ಮಳೆಯಿಂದಾಗಿ 3 ಎಕರೆ ಭತ್ತ ನೀರುಪಾಲು

KannadaprabhaNewsNetwork |  
Published : Oct 21, 2024, 12:48 AM IST
ಫೋಟೋ 20ಪಿವಿಡಿ2ಮಳೆಯ ಅರ್ಭಟದಿಂದ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ರತ್ಮಮ್ಮ ಸಂಜೀವರೆಡ್ಡಿಗೆ ಸೇರಿದ್ದ ಜಮೀನಿಗೆ ನೀರು ನುಗ್ಗಿ ಮೂರು ಎಕರೆ ಪ್ರದೇಶದ ಫಸಲಿಗೆ ಬಂದಿದ್ದ ಭತ್ತದ ಬೆಳೆ ಸಂರ್ಪೂಣ ನಾಶ.ಫೋಟೋ 20ಪಿವಿಡಿ3ಪಾವಗಡ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಜಮೀನಿಗೆ ಹೆಚ್ಚು ಮಳೆಯ ನೀರು ನುಗ್ಗಿ ಭತ್ತದ ಬೆಳೆ ನಾಶ ರೈತ ಮಹಿಳೆ ರತ್ಮಮ್ಮ ಅಳಲು ತೋಡಿಕೊಂಡರು.ಫೋಟೋ 20ಪಿವಿಡಿ4ಮಳೆಯ ಕಾರಣದಿಂದ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ರಾಮದಾಸಪ್ಪನ ಮನೆ ನೆಲಸಮಫೋಟೋ 20ಪಿವಿಡಿ5ಧಾರಾಕರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಕಡಮಲಕುಂಟೆ ಕರೆ ಕೋಡಿ.ಹಳ್ಳದ ನೀರಿನಲ್ಲಿ ಮೀನಿಗಾಗಿ ಸ್ಥಳೀಯರ ಶೋಧ  | Kannada Prabha

ಸಾರಾಂಶ

ವರುಣಾರ್ಭಟಕ್ಕೆ ಬೆಳೆದು‌ ನಿಂತಿದ್ದ ಕಟಾವು ಹಂತದ ಭತ್ತದ ಬೆಳೆ ಸಂಪೂರ್ಣ ನೀರುಪಾಲಾದ ಘಟನೆ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ವರುಣಾರ್ಭಟಕ್ಕೆ ಬೆಳೆದು‌ ನಿಂತಿದ್ದ ಕಟಾವು ಹಂತದ ಭತ್ತದ ಬೆಳೆ ಸಂಪೂರ್ಣ ನೀರುಪಾಲಾದ ಘಟನೆ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದಲ್ಲಿ ಭಾನುವಾರ ನಡೆದಿದೆ.

ಬೆಳ್ಳಿಬಟ್ಟಲು ಗ್ರಾಮದ ರತ್ನಮ್ಮ ಸಂಜೀವರೆಡ್ಡಿ ನೀರಾವರಿಯ ಕೃಷಿ ಜಮೀನಿನಲ್ಲಿ ಮೂರು ಎಕರೆಯಲ್ಲಿ ಭತ್ತ ನಾಟಿ ಮಾಡಿದ್ದರು. ಬೆಳೆ ಇನ್ನೆನು ಕಟಾವು ಮಾಡುವ ಹಂತದಲ್ಲಿರುವಾಗಲೇ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗದ್ದೆಗೆ ನೀರು ನುಗ್ಗಿ ಭತ್ತದ ಬೆಳೆ ಸಂರ್ಪೂಣ ನಾಶವಾಗಿದೆ. ಇದರಿಂದ ಸುಮಾರು 50 ಸಾವಿರ ರು.ಕ್ಕೂ ಹೆಚ್ಚು ನಷ್ಟವಾಗಿದೆ. ಮುಖಂಡ ಚಂದ್ರಶೇಖರ ರೆಡ್ಡಿ ಮಾತನಾಡಿ, ಅತಿವೃಷ್ಟಿಯಿಂದ ಭತ್ತದ ಬೆಳೆ ನಷ್ಟಕ್ಕಿಡಾಗಿದೆ. ಬೆಳೆ ನಷ್ಟ ವರದಿ ಪಡೆದು ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮಳೆಯಿಂದ ದೊಡ್ಡದೊಡ್ಡ ಹಳ್ಳಗಳು ತುಂಬಿ ಹರಿಯುತ್ತಿದ್ದು, ಕೆರೆಕುಂಟೆಗಳಿಗೆ ಹೆಚ್ಚು ನೀರು ಸಂಗ್ರಹವಾಗಿದೆ. ತಾಲೂಕಿನ ಕಡಮಲಕುಂಟೆ ಕೆರೆ ಕೋಡಿ ಬಿದ್ದಿದೆ. ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ರಾಮದಾಸಪ್ಪ ಮನೆ ಸಂಪೂರ್ಣ ಕುಸಿತವಾಗಿದ್ದು ಇನ್ನೂ ಚೆನ್ನಮ್ಮರೆಡ್ಡಿಹಳ್ಳಿ, ನೇರಳೆಕುಂಟೆ ಹಾಗೂ ಸಿದ್ದಾಪುರ ಗ್ರಾಮದಲ್ಲಿ ತಲಾ ಒಂದು ಹೆಂಚಿನ ಮನೆಗಳು ನೆಲಸಮವಾಗಿ ಜನಜೀವನ ಆತಂತ್ರವಾಗಿದೆ.

ವೆಂಕಟಾಪುರ, ಭೊಮ್ಮನಹಳ್ಳಿ ಸಿದ್ದಾಪುರ ಚಿಕ್ಕಜಾಲೋಡು ಹಾಗೂ ತಾಲೂಕಿನ ನಿಡಗಲ್‌ ಹೋಬಳಿ ವ್ಯಾಪ್ತಿಯ ದೊಡ್ಡದೊಡ್ಡ ಹಳ್ಳಗಳು ತುಂಬಿ ಹರಿಯುತ್ತಿವೆ. ಸತತ ಮಳೆಯಿಂದ ಕಟಾವು ಮಾಡಿದ ಶೇಂಗಾ ಬೆಳೆ ಮಳೆಗೆ ನೆನೆದು ಕೊಳೆಯುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