ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ನ 70ನೇ ವರ್ಷದ ಅಮೃತ ಮಹೋತ್ಸವ ವರ್ಷಾಚರಣೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳ ಸ್ಥಿತಿಗತಿ ವರದಿ ಪಡೆದುಕೊಳ್ಳುತ್ತಿದ್ದೇನೆ. ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ಗೂ ಹೊಸ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸಿಪಿಸಿ ಕಾಲೇಜಿಗೂ ವಿಸ್ತೃತ 65 ಕೋಟಿ ರು. ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಲು ಚಿಂತಿಸಲಾಗಿದೆ. ಮತ್ತೊಂದೆಡೆ ಕಾಲೇಜಿನಲ್ಲಿ ಎಐ ಮತ್ತು ಸೈಬರ್ ಕುರಿತ ಎರಡು ಹೊಸ ಕೋರ್ಸ್ ಆರಂಭಿಸಲು ಚಿಂತಿಸಿರುವುದರಿಂದ ಕಾಲೇಜಿಗೆ ನೂತನ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಹೀಗೆ ರಾಜ್ಯದ 106 ಪಾಲಿಟೆಕ್ನಿಕ್ ಗಳ ವರದಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದರು.ಈ ಎಲ್ಲಾ ಪಾಲಿಟೆಕ್ನಿಗ್ ಅಭಿವೃದ್ಧಿ ಪಡಿಸಲು ಶ್ರಮಿಸತ್ತೇನೆ. ಚಿಂತಾಮಣಿಯಲ್ಲಿ ನಮ್ಮ ತಾತಾ ಅವರು ಕಟ್ಟಿಸಿರುವ ಪಾಲಿಟೆಕ್ನಿಕ್ ಗೆ 75 ವರ್ಷ ಪೂರೈಸಿದ್ದು, ನನ್ನ ಕ್ಷೇತ್ರದ ಈ ಪಾಲಿಟೆಕ್ನಿಕ್ ಗೆ ಕಾಯಕಲ್ಪ ಮಾಡಬೇಕು ಎಂದು ಮಹಾದಾಸೆಯಾಗಿದೆ ಎಂದರು.
ಮಹಾರಾಣಿ ಕಾಲೇಜು ಪಾರಂಪರಿಕ ಕಟ್ಟಡವಾದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲು ಪಾರಂಪರಿಕ ತಜ್ಞರ ಸಲಹೆ ತೆಗೆದುಕೊಂಡಿದ್ದು, 55 ಕೋಟಿ ರೂಅನುದಾನ ಬಿಡುಗಡೆ ಮಾಡಲು ನಿರ್ಧರಿಸಿದ್ದು, 5 ಕೋಟಿ ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿಗಳು ಸದ್ಯದಲ್ಲಿಯೇ ಶಂಕುಸ್ಥಾಪನೆ ನೆರವೇರಿಸುವುದಾಗಿ ಅವರು ಹೇಳಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಪಾಲಿಟೆಕ್ನಿಕ್ ಗಳು ಬಡವರ ಪಾಲಿನ ಎಂಜಿನಿಯರಿಂಗ್ ಕಾಲೇಜುಗಳಾಗಿವೆ. ಮೈಸೂರಿಗೆ ಒಂದು ಮಹಿಳಾ ಪಾಲಿಟೆಕ್ನಿಕ್ ಬೇಕೆಂದು ಬೇಡಿಕೆ ಸಲ್ಲಿಸಿದೆ. ಅದು ಹಣಕಾಸು ಇಲಾಖೆಗೆ ಹೋಗಿದ್ದು, ಅದಕ್ಕಾಗಿ ಸ್ಥಳ ನಿಯೋಜನೆ ಮಾಡಿರುವುದಾಗಿ ಹೇಳಿದರು.
ಸಿಪಿಸಿ ಕಾಲೇಜು ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ಸಿ. ಪೆರುಮಾಳ್ ಚೆಟ್ಟಿ ಅವರ ಪುತ್ರ ಪಿ. ಧರ್ಮರಾಜ್ ಚೆಟ್ಟಿ ಮತ್ತು ಮೊಮ್ಮಗಳಾದ ಜೆ. ಲೋಕೇಶ್ವರಿ ಅವರನ್ನು ಅಭಿನಂದಿಸಲಾಯಿತು.