ರಘುನಾಥ ತೀರ್ಥರ ಆರಾಧನಾ ಮಹೋತ್ಸವ

KannadaprabhaNewsNetwork |  
Published : Jun 28, 2025, 12:18 AM IST
44 | Kannada Prabha

ಸಾರಾಂಶ

ಹಾಲಿ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ 3 ದಿನಗಳ ಕಾಲವೂ ವಿಶೇಷ ಸಂಸ್ಥಾನ ಪೂಜೆ, ವಿದ್ವಾಂಸರಿಂದ ವಿದ್ವತ್ ಗೋಷ್ಠಿ, ವಿದ್ಯಾರ್ಥಿಗಳಿಂದ ಪಾಠ ಸಮರ್ಪಣೆ, ಪಾರಾಯಣ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೈಸೂರುಸೋಸಲೆ ಶ್ರೀ ವ್ಯಾಸರಾಜ ಮಠದ 22ನೇ ಯತಿಗಳಾಗಿದ್ದ ಶ್ರೀ ರಘುನಾಥ ತೀರ್ಥರ 270ನೇ ಆರಾಧನಾ ಮಹೋತ್ಸವ ಜೂ. 28, 29 ಮತ್ತು 30ರಂದು ಸೋಸಲೆ ಗ್ರಾಮದ ನವ ಬೃಂದಾವನ ಕ್ಷೇತ್ರದಲ್ಲಿ ನೆರವೇರಲಿದೆ.ಹಾಲಿ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ 3 ದಿನಗಳ ಕಾಲವೂ ವಿಶೇಷ ಸಂಸ್ಥಾನ ಪೂಜೆ, ವಿದ್ವಾಂಸರಿಂದ ವಿದ್ವತ್ ಗೋಷ್ಠಿ, ವಿದ್ಯಾರ್ಥಿಗಳಿಂದ ಪಾಠ ಸಮರ್ಪಣೆ, ಪಾರಾಯಣ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.ಸಂಚಾರಿ ಆಸ್ಪತ್ರೆ ಲೋಕಾರ್ಪಣೆಸೋಸಲೆ ಶ್ರೀ ವ್ಯಾಸರಾಜರ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಅವರ ಸಾಮಾಜಿಕ ಕಳಕಳಿಯ ಪ್ರತೀಕವಾಗಿ ಸಂಚಾರಿ ಆಸ್ಪತ್ರೆಯನ್ನು ಜ. 29ರಂದು ( ಶ್ರೀ ರಘುನಾಥ ತೀರ್ಥರ ಮಧ್ಯಾರಾಧನೆ ಪುಣ್ಯದಿನ) ಸೋಸಲೆ ಗ್ರಾಮದ ಶ್ರೀ ಮಠದ ಆವರಣದಲ್ಲಿ ಸೇವೆಗೆ ಸಮರ್ಪಿಸಲಾಗುವುದು.ಅಂದು ಬೆಳಗ್ಗೆ 11ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶ ಶ್ರೀಶಾನಂದ, ಅವರು ಶ್ರೀ ವ್ಯಾಸ-ಶ್ರೀಶ ಸಂಚಾರಿ ಉಚಿತ ಆಸ್ಪತ್ರೆಯನ್ನು ಸಮರ್ಪಿಸುವರು.ಈ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಜಯರಾಜ್, ಉದ್ಯಮಿ ಸುಬ್ಬಣ್ಣ, ಮೈಸೂರಿನ ಆಶಾಕಿರಣ ಆಸ್ಪತ್ರೆಯ ಮುಖ್ಯಸ್ಥ ಡಾ. ಗುರುರಾಜ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯವಹಿಸುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