ಎರಡನೇ ದಿನ ಜಿಲ್ಲೆಯಲ್ಲಿ 32,303 ಎನುಮೆರೇಶನ್‌ ಫಾರಂ ವಿತರಣೆ

KannadaprabhaNewsNetwork |  
Published : Jul 02, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ನಡುವೆ ಕಳೆದ ಎರಡು ದಿನ ಬರೋಬ್ಬರಿ 32,303 ಮತದಾರರಿಗೆ ಎನುಮರೇಷನ್‌ ಫಾರಂ ವಿತರಣೆ ಮೂಲಕ ಒಟ್ಟು 47,773 ಫಾರಂ ಮತದಾರರ ಕೈ ಸೇರಿಸಲಾಗಿದೆ.

ಎನುಮೆರೇಶನ್‌ ಫಾರಂ ಭರ್ತಿ ಮಾಡಿ 5,755 ಮಂದಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ ನಡುವೆ ಕಳೆದ ಎರಡು ದಿನ ಬರೋಬ್ಬರಿ 32,303 ಮತದಾರರಿಗೆ ಎನುಮರೇಷನ್‌ ಫಾರಂ ವಿತರಣೆ ಮೂಲಕ ಒಟ್ಟು 47,773 ಫಾರಂ ಮತದಾರರ ಕೈ ಸೇರಿಸಲಾಗಿದೆ.

ಕಳೆದ 2 ದಿನಗಳಿಂದ ಚಿಕ್ಕಮಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಈ ನಡುವೆ ಎಸ್‌ಐಆರ್‌ ಎನುಮೆರೇಷನ್‌ ಫಾರಂ ವಿತರಣೆ ಕಾರ್ಯ ಸಹ ನಡೆಸಲಾಗುತ್ತಿದೆ. ಮಂಗಳವಾರ ಸುಮಾರು 15,470 ಸಾವಿರ ಫಾರಂ ವಿತರಣೆ ಮಾಡಿದ್ದು, ಎರಡನೇ ದಿನ 32,303 ಫಾರಂ ವಿತರಿಸಿದ್ದಾರೆ. ಈ ಮೂಲಕ ಒಟ್ಟು 47,773ಕ್ಕೆ ವಿತರಣೆ ಪೂರ್ಣಗೊಂಡಿದೆ.

ಇದರೊಂದಿಗೆ ಈಗಾಗಲೇ ಬರೋಬ್ಬರಿ 5,755 ಎನುಮೆರೇಶನ್‌ ಫಾರಂ ಅನ್ನು ಭರ್ತಿ ಮಾಡಿ ವಾಪಾಸ್‌ ಬೂತ್‌ಮಟ್ಟದ ಅಧಿಕಾರಿಗಳಿಗೆ ನೀಡಿದ್ದಾರೆ. ಈ ಫಾರಂಗಳನ್ನು ಬಿಎಲ್‌ಒ ಪರಿಶೀಲಿಸಿ ಚುನಾವಣಾ ಆಯೋಗದ ಆ್ಯಪ್‌ನಲ್ಲಿ ಡಿಜಿಟಲೀಕರಿ ಸಿದ್ದಾರೆ. ಮೊದಲ ದಿನ 1,394 ಫಾರಂ ಡಿಜಿಟಲೀಕರಣ ಆಗಿತ್ತು, 2ನೇ ದಿನ 4,316 ಫಾರಂ ಡಿಜಿಟಲೀಕರಣ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಫಾರಂ ವಿತರಿಸಿದ ತಕ್ಷಣ ಅಪ್‌ಡೇಟ್‌ ಮಾಡಿ: ಜಿಲ್ಲಾಧಿಕಾರಿ

ಮತಗಟ್ಟೆ ಅಧಿಕಾರಿಗಳು ಮತದಾರರಿಗೆ ಎನುಮೆರೇಷನ್‌ ಫಾರಂ ವಿತರಣೆ ಮಾಡುತ್ತಿದಂತೆ ಆ್ಯಪ್‌ನಲ್ಲಿ ಆ ಬಗ್ಗೆ ಅಪ್‌ಡೇಟ್‌ ಮಾಡಬೇಕು. ಜತೆಗೆ ಮಳೆ ಹಿನ್ನೆಲೆಯಲ್ಲಿ ಎನುಮೆರೇಷನ್‌ ಫಾರಂ ಹಾಳಾಗದಂತೆ ಸುರಕ್ಷತೆ ವಹಿಸುವಂತೆ ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಸೂಚಿಸಿದ್ದಾರೆ.

