ರಾಮನಗರ: ಅನರ್ಹ ಬಿಪಿಎಲ್ ಕಾರ್ಡ್ಗಳ ವಿರುದ್ಧ ಕ್ರಮ ವಹಿಸಿರುವ ಆಹಾರ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅನುಮಾನಾಸ್ಪದ 15,053 ಬಿಪಿಎಲ್ ಕಾರ್ಡ್ಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದೆ.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಇಲಾಖೆ 2025ರ ಆಗಸ್ಟ್ ಅಂತ್ಯಕ್ಕೆ ನಾನಾ ಮೂಲಗಳಿಂದ ಮಾಹಿತಿ ಪಡೆದಿದೆ. ಅನುಮಾನಾಸ್ಪದ ಬಿಪಿಎಲ್ ಪಡಿತರದಾರರನ್ನು ಗುರುತಿಸಿ ಅವುಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದು, ಅನರ್ಹ ಎಂದು ಕಂಡುಬಂದಲ್ಲಿ ಅಂತಹ ಕಾರ್ಡ್ಗಳನ್ನು ರದ್ದು ಮಾಡಲು ಮುಂದಾಗಿದೆ.
ಯಾರೆಲ್ಲ ಅನರ್ಹರ ಪಟ್ಟಿಗೆ:ರಾಜ್ಯ ಸರ್ಕಾರದ ಪ್ರಕಾರ, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತ ಹೆಚ್ಚಿರುವವರು, ಸ್ವಂತ ವೈಟ್ ಬೋರ್ಡ್ನ ನಾಲ್ಕು ಚಕ್ರದ ವಾಹನ ಉಳ್ಳವರು, ಆದಾಯ ತೆರಿಗೆ ಪಾವತಿಸುವವರು, 7 ಹೆಕ್ಟೇರ್ಗೂ ಅಧಿಕ ಭೂಮಿ ಹೊಂದಿರುವವರು, ಸರ್ಕಾರಿ ಇಲಾಖೆಯ ನಾಮ ನಿರ್ದೇಶಕರು, ದೊಡ್ಡ ಕಂಪನಿಗಳಲ್ಲಿ ಉದ್ಯೋಗದಲ್ಲಿರುವವರು ಬಿಪಿಎಲ್ ಕಾರ್ಡ್ಗಳನ್ನು ಪಡೆಯಲು ಅನರ್ಹರು ಎಂದು ಗುರುತಿಸಲಾಗಿದೆ.
ಅನರ್ಹರ ಬಿಪಿಎಲ್ ಕಾರ್ಡ್ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಗಳ ಬಳಿ ನೋಟಿಸ್ ಹಾಕಲಾಗಿದೆ. ಗ್ರಾಮದ ವಾಸಿಯಾದ ನೀವು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಪಡಿತರ ಚೀಟಿ ಸಂಖ್ಯೆ, ನಿಮ್ಮ ಪಡಿತರ ಚೀಟಿಯಲ್ಲಿನ ಸದಸ್ಯರಾದ - ಸದರಿಯವರಿಗೆ ಸಂಬಂಧಿಸಿದಂತೆ ಉಲ್ಲೇಖ(3)ರ ವರದಿಯಲ್ಲಿ ಸಿಬಿಡಿಐ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಗಿಂತ ಹೆಚ್ಚಿದ್ದು ಉಲ್ಲೇಖ(1)ರಂತೆ ನೀವು ಎಎವೈ/ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಾಗಿರುವುದಿಲ್ಲ. ಈ ಬಗ್ಗೆ, ಪರಿಶೀಲಿಸಿ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿ/ಎಪಿಎಲ್ ಚೀಟಿಯನ್ನಾಗಿ ಪರಿವರ್ತಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಲ್ಲೇಖ(2)ರಂತೆ ಸೂಚಿಸಲಾಗಿರುತ್ತದೆ ಎಂದು ವಿವರಣೆ ನೀಡಲಾಗಿದೆ.
ಪಡಿತರದಾರರಲ್ಲಿ ಗೊಂದಲ ನಿರ್ಮಾಣ :
ಜಿಲ್ಲೆಯಲ್ಲಿ ವಾರ್ಷಿಕ 1.20 ಲಕ್ಷ ವಾರ್ಷಿಕ ಆದಾಯ ಹೊಂದಿರುವ 13006, 25 ಲಕ್ಷ ರೂಪಾಯಿಗಿಂತಲೂ ಹೆಚ್ಚು ಜಿಎಸ್ಟಿ ವ್ಯವಹಾರ ನಡೆಸಿರುವ 87 ಕುಟುಂಬಗಳು, ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವ 557 ಜನ, 7.5 ಎಕರೆಗಿಂತಲೂ ಹೆಚ್ಚು ಜಮೀನು ಹೊಂದಿರುವ 45 ಜನ, 12 ತಿಂಗಳಿಂದ ನಿಷ್ಕ್ರೀಯಯವಾಗಿರುವ 738, 6 ತಿಂಗಳಿಂದ ನಿಷ್ಕ್ರೀಯವಾಗಿರುವ 357, ಹೊರ ರಾಜ್ಯದಿಂದ ಬಂದು ಇಲ್ಲಿ ಅಕ್ರಮವಾಗಿ ಪಡಿತರ ಚೀಟಿ ಪಡೆದವರ ಸಂಖ್ಯೆ 196, ಸ್ವಂತ ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಉಳ್ಳವರು 13 ಜನ ಕೂಡ ಬಿಪಿಎಲ್ ಅನರ್ಹರು ಎಂದು ಆಹಾರ ಇಲಾಖೆಯ ಗುರುತಿಸಿ ಪಟ್ಟಿ ಮಾಡಿದೆ.
ಬಿಪಿಎಲ್ ಕಾರ್ಡ್ದಾರರ ಅರ್ಹತೆ ಪರಿಶೀಲನೆಗೆ ಕ್ರಮ
ಕೋಟ್ ............
- ಶಿಲ್ಪಾ ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂ.ದಕ್ಷಿಣ ಜಿಲ್ಲೆ
ಬಾಕ್ಸ್.............ಅನುಮಾನಾಸ್ಪದ ಬಿಪಿಎಲ್ ಕಾರ್ಡ್ಗಳು
ರಾಮನಗರ 3579ಚನ್ನಪಟ್ಟಣ 3734
ಕನಕಪುರ 4573ಮಾಗಡಿ 3579
ಒಟ್ಟು 15053