ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಆರನೇ ಸಂಸ್ಥಾಪನಾ ದಿನದ ಅಂಗವಾಗಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಚುನಾವಣಾ ಸುಧಾರಣೆಗಳ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ಹಣ- ಹೆಂಡಕ್ಕೆ ನಮ್ಮತನವನ್ನು ಮಾರಿಕೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಉಳಿಸಲು ಯುವಶಕ್ತಿ ಸಂಘಟಿತ ಹೋರಾಟದ ಮೂಲಕ ಯಶಸ್ಸು ಸಾಧಿಸಬೇಕಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಈ ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿಕೊಂಡಿದೆ. ಈ ಭ್ರಷ್ಟಾಚಾರದ ಮೂಲವೇ ಚುನಾವಣೆಯಲ್ಲಿನ ಅಕ್ರಮಗಳು. ಈ ಮೂಲವನ್ನು ಕಿತ್ತೆಸೆದು ದೇಶದ ಪ್ರಜಾಪ್ರಭುತ್ವವನ್ನು ಸ್ವಚ್ಛಗೊಳಿಸಬೇಕಾದರೆ ಮೊದಲು ಜನ ಜಾಗೃತರಾಗಬೇಕು ಎಂದು ನುಡಿದರು.ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಅವಕಾಶಗಳನ್ನು ಸಂವಿಧಾನ ಕೊಟ್ಟಿದೆ. ನಮ್ಮ ಸಂವಿಧಾನ ಜನಸಾಮಾನ್ಯರನ್ನು ಮಾಲೀಕರನ್ನಾಗಿ ಮಾಡಿದೆ. ಸರ್ಕಾರಿ ನೌಕರರನ್ನು ನಮ್ಮ ಸೇವಕರನ್ನಾಗಿಸಿ ಅಧಿಕಾರ ಕೊಟ್ಟಿದೆ. ಆದರೆ, ನಮ್ಮ ನ್ಯಾಯಾಂಗ ವ್ಯವಸ್ಥೆ ಏನಾಗಿದೆ ಎಂದರೆ ತಪ್ಪು ಮಾಡಿದ ಜನಾರ್ದನ ರೆಡ್ಡಿ ಜೈಲಿಗೆ ಹೋದರು. ನಂತರ ಜಾಮೀನಿನ ಮೇಲೆ ಹೊರಬಂದು ಮತ್ತೆ ಶಾಸಕತ್ವವನ್ನು ಉಳಿಸಿಕೊಂಡರು. ಇತ್ತೀಚೆಗೆ ಪ್ರಜ್ವಲ್ ರೇವಣ್ಣನ ಪಾಳೇಗಾರಿಕೆ ಸಂಸ್ಕೃತಿ ವಿಜೃಂಭಿಸಿತು. ದೇವೇಗೌಡರು ಆತನನ್ನು ಎಂಪಿ ಮಾಡಿದರು. ರೇವಣ್ಣ ತಮ್ಮ ಮಗ ಪ್ರಜ್ವಲ್ ರೇವಣ್ಣನದು ಅದೆಲ್ಲವೂ ಹಳೆ ಕಥೆ ಎನ್ನುತ್ತಾರೆ. ಆದರೆ ನ್ಯಾಯಾಲಯ ಇಷ್ಟು ಕಡಿಮೆ ಅವಧಿಯಲ್ಲಿ ಶಿಕ್ಷೆ ಪ್ರಕಟಿಸಿರುವುದು ಸಮಾಧಾನಕರ ಸಂಗತಿ ಎಂದರು.