ಚಿಕ್ಕಮಗಳೂರು ನಗರದ ದಂಡರಮಕ್ಕಿ, ಜಯನಗರ, ಕೆ,ಆರ್‌.ಪೇಟೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಅವರು ಬೂತ್‌ಮಟ್ಟದ ಅಧಿಕಾರಿಗಳು ಮತದಾರರಿಗೆ ಎನುಮೆರೇಷನ್‌ ಫಾರಂ ವಿತರಣೆ ಮಾಡುವಂತೆ ತಕ್ಷಣ ಚುನಾವಣಾ ಆಯೋಗದ ಆ್ಯಪ್‌ಗೆ ಅಪ್‌ ಲೋಡ್‌ ಮಾಡಬೇಕು. ತಡವಾದರೆ, ಜಿಲ್ಲೆಯ ಪ್ರಗತಿಯಲ್ಲಿ ಹಿನ್ನಡೆ ತೋರಲಿದೆ. ಹೀಗಾಗಿ ಪ್ರತಿ ಮತದಾರರಿಗೆ ಫಾರಂ ನೀಡುತ್ತಿದಂತೆ ಅಪ್‌ಡೇಟ್‌ ಮಾಡುವಂತೆ ನಿರ್ದೇಶಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ತ್ವರಿತವಾಗಿ ಫಾರಂ ವಿತರಣೆ ಮಾಡುವ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಈ ವೇಳೆ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ನಟೇಶ್‌, ಚಿಕ್ಕಮಗಳೂರು ತಹಸೀಲ್ದಾರ್‌ ರೇಷ್ಮಾ ಶೆಟ್ಟಿ, ನಗರ ಸಭೆ ಆಯುಕ್ತ ಬಸವರಾಜ್‌ ಮೊದಲಾದವರಿದ್ದರು.

ಫೋಟೋ

ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿ ಎಸ್ಐಆರ್‌ ಎನುಮೆರೇಷನ್‌ ಫಾರಂ ವಿತರಣೆಯನ್ನು ಬುಧವಾರ ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಪರಿಶೀಲಿಸಿದರು. ಈ ವೇಳೆ ಉಪ ವಿಭಾಗಾಧಿಕಾರಿ ನಟೇಶ್‌, ಚಿಕ್ಕಮಗಳೂರು ತಹಸೀಲ್ದಾರ್‌ ರೇಷ್ಮಾ ಶೆಟ್ಟಿ, ನಗರ ಸಭೆ ಆಯುಕ್ತ ಬಸವರಾಜ್‌ ಇದ್ದರು.

- ಬಾಕ್ಸ್‌---

ಚಿಕ್ಕಮಗಳೂರು ಜಿಲ್ಲೆಯಲ್ಲಿ 2ನೇ ದಿನಕ್ಕೆ ಎನುಮೆರೇಶನ್‌ ಫಾರಂ ವಿತರಣೆ(ರಾತ್ರಿ 7ರ ವರೆಗೆ)ವಿಧಾನಸಭಾ ಕ್ಷೇತ್ರ ಒಟ್ಟು ಮತದಾರರು ಎನುಮೆರೇಶನ್‌ ಫಾರಂ ವಿತರಣೆ ಫಾರಂ ಡಿಜಿಟಲೀಕರಣ

ಶೃಂಗೇರಿ1,67,1715251822ಮೂಡಿಗೆರೆ 1,67,2997774560 ಚಿಕ್ಕಮಗಳೂರು2,26,93410,002907ತರೀಕೆರೆ1,92,087 14,4082517ಕಡೂರು2,06,74010,338949

ಒಟ್ಟು9,60,23147,7735,755

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಿಂದ ಮತದಾನದ ಹಕ್ಕು ಕಸಿಯುವ ಕುತಂತ್ರ
ನಕಲಿ ಜಾತಿ ಪ್ರಮಾಣಪತ್ರ ರದ್ಧತಿಗೆ ಒತ್ತಾಯ