ಹಾನಗಲ್ಲ ತಾಲೂಕಲ್ಲಿ ಇನ್ನೂ ಶೇ. 25ರಷ್ಟು ಬಿತ್ತನೆ ಬಾಕಿ

KannadaprabhaNewsNetwork | Published : Jun 25, 2025 1:18 AM

ತಾಲೂಕಿನ 46687 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈಗ 35 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಉಳಿದ ಶೇ. 25ರಷ್ಟು ಬಿತ್ತನೆಗೆ ಮಳೆ ಅವಕಾಶ ಮಾಡಿಕೊಡದೆ ನಿತ್ಯ ಸುರಿಯುತ್ತಿದೆ. ಇದರಲ್ಲಿ 9 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶ ಭತ್ತದ ನಾಟಿಗಾಗಿ ಸಿದ್ಧತೆ ನಡೆದಿದೆ.

ಹಾನಗಲ್ಲ: ಮುಂಗಾರು ಪೂರ್ವ ಮಳೆ ತಡವಾಗಿ ಆರಂಭವಾಗಿದ್ದರ ಪರಿಣಾಮ ಬಿತ್ತನೆಗೆ ಭೂಮಿ ಸಿದ್ಧವಿಲ್ಲದೆ ಪರದಾಡಿದ ರೈತರು, ಹಸಿ ಬಿಸಿ ಹದದಲ್ಲಿಯೇ ಶೇ. 75ರಷ್ಟು ಕೃಷಿ ಭೂಮಿಯ ಬಿತ್ತನೆ ಮಾಡಿದ್ದು, ಬಿಡದ ಮಳೆಗೆ ಬಿತ್ತಿದ ಪೈರು ಹುಲ್ಲಿನಲ್ಲಿ ಸಿಲುಕಿ ಅತಿ ಮಳೆಯಿಂದ ಹಳದಿಯಾಗುತ್ತಿದೆ. ಅಲ್ಲದೇ ಇನ್ನೂ ಶೇ. 25ರಷ್ಟು ಭೂಮಿ ಬಿತ್ತನೆಗೆ ಕಾಯುತ್ತಿದೆ. ತಾಲೂಕಿನ 46687 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈಗ 35 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಉಳಿದ ಶೇ. 25ರಷ್ಟು ಬಿತ್ತನೆಗೆ ಮಳೆ ಅವಕಾಶ ಮಾಡಿಕೊಡದೆ ನಿತ್ಯ ಸುರಿಯುತ್ತಿದೆ. ಇದರಲ್ಲಿ 9 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶ ಭತ್ತದ ನಾಟಿಗಾಗಿ ಸಿದ್ಧತೆ ನಡೆದಿದೆ. ತಾಲೂಕಿನಲ್ಲಿ ಮತ್ತೆ ಗೋವಿನಜೋಳವೇ 23885 ಹೆಕ್ಟೇರ್ ಬಿತ್ತನೆಯಾಗಿದೆ. 4885 ಹೆಕ್ಟೇರ್ ಭತ್ತ, 2175 ಹೆಕ್ಟೇರ್ ಸೋಯಾ ಅವರೆ, 1718 ಹೆಕ್ಟೇರ್ ಹತ್ತಿ, 1525 ಹೆಕ್ಟೇರ್ ಕಬ್ಬು, 268 ಹೆಕ್ಟೇರ್ ಶೇಂಗಾ ಸೇರಿದಂತೆ ದ್ವಿದಳ ಧಾನ್ಯಗಳ ಬಿತ್ತನೆಯಾಗಿದೆ. ಇದಕ್ಕಾಗಿ ಕೃಷಿ ಇಲಾಖೆ 1581 ಕ್ವಿಂಟಲ್ ಭತ್ತದ ಬಿತ್ತನೆ ಬೀಜ, 282 ಕ್ವಿಂಟಲ್ ಗೋವಿನ ಜೋಳ, 9 ಕ್ವಿಂಟಲ್ ಶೇಂಗಾ, 855 ಕ್ವಿಂಟಲ್ ಸೋಯಾ ಅವರೆ ಸೇರಿದಂತೆ ಈ ವರೆಗೆ 2729 ಕ್ವಿಂಟಲ್ ಬಿತ್ತನೆ ಬೀಜಗಳನ್ನು ವಿತರಿಸಿದೆ. ಇನ್ನೂ 562 ಕ್ವಿಂಟಲ್ ಬಿತ್ತನೆ ಬೀಜ ವಿರಣೆಗಾಗಿ ಕಾಯುತ್ತಿದೆ. ಈ ಬಾರಿ ಹತ್ತಿ ಮತ್ತು ಶೇಂಗಾ ಬಿತ್ತನೆ ಪ್ರದೇಶ ಗಣನೀಯವಾಗಿ ಇಳಿಕೆಯಾಗಿದೆ.ಪೂರ್ವ ಮುಂಗಾರು ತಡವಾಗಿಯಾದರೂ ಉತ್ತಮ ಮಳೆಯಾಗಿದೆ. ಜನವರಿ ತಿಂಗಳಿನಿಂದ ಈ ವರೆಗೆ 319 ಮಿಮೀ ಮಳೆಯಾಗಿದೆ. ವಾಡಿಕೆ ಮಳೆಗಿಂತ ಇದು 65 ಮಿಮೀ ಹೆಚ್ಚಾಗಿದೆ. ತರಾತುರಿಯಲ್ಲಿ ಬಿತ್ತನೆ ಮಾಡಿದ ರೈತ ಸಮುದಾಯ ಈಗ ಮಳೆ ಬಿಡದೇ ಇರುವುದರಿಂದ ಆತಂಕಕ್ಕೀಡಾಗಿದ್ದಾನೆ.