ಸಚಿವನಾದ ಬಳಿಕ ಇತಿಹಾಸದಲ್ಲೇ ಹೆಚ್ಚು ನಿವೇಶನವನ್ನು ಒಂದು ರು. ಖರ್ಚಿಲ್ಲದಂತೆ ಹಂಚಿಕೆ ಮಾಡಿದೆ. ಆದರೆ, ಇಂದು ಆ ಜನಗಳು ತಮ್ಮ ಅಗತ್ಯಗಳಿಗಾಗಿ ಐದಾರು ಲಕ್ಷ ರು.ಗಳಿಗೆ ಮಾರಿಕೊಳ್ಳುತ್ತಿದ್ದಾರೆ. ಇಡೀ ಕ್ಷೇತ್ರಕ್ಕೆ ಕುಡಿಯುವ ನೀರು ಕಲ್ಪಿಸಿದ ಪರಿಣಾಮ ಜನ ನನ್ನ ಜಾತಿ, ಅಂತಸ್ತು ಯಾವುದನ್ನು ಪರಿಗಣಿಸದೆ ನನ್ನ ಕೈ ಹಿಡಿದಿದ್ದರು. ಶಿಕ್ಷಣ ಮಂತ್ರಿಯಾಗಿ, ಕಂದಾಯ ಮಂತ್ರಿಯಾಗಿ ದೇಶವೇ ಮಾದರಿಯಾಗಿ ಪರಿಗಣಿಸುವಂತಹ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದೆ. ಎಸ್ಎಸ್ಎಲ್ಸಿ ಮರು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದು, ಕಂದಾಯ ಇಲಾಖೆಯಲ್ಲಿ ಡಿಜಿಟಲೈಸ್ ಮಾಡಿದ್ದು, ಸರ್ವೇ ವ್ಯವಸ್ಥೆಯನ್ನು ಆಧುನಿಕರಣಗೊಳಿಸಿದ್ದು ಇವೆಲ್ಲ ನನ್ನ ಸಾಧನೆ. ಇವತ್ತು ರಿಯಲ್ ಎಸ್ಟೇಟ್ ಕುಳಗಳು, ಲಿಕ್ಕರ್ ಬ್ಯಾರನ್ಗಳು ರಾಜ್ಯವಾಳುತ್ತಿವೆ. ೨೦,೦೦೦ ವೆಚ್ಚ ಮಾಡಿ ಶಾಸಕನಾಗಿದ್ದ ನಾನು ಇವತ್ತು ೧೦ ಕೋಟಿ ರು. ವೆಚ್ಚ ಮಾಡುತ್ತಿರುವ ಎಂಎಲ್ಎಗಳನ್ನು ಕಾಣುತ್ತಿದ್ದೇನೆ ಎಂದು ವಿಷಾದಿಸಿದರು.
ವೇದಿಕೆಯಲ್ಲಿ ಕೆಆರ್ಎಸ್ ಪಕ್ಷದ ದೀಪಕ್, ಅರುಣ್ಕುಮಾರ್ ಉಪಸ್ಥಿತರಿದ್ದರು.
ನೈತಿಕತೆಯಿಂದ ಮತ್ತು ಆತ್ಮಸ್ಥೈರ್ಯದಿಂದ ಹೋರಾಟ ಮಾಡಲು ನಿಂತವರಿಗೆ ಅಪಪ್ರಚಾರ ಮಾಡುವವರು, ನಿಂದನೆ ಮಾಡುವವರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಆದರೆ ನಾವು ಅದನ್ನು ಮೀರಿ ಬೆಳೆದು ನಿಂತಿದ್ದೇವೆ. ನಾವು ನೈತಿಕವಾಗಿ ಗಟ್ಟಿಯಾಗಿರುವುದರಿಂದ ಹೋರಾಟ ಸರಿದಾರಿಯಲ್ಲಿ ಸಾಗುತ್ತಿದೆ. ಕೋವಿಡ್, ಕೊರೋನಾಗಿಂತಲೂ ಭ್ರಷ್ಟಾಚಾರ ಕ್ಯಾನ್ಸರ್ ಗೆಡ್ಡೆಯಾಗಿ ಸಮಾಜವನ್ನು ಕಾಡುತ್ತಿದೆ. ಇದರ ಬಗ್ಗೆ ಸ್ವಚ್ಛ ಮನಸ್ಸಿನಿಂದ ಎಲ್ಲರೂ ಹೋರಾಟಕ್ಕೆ ನಿಲ್ಲದಿದ್ದರೆ ಮುಂದೆ ಸಾಮಾಜಿಕ ವ್ಯವಸ್ಥೆ ಅಪಾಯಕ್ಕೆ ಸಿಲುಕುತ್ತದೆ.
ಪೊರಕೆ ಸೇವೆ ಮಾಡಿ
- ಇಂಡುವಾಳು ಚಂದ್ರಶೇಖರ್, ರೈತ ಮುಖಂಡ