ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಾಯಕರ ತಪ್ಪಿನಿಂದ ವಿಧಾನಸಭೆಯಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ ಹೊರತು ಕಾರ್ಯಕರ್ತರಿಂದಲ್ಲ. ಪ್ರಪಂಚದ ನಾಯಕರಾಗಿ ಹೊರಹೊಮ್ಮಿರುವ ನರೇಂದ್ರ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಇಂದು ಜಗತ್ತಿನಲ್ಲಿ 5ನೇ ದೊಡ್ಡ ಆರ್ಥಿಕ ಸ್ಥಾನ ಹೊಂದಿದೆ. ಜಮ್ಮು ಕಾಶ್ಮೀದಲ್ಲಿ 370ನೇ ವಿಧಿ ರದ್ದತಿ, ಶ್ರೀರಾಮ ಮಂದಿರ ಸ್ಥಾಪನೆ, ಕಾಶಿ ಹರಿದ್ವಾರ, ಉಜ್ಜೈನಿ, ಹೀಗೆ ಹತ್ತು ಹಲವು ದೇವಾಲಯ ಅಭಿವೃದ್ಧಿ ಪಡಿಸುವುದರೊಂದಿಗೆ ದೇಶದ ಪ್ರವಾಸೋದ್ಯಮ ಅತ್ಯಂತ ಬೆಳವಣಿಗೆ ಕಂಡಿವೆ. ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣಗಳು, ಬಂದರುಗಳು ನಿರ್ಮಾಣ ಮಾಡುವುದರ ಜೊತೆಗೆ ಜನಸಾಮನ್ಯರ ಅನಕೂಲಕರ ಉಜ್ವಲಾ ಯೋಜನೆ, ಸುಕನ್ಯಾ ಯೋಜನೆ, ಕಿಸಾನ ಸಮ್ಮಾನ ಯೋಜನೆ ಅನುಷ್ಠಾನ ಮಾಡುವುದರ ಮೂಲಕ ಜನಸಾಮನ್ಯರ ಸೇವೆಗೆ ಸದಾ ಸಿದ್ದವಿರುವ ಪ್ರಧಾನಿ ಮೋದಿಜಿ ಸಾಧನೆಗಳನ್ನು ಜನಕ್ಕೆ ತಿಳಿಸಬೇಕು ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ಬಿಜೆಪಿ ಕಳೆದ 10 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ಪ್ರತಿಯೊಬ್ಬರ ಮನ ಮನಕ್ಕೆ ತಲುಪಿಸುವ ಗ್ರಾಮ ಚಲೋ ಅಭಿಯಾನವನ್ನು ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲಿ ಯಶಸ್ವಿಗೋಳಿಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.ಪ್ರತಿ ಕಾರ್ಯಕರ್ತರಿಗೆ ನಿಗದಿಪಡಿಸಿದ ಹಳ್ಳಿಗೆ ಕಡ್ಡಾಯವಾಗಿ ತೆರಳಿ ಗ್ರಾಮ ಚಲೋ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಕಡು ಬಡವರಿಗೆ ನೀಡುವ ಗರಿಬ್ ಕಲ್ಯಾಣ ಯೋಜನೆ, ನಾರಿ ಶಕ್ತಿ ಯೋಜನೆ, ಮನೆ ಮನೆಗೆ ನೀರು ಯೋಜನೆ ಬಗ್ಗೆ ತಿಳಿಸಬೇಕು ಎಂದರು.
ಮಾಜಿ ಶಾಸಕ ಜಗದೀಶ ಮೆಟಗುಡ್ ಮಾತನಾಡಿ, ಅಯೋಧ್ಯೆಯ ರಾಮಮಂದಿರ ದರ್ಶನಕ್ಕೆ ತೆರಳುವ ಕಾರ್ಯಕರ್ತರಿಗೆ ಬರುವ ದಿನಗಳಲ್ಲಿ ಆನ್ಲೈನ್ ಅರ್ಜಿ ಪ್ರಾರಂಭವಾಗಲಿದ್ದು, ಅದಕ್ಕೆ ಎಲ್ಲ ಗ್ರಾಮದ ಹಿರಿಯರು ಪಾಲ್ಗೊಳ್ಳಬೇಕು ಎಂದರು.ಪ್ರಾಸ್ತಾವಿಕವಾಗಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಾತನಾಡಿ, ಬರುವ ಲೋಕಸಭಾ ಚುನಾವಣೆ ಅತ್ಯಂತ ಪ್ರಮುಖವಾಗಿದ್ದು, ಕೇಂದ್ರ ಸರ್ಕಾರದ ನೂರಾರು ಸಾಧನೆಗಳ ಕರಪತ್ರವನ್ನು ಮನೆ ಮನೆಗೆ ಹಂಚಬೇಕೆಂದರು.
