ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಾಕಿ ಬಿಲ್ ಬಿಡುಗಡೆಗಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲೇ ೯೫೦ ಕೋಟಿ ರು. ಗುತ್ತಿಗೆದಾರರ ಬಿಲ್ ಬಾಕಿ ಇದ್ದು, ೨, ೩ ಮತ್ತು ೪ನೇ ದರ್ಜೆಯ ಗುತ್ತಿಗೆದಾರರು ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ ಎಂದರು.
ಜಿಎಸ್ಟಿ ಹಣ ಪಾವತಿಗೆ ೫೦ ನೋಟಿಸ್ ಕೊಡುತ್ತಾರೆ. ಅದನ್ನು ನಮಗೆ ನೀಡಬೇಕಾದ ಬಿಲ್ನಲ್ಲೇ ಕಟಾವು ಮಾಡಿಕೊಂಡು ಕೊಡಲಿ. ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿದರೂ ನಮಗೆ ಮಾತ್ರ ಹಣ ಕೊಡುತ್ತಿಲ್ಲ. ಸಾಲ ಮಾಡಿ ಕೆಲಸ ಮಾಡಿದ್ದೇವೆ. ಬಡ್ಡಿ ಕಟ್ಟಲು ಆಗುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಸರ್ಕಾರ ಅರಿತು ಪರಿಹಾರ ಸೂಚಿಸುವಂತೆ ಮನವಿ ಮಾಡಿದರು.ಈಗಿನ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭ್ರಷ್ಟ ಸರ್ಕಾರವಾಗಿದೆ. ಹಿಂದೆ ನಮ್ಮ ಬೆನ್ನಿಗೆ ನಿಂತು ಈಗ ಅವರೇ ಭ್ರಷ್ಟರಾಗಿದ್ದಾರೆ. ನಮ್ಮಿಂದಲೇ ಅಧಿಕಾರಕ್ಕೆ ಬಂದು ನಮ್ಮನ್ನೇ ಕಡೆಗಣಿಸಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತು ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎಂ.ನಂದಕುಮಾರ್, ರಾಜ್ಯ ಕಾರ್ಯಾಧ್ಯಕ್ಷ ಬಿಸಿ.ದಿನೇಶ್, ಹನುಮಂತು, ಉಪಾಧ್ಯಕ್ಷ ಕೃಷ್ಣೇಗೌಡ, ಎಂ.ರಮೇಶ್, ಯತಿರಾಜ್, ಗುರುಸಿದ್ದಪ್ಪ, ಖಜಾಂಚಿ ಮುನಿರಾಜ್, ಲಕ್ಷ್ಮೀಪತಿ, ಜಿಲ್ಲಾಧ್ಯಕ್ಷ ಯತಿರಾಜ್, ರವೀಂದ್ರ, ನವೀನ್ಕುಮಾರ್ ಇತರರಿದ್ದರು.ಇಂದಿನ ಸಭೆಯಲ್ಲಿ ಗುತ್ತಿಗೆದಾರರಿಗೆ ಎಲ್ಒಸಿ ಕೊಡಿಸುವುದು, ಮೆಟೀರಿಯಲ್ ಡಂಪಿಂಗ್ ಪ್ಲಾಂಟ್ ರದ್ದು, ಗುತ್ತಿಗೆದಾರರ ಮ್ಯಾನೇಜ್ಮೆಂಟ್ ರದ್ದುಪಡಿಸಿ ಹಳೇ ಪದ್ಧತಿಯನ್ನು ಮುಂದುವರೆಸುವುದು, ಪ್ಯಾಕೇಜ್ ಟೆಂಡರ್ ರದ್ದು, ಕಾವೇರಿ ನೀರಾವರಿ ನಿಗಮದಲ್ಲಿ ಭದ್ರತಾ ಠೇವಣಿ ಮೂರು ವರ್ಷ ಇರುವುದನ್ನು ಲೋಕೋಪಯೋಗಿ ಇಲಾಖೆ ಮಾದರಿಯಲ್ಲಿ ಒಂದು ವರ್ಷಕ್ಕೆ ಸೀಮಿತಗೊಳಿಸುವುದು,ಇಲ್ಲೆಯ ಎಲ್ಲಾ ಇಲಾಖೆಗಳ ವಿಭಾಗ ಕಚೇರಿಯಲ್ಲಿ ಬಾಕಿ ಇರುವ ಬಿಲ್ನ್ನು ದೊರಕಿಸಿಕೊಡಬೇಕು. ಮ್ಯಾನ್ಯುಯೆಲ್ ಟೆಂಡರ್ ಜಾರಿಗೊಳಿಸಿ ೫ ರಿಂದ ೧೦ ಲಕ್ಷ ರು.ವರೆಗೆ ಮುಂದುವರೆಸುವುದು, ಯುಡಿಆರ್ ನಂಬರ್ನ್ನು ಟೆಂಡರ್ ಕಾಮಗಾರಿಗಳಿಗೆ ರದ್ದುಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಿದರು.