ಕನ್ನಡಪ್ರಭ ವಾರ್ತೆ ಬೆಳಗಾವಿ
ದಿನದಿಂದ ದಿನಕ್ಕೆ ಬಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಕೆರೆಯಲ್ಲಿ ನೂರಾರು ಮೀನುಗಳು ಸತ್ತು ತೇಲಾಡುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ.ಚಿಕ್ಕಬಾಗೇವಾಡಿ ಗ್ರಾಮದ ನಿವಾಸಿ ಶಂಕರಗೌಡ ಪಾಟೀಲ ಎಂಬುವವರು ತಮ್ಮ ಜಮೀನಿನ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದರು. ಆದರೆ, ವಿಪರೀತ ಬಿಸಿಲಿನ ತಾಪಮಾನಕ್ಕೆ ಸಾವಿರಾರು ಮೀನುಗಳು ಅಸುನೀಗಿದ್ದು, ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ 50ಸಾವಿರ ಮೀನು ಬಿಟ್ಟಿದ್ದ ಮಾಲೀಕ ಆಘಾತಗೊಂಡಿದ್ದಾನೆ.
ವಿಪರೀತ ಬಿಸಿಲಿನಿಂದ ಕೆರೆಯ ನೀರು ಬತ್ತಿ ಬಿಸಿಲಿನ ಝಳಕ್ಕೆ ಸಾವಿರಾರು ಮೀನುಗಳ ಸಾಮೂಹಿಕ ಅಸುನೀಗಿವೆ. ಬೇಸಿಗೆ ಆರಂಭದಲ್ಲೇ ಮೀನು ಸಾಕಾಣಿಕೆದಾರರಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ. ಸಾವಿನ ಬಗ್ಗೆ ಮೀನುಗಾರರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು, ಹಾಗೂ ರಾಜ್ಯ ಸರ್ಕಾರ ಕೂಡಲೇ ಮೀನು ಸಾಗಾಣಿಕೆದಾರರಿಗೆ ಸೂಕ್ತ ಪರಿಹಾರ ನೀಡಿಬೇಕೆಂದು ಮೀನು ಸಾಗಾಣಿಗೆ ಶಂಕರಗೌಡ ಪಾಟೀಲ ಆಗ್ರಹಿಸಿದ್ದಾರೆ.