ವೇದಿಕೆ ಮೇಲೆ ಮಂಡಲ ಅಧ್ಯಕ್ಷ ಗುರುಪಾದ ಕಳ್ಳಿ, ಗ್ರಾಮ ಚಲೋ ಅಭಿಯಾನದ ಜಿಲ್ಲಾ ಸಂಚಾಲಕ ಗುರು ಮೆಟಗುಡ್, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್. ಎಸ್.ಸಿದ್ದನಗೌಡರ, ನಾಗಪ್ಪ ಸಂಗೊಳ್ಳಿ, ಶಂಕರ ಚೌಡಣ್ಣವರ, ಇಂಚಲ ಗ್ರಾಪಂ ಅಧ್ಯಕ್ಷ ಶಂಕರ ಬಾಗೆವಡಿ ಇದ್ದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ರೈಲ್ವೆ ಮಂಡಳಿ ನೂತನ ನಿರ್ದೇಶಕ ಶಂಕರಯ್ಯ ಮಲ್ಲಯನವರಮಠ, ಮುರಳಿದರ ಮಾಳೋದೆ, ಬಾಬು ತೇಗೂರ, ನಿವೃತ್ತ ಸೈನಿಕ ನಾಗೇಶ ದೇಸಾಯಿ, ಅರ್ಬನ್ ಬ್ಯಾಂಕ್ ಸಿಬ್ಬಂದಿ ಬಸವರಾಜ ಬಡಿಗೇರ ಅವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಅಶೋಕ ಖನಗಾಂವಿ, ಲಕ್ಕಪ್ಪ ಕಾರ್ಗಿ, ಸಂಜಯ ನಾಯಕರ, ಸುರೇಶ ಮ್ಯಾಕಲ್, ಸಚಿನ ಕಡಿ, ಗೌಡಪ್ಪ ಹೊಸಮನಿ, ಶಿವನಗೌಡ ಪಾಟಿಲ, ಪ್ರಕಾಶ ಕಾರಿಮನಿ, ಆನಂದ ಕರಿಮುದಕನ್ನವರ, ನೂರಾರು ಕಾರ್ಯಕರ್ತರು ಇದ್ದರು. ಮಾಜಿ ತಾಪಂ ಸದಸ್ಯ ಜಗದೀಶ ಬೂದಿಹಾಳ ಸ್ವಾಗತಿಸಿದರು, ಸಂತೋಷ ಹಡಪದ ನಿರುಪಿಸಿದರು. ಸುರೇಶ ಮ್ಯಾಕಲ್ ವಂದಿಸಿದರು.------------
ಕೋಟ್..ಭಾರತ ಇಂದು ಜಗತ್ತಿನಲ್ಲಿ 5ನೇ ದೊಡ್ಡ ಆರ್ಥಿಕ ಸ್ಥಾನ ಹೊಂದಿದೆ. ಜಮ್ಮು ಕಾಶ್ಮೀದಲ್ಲಿ 370ನೇ ವಿಧಿ ರದ್ದತಿ, ಶ್ರೀರಾಮ ಮಂದಿರ ಸ್ಥಾಪನೆ, ಕಾಶಿ ಹರಿದ್ವಾರ, ಉಜ್ಜೈನಿ, ಹೀಗೆ ಹತ್ತು ಹಲವು ದೇವಾಲಯ ಅಭಿವೃದ್ಧಿ ಪಡಿಸುವುದರೊಂದಿಗೆ ದೇಶದ ಪ್ರವಾಸೋದ್ಯಮ ಅತ್ಯಂತ ಬೆಳವಣಿಗೆ ಕಂಡಿವೆ.
ಈರಣ್ಣ ಕಡಾಡಿ. ರಾಜ್ಯಸಭಾ ಸದಸ್ಯ