ಕನ್ನಡಪ್ರಭ ವಾರ್ತೆ ಬೀಳಗಿ
ತಾಲೂಕಿನ ಸುನಗ ಗ್ರಾಮದಲ್ಲಿ ಬುಧವಾರ ಪಂಚಾಯತ್ ರಾಜ್ ಎಂಜನಿಯರಿಂಗ್ ಉಪವಿಭಾಗ ಬೀಳಗಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸನ್ ೨೦೨೨-೨೩ನೇ ಸಾಲಿನ ವಿವೇಕ ಶಾಲಾ ಯೋಜನೆ ಅನುದಾನದಡಿ ಅಂದಾಜು ₹೧೩.೯೦ ಲಕ್ಷಗಳ ವೆಚ್ಚದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ನೂತನ ಕೊಠಡಿ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟ ಹಾಗೂ ಉತ್ತಮವಾಗಿರಬೇಕು. ಇದರಲ್ಲಿ ಯಾವುದೇ ಮುಲಾಜು ಸಲ್ಲದು. ಗ್ರಾಮಸ್ಥರು ಕೂಡಾ ಕಾಮಗಾರಿಗಳ ಬಗ್ಗೆ ನಿಗಾವಹಿಸಬೇಕು ಎಂದು ಸೂಚಿಸಿದರು.ಸುನಗ ಕ್ರಾಸ್ದಿಂದ ಅರಕೇರಿ ಹಾಗೂ ಬೀಳಗಿ ಕ್ರಾಸ್ ದರ್ಗಾದಿಂದ ಸುನಗಕ್ಕೆ ಹೋಗವ ಒಳರಸ್ತೆ ಅಭಿವೃದ್ಧಿ ಕಾಮಗಾರಿಗೆ ₹೫ ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭವಾಗಿದೆ. ಹಟ್ಟಿ ಚಿನ್ನದ ಗಣಿ ನಿಗಮದಿಂದ ಶಾಲಾ ಅಭಿವೃದ್ಧಿಗೆ ₹೨ ಲಕ್ಷಗಳ ಅನುದಾನ ನೀಡಲಾಗುವುದು. ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಇಒ ಅಭಯಕುಮಾರ ಮೊರಬ, ಬಿಇಒ ಆರ್.ಎಸ್.ಆದಾಪೂರ, ಜಿಪಂ ಎಇಇ ಗೊವಿಂದಪ್ಪ ಅಳ್ಳಿಕಟ್ಟಿ, ಸುನಗ ಗ್ರಾಪಂ ಅಧ್ಯಕ್ಷೆ ಪವಿತ್ರ ದಳವಾಯಿ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಡಾ.ಸಾಗರ ತೆಕ್ಕನ್ನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತ ಕಾಖಂಡಕಿ, ತಾಪ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಯುವ ಮುಖಂಡ ಬಸವರಾಜ ಮೇಟಿ, ಜಿಪಂ ಮಾಜಿ ಸದಸ್ಯ ಯಮನಪ್ಪ ರೊಳ್ಳಿ, ನ್ಯಾಯವಾದಿ ಎ.ವೈ.ಮಾಚಕನೂರ, ಚಂದ್ರಶೇಖರ್ ಪಂಢರಿ, ವಿಠ್ಠಲ್ ಲಗಮನಿ, ರವಿ ಲಿಂಗನ್ನವರ, ರವಿ ಮೇಟಿ, ಮಲ್ಲಿಕಾರ್ಜುನ ದೊಡ್ಮೇಟಿ ಇತರರು ಇದ್ದರು.
ದೈತ್ಯಪ್ಪನ ಕೆರೆಗೆ ಬಾಗಿನ: ಸ್ವಚ್ಛತೆಗೆ ಶಾಸಕರ ಮನವಿ