ಹುಬ್ಬಳ್ಳಿ:
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಪಿಂಚಣಿ, ಇಎಸ್ಐಸಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 4 ಸಂಹಿತೆಗಳು ಜಾರಿಗೊಂಡಿವೆ. ಈ ಸಂಹಿತೆಗಳನ್ನು ಬಹುತೇಕ ರಾಜ್ಯಗಳು ಒಪ್ಪಿಕೊಂಡಿದ್ದು, ವಿವಿಧ ರಾಜ್ಯಗಳ ಕೈಗಾರಿಕೆ, ಉತ್ಪಾದನೆಗೆ ಅನುಗುಣವಾಗಿ ಮೇ 5 ರಂದು 4 ಸಂಹಿತೆಗಳು ಕಾನೂನಾಗಿ ಮಾರ್ಪಾಡಾಗಲಿವೆ ಎಂದರು.
ಹಗರಣಗಳ ವಾಸನೆ:ಕೇಂದ್ರ ಸರ್ಕಾರ ಇಪಿಎಫ್ಒಗೆ ಪ್ರತಿ ವರ್ಷ ₹10ರಿಂದ ₹12 ಸಾವಿರ ಕೋಟಿಗೂ ಅಧಿಕ ಹಣ ನೀಡುತ್ತಿದೆ. ಇದರೊಟ್ಟಿಗೆ ವಿವಿಧ ರಾಜ್ಯಗಳು ಶೇ.1 ರಷ್ಟು ಸೆಸ್ ಸಂಗ್ರಹಿಸುತ್ತಿವೆ. ಇದರ ಸದುಪಯೋಗವಾಗದೇ ಹಗರಣಗಳ ವಾಸನೆ ಬರುತ್ತಿದೆ. ಇದರ ತನಿಖೆ ನಡೆಸಲಾಗುವುದು. ಬಿಜೆಪಿ ಬಿಟ್ಟು ಉಳಿದ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾರ್ಮಿಕರ ಕಲ್ಯಾಣವಾಗುತ್ತಿಲ್ಲ. ಕೇಂದ್ರ ಸರ್ಕಾರದ ಕಾರ್ಮಿಕ ನಿಧಿ ಸಹ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ₹200 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಇಎಸ್ಐ ಆಸ್ಪತ್ರೆ ನಿರ್ಮಿಸಿದೆ. ಆದರೆ, ರಾಜ್ಯ ಸರ್ಕಾರ ಇದರ ಉದ್ಘಾಟನೆಗೂ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.
ಪಂಚ ರಾಜ್ಯ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಗೂಂಡಾ ಸರ್ಕಾರಗಳು ನೆಲಕಚ್ಚಲಿದ್ದು, ಎನ್ಡಿಎ ಮೈತಿಕೋಟ ಅಧಿಕಾರದ ಗದ್ದುಗೆ ಏರಲಿದ್ದು, ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಗಲಿದೆ ಎಂದು ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.