ಮುಂಗಾರು ಪೂರ್ವ ಮಳೆ ತಡವಾಗಿ ಬಂದು ಬಿತ್ತನೆಗೆ ಒಂದಷ್ಟು ತೊಂದರೆಯಾಗಿದೆ. ಈಗ ಬೆಳೆಯನ್ನು ಉಳಿಸಿಕೊಳ್ಳಲು ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರ ಮಿತವಾಗಿ ಶಿಫಾರಸಿನಂತೆ ಬಳಸಬೇಕು. ಜತೆಗೆ ನ್ಯಾನೋ ಯೂರಿಯಾ ಹಾಗೂ 19:19:19 ಅಥವಾ 13:0:45 ನಂತಹ ಸಮಗ್ರ ಪೋಷಕಾಂಶಗಳ ಸಿಂಪರಣೆಗೆ ರೈತರು ಆದ್ಯತೆ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಮಾರುತಿ ಅಂಗರಗಟ್ಟಿ ತಿಳಿಸಿದರು.ಮಹಿಳೆ ಸಾವು: ವರದಕ್ಷಿಣೆ ಕಿರುಕುಳ ಆರೋಪ

ರಾಣಿಬೆನ್ನೂರು: ತಾಲೂಕಿನ ಯಕಲಾಸಪುರ ಗ್ರಾಮದಲ್ಲಿನ ತಮ್ಮ ಮಗಳ ಸಾವಿಗೆ ಆಕೆಯ ಗಂಡ ಹಾಗೂ ಇತರರು ಕಾರಣರಾಗಿದ್ದಾರೆ ಎಂದು ಆರೋಪಿಸಿ ಮಂಜವ್ವ ನೀರಲಗಿ ಎಂಬವರು ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಿಯಾ ಉರ್ಫ್‌ ಪ್ರಿಯಾಂಕಾ ಕೃಷ್ಣ ಹಿರೇಬಿದರಿ(21) ಮೃತ ಮಹಿಳೆ. ದೂರಿನಲ್ಲಿ ಉಲ್ಲೇಖಿಸಿರುವಂತೆ ಪ್ರಿಯಾಳನ್ನು ಹಿರೇಬಿದರಿ ಗ್ರಾಮದ ಕೃಷ್ಣ ಎಂಬವರಿಗೆ 2024ರ ಮಾ. 17ರಂದು ಮದುವೆ ಮಾಡಿಕೊಡಲಾಗಿತ್ತು. ಆಗ ವರನಿಗೆ ₹75 ಸಾವಿರ ನಗದು, ಬಂಗಾರದ ಸರ ಮತ್ತು ಉಂಗುರವನ್ನು ವರದಕ್ಷಿಣೆ ರೂಪದಲ್ಲಿ ಕೊಡಲಾಗಿತ್ತು. ಆದರೆ ಮದುವೆಯ ನಂತರ ಪ್ರಿಯಾಳಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗಿದೆ. ಇದರಿಂದ ಮನನೊಂದ ಪ್ರಿಯಾ ಜು. 23ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾಳೆ ಎಂದು ತಿಳಿಸಲಾಗಿದೆ.ಹಾನಗಲ್ಲ ತಾಲೂಕಲ್ಲಿ ಇನ್ನೂ ಶೇ. 25ರಷ್ಟು ಬಿತ್ತನೆ ಬಾಕಿ25% of sowing is still pending in Hanagalla talukಹಾವೇರಿ ಸುದ್ದಿ, ನಿರಂತರ ಬೆಳೆ, ಬಿತ್ತನೆ, Haveri news, continuous crop, sowing

ತಾಲೂಕಿನ 46687 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈಗ 35 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಉಳಿದ ಶೇ. 25ರಷ್ಟು ಬಿತ್ತನೆಗೆ ಮಳೆ ಅವಕಾಶ ಮಾಡಿಕೊಡದೆ ನಿತ್ಯ ಸುರಿಯುತ್ತಿದೆ. ಇದರಲ್ಲಿ 9 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶ ಭತ್ತದ ನಾಟಿಗಾಗಿ ಸಿದ್ಧತೆ ನಡೆದಿದೆ.