ಕನ್ನಡಪ್ರಭ ವಾರ್ತೆ ಬೆಳಗಾವಿ
ಬಂಧಿತರನ್ನು ಗೋಕಾಕ ಮೆಹಂದಿ ನಗರದ ನಿವಾಸಿಗಳಾದ ಪರಶುರಾಮ ಭೀಮಶಿ ಬಡಕರಿ(36), ಇಮ್ರಾನ್ ಬಾಬಾಜಾನ್ ಜುನೇದಿ (27), ಮಹಾರಾಷ್ಟ್ರದ ಪಶ್ಚಿಮ ಮುಂಬೈನ ಶಿವಾಜಿ ನಗರದ ಜಯಶ್ರೀ ಬಾಬು ಕಾಂಬಳೆ (40), ಅಹ್ಮದನಗರ ಜಿಲ್ಲೆಯ ಮನೀಷಾ ರಾಜು ಗಾಯಕ್ವಾಡ್ (41), ಜಲಗಾಂವ ಜಿಲ್ಲೆಯ ವಾಕಟೂಕಿ ನಿವಾಸಿ ಉಜ್ವಲ ತುಳಸಿರಾಮ ಬಿಲಾನೆ (55), ಥಾಣೆ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಅನಂತ ಪ್ರಕಾಶ ನರವಾದೆ (40) ಹಾಗೂ ಕ್ರೈಂ ಬ್ರ್ಯಾಂಚ್ ಯುನಿಟ್ ಹೆಡ್ ಕಾನ್ಸ್ಟೇಬಲ್ ದಿಲ್ದಾರ್ ರಬ್ಬಾನಿ ಶೇಖ್ (35) ಎಂದು ಗುರುತಿಸಲಾಗಿದೆ.
ಗೋಕಾಕದ ಶ್ರೀನಗರ ಪ್ರದೇಶದಲ್ಲಿರುವ ಮನೆಯಲ್ಲಿ ಆರೋಪಿಗಳು ಜನರಿಗೆ 1ಕ್ಕೆ 4 ಪಟ್ಟು ಹಣ ಮಾಡಿಕೊಡುತ್ತೇವೆ ಎಂದು ಹೇಳಿ ಮೋಸ ಮಾಡುತ್ತಿದ್ದರು. ₹500 ನೋಟು ಹಾಗೂ ಖಾಲಿ ಕಾಗದಗಳಿಗೆ ಕಪ್ಪು ಬಣ್ಣ ಹಚ್ಚಿ, ರಾಸಾಯನಿಕ ವಿಧಾನದಿಂದ ಹಣ ತಯಾರಿಸಲಾಗುತ್ತದೆ ಎಂದು ನಂಬಿಸಿ ಜನರಿಂದ ಹಣ ಪಡೆಯುತ್ತಿದ್ದರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.ಖಚಿತ ಮಾಹಿತಿ ಆಧರಿಸಿ ಗೋಕಾಕ ನಗರ ಠಾಣೆ ಪೊಲೀಸರು ದಾಳಿ ನಡೆಸಿ 7 ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಶದಿಂದ ಹಣ ತಯಾರಿಸಲು ಬಳಸುತ್ತಿದ್ದ ಯಂತ್ರ, ಕಪ್ಪು ಬಣ್ಣದ ಬಾಟಲಿಗಳು, ಖಾಲಿ ಕಾಗದಗಳಿರುವ ಬ್ಯಾಗ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ 8 ಮೊಬೈಲ್ ಪೋನ್ಗಳು ಹಾಗೂ ₹2,520 ನಗದು ಹಣ ಜಪ್ತಿ ಮಾಡಲಾಗಿದೆ.