ ಎಂಬುದು ನಿಮಗೂ ಗೊತ್ತಿದೆ. ಆಗಲ್ಲ ಎಂದು ಹೇಳಿಬಿಡಿ’ ಎಂದು ಹೇಳಿ ಕೂರಿಸಿದರು.