ಮೀನಾ ತೂಗುದೀಪ್ ಸೇರಿದಂತೆ 15 ಮಂದಿ ಆಯ್ಕೆ

KannadaprabhaNewsNetwork |  
Published : Apr 01, 2024, 12:46 AM IST
14 | Kannada Prabha

ಸಾರಾಂಶ

ಈ ಚುನಾವಣೆಯಲ್ಲಿ 30 ಜನ ಸ್ಪರ್ಧಿಸಿದ್ದು, ಅದರಲ್ಲಿ 15 ಜನ ಅತಿ ಹೆಚ್ಚು ಮತವನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಜಯನಗರದ ಕೃಷ್ಣದೇವರಾಯ ರಸ್ತೆಯಲ್ಲಿರುವ ದಿ ಬಲಿಜ ಸಂಘO 2024- 2029ರ ಐದು ವರ್ಷಕ್ಕೆ ಭಾನುವಾರ ನಡೆದ ನಿರ್ದೇಶಕರ ಚುನಾವಣೆಯಲ್ಲಿ ನಿರ್ಮಾಪಕಿ ಮೀನಾ ತೂಗುದೀಪ್ ಶ್ರೀನಿವಾಸ್ ಅವರು ಸೇರಿದಂತೆ 15 ಜನ ಆಯ್ಕೆಯಾಗಿದ್ದಾರೆ.

ಈ ಚುನಾವಣೆಯಲ್ಲಿ 30 ಜನ ಸ್ಪರ್ಧಿಸಿದ್ದು, ಅದರಲ್ಲಿ 15 ಜನ ಅತಿ ಹೆಚ್ಚು ಮತವನ್ನು ಪಡೆಯುವ ಮೂಲಕ ಜಯಶೀಲರಾಗಿದ್ದಾರೆ.

ಸಾಮಾನ್ಯ ವರ್ಗದಿಂದ ಹೇಮಂತ್ ಕುಮಾರ್, ಕೆ. ಲಿಂಗರಾಜು, ಎಂ.ಎಸ್. ದಾಮೋದರ, ಜಿ. ಮಹೇಶ್ ನಾಯ್ಡು, ಆರ್. ಮಂಜುನಾಥ್, ಯತಿರಾಜ್, ಎಚ್.ವಿ. ಗೋವಿಂದರಾಜ್, ಪಿ. ಕಾಮರಾಜ್, ಎಂ.ಎಸ್. ಯೋಗೀಶ್, ಎಂ.ಎಸ್. ರಾಘವೇಂದ್ರ, ಆರ್. ರವಿಕುಮಾರ್, ಕೆ. ನಾಗರಾಜು ಆಯ್ಕೆಯಾಗಿದ್ದಾರೆ.

ಹಾಗೆಯೇ, ಮಹಿಳಾ ಮೀಸಲಿನಲ್ಲಿ ಮೀನಾ ತೂಗುದೀಪ್ ಶ್ರೀನಿವಾಸ್, ಕೆ. ಸುನಿತಾ ಮತ್ತು ಈ. ಪೂಜಾ ಅವರು ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಎಚ್.ಎಂ. ಪುಟ್ಟಸ್ವಾಮಿಗೌಡ ಕಾರ್ಯ ನಿರ್ವಹಿಸಿದರು.

ಇದೇ ವೇಳೆ ವಿಜೇತ ತಂಡಕ್ಕೆ ಸಮಾಜ ಸೇವಕ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಎಸ್.ಎನ್. ರಾಜೇಶ್, ಹರೀಶ್ ನಾಯ್ಡು, ಲೀಲಾ ನಾಯ್ಡು, ಆನಂದ್, ಚಿತ್ರನಟರಾದ ವಿಜಯ್ ಸೂರ್ಯ, ರಾಕೇಶ್ ನಾಯ್ಡು, ಕಿರಣ್ ನಾಯ್ಡು ಮೊದಲಾದವರು ಶುಭ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಪುರದ ಬೇಬಿ ಇರಾನ್‌ನಲ್ಲಿ 10 ಸಾವಿರ ಜನರ ಪ್ರತಿಭಟನಾ ರ್‍ಯಾಲಿ
ಯುವತಿಯರ ಮುಂದೆ ಶರ್ಟ್‌ಬಿಚ್ಚಿ ಯುವಕನಿಂದ ಹುಚ್ಚಾಟ