ಕನ್ನಡಪ್ರಭ ವಾರ್ತೆ ಉಡುಪಿ
ಈ ಬಗ್ಗೆ ಸಂಸ್ಥೆಯ ಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.
ಘಟಿಕೋತ್ಸವದ ಅಧ್ಯಕ್ಷತೆಯನ್ನು ನಿಟ್ಟೆ ವಿವಿಯ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರು ವಹಿಸಲಿದ್ದು, ಶ್ರೀರಾಮ್ ಫೈನಾನ್ಸ್ ಕಂ.ಲಿ.ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಉಮೇಶ್ ಗೋವಿಂದ್ ರೇವಣ್ಕರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ನಿಟ್ಟೆ ಆಸ್ಪತ್ರೆ ನಿರ್ವಹಣಾ ಸಹಕುಲಪತಿ ಪ್ರೊ.ಡಾ.ಎಂ. ಶಾಂತಾರಾಮ ಶೆಟ್ಟಿ ಮತ್ತು ಆಡಳಿತ ಸಹಕುಲಾಧಿಪತಿ ವಿಶಾಲ್ ಹೆಗ್ಡೆ ಉಪಸ್ಥಿತರಿರುತ್ತಾರೆ.ಈ ಘಟಿಕೋತ್ಸವದಲ್ಲಿ ಒಟ್ಟು 311 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಅವರಲ್ಲಿ 29 ಮಂದಿ ಮಾಸ್ಟರ್ ಆಪ್ ಟೆಕ್ನಾಲಜಿ, 120 ಮಂದಿ ಮಾಸ್ಚರ್ ಆಫ್ ಕಂಪ್ಯೂಟರ್ ಮತ್ತು 162 ಮಾಸ್ಟರ್ ಅಫ್ ಬಿಸಿನೆಟ್ ಅಡ್ಮಿನಿಸ್ಟ್ರೇಷನ್ ವಿದ್ಯಾರ್ಥಿಗಳಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳು ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್ನ ಪ್ರಥಮ ತಂಡದ ವಿದ್ಯಾರ್ಥಿಗಳಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿಟ್ಟೆಯ ವಿವಿಯ ಕುಲಸಚಿವ ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಪ್ರೋ. ಪ್ರಸಾದ್ ಬಿ.ಶೆಟ್ಟಿ, ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ ಮುಗೇರಾಯ ಮತ್ತು ಇತರ ಪ್ರಮುಖರಾದ ಡಾ.ನಿರಂಜನ್ ಚಿಪ್ಳೊಂಕರ್ ಮತ್ತು ಪ್ರೊ. ಸುಧೀರ್ ಉಪಸ್ಥಿತರಿದ್ದರು.
2008ರಲ್ಲಿ ಸ್ಥಾಪನೆಯಾದ ನಿಟ್ಟೆ ವಿವಿಯು, ಎನ್ಎಎಸಿಯಿಂದ ಎ+, ಎನ್ಐಆರ್ಎಫ್ನಿಂದ ದೇಶದ 1,100 ವಿವಿ ಗಳ ಪೈಕಿ 66ನೇ ಸ್ಥಾನ ಪಡೆದಿದೆ. 15 ಇಂಜಿನಿಯರಿಂಗ್ ವಿಭಾಗಗಳನ್ನು ಹೊಂದಿದ್ದು 277ಕ್ಕೂ ಹೆಚ್ಚು ಕಂಪೆನಿಗಳು ಕ್ಯಾಂಪಸ್ ಆಯ್ಕೆಗಾಗಿ ಬರುತ್ತವೆ. ಕಳೆದ ಸಾಲಿನಲ್ಲಿ 856 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿ ಆಯ್ಕೆಯಾಗಿದ್ದಾರೆ.