ಕುಂದಾಣ: ತಾಲೂಕಿನ ಜಾಲಿಗೆ ಗ್ರಾಮ ಪಂಚಾಯತಿಯಲ್ಲಿ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಪಂ ಅಧ್ಯಕ್ಷ ಎಸ್.ಎಂ. ಆನಂದ್ ಕುಮಾರ್ ಮಾತನಾಡಿ, ಇಂದು ೭೮ನೇ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಈಗ ನಾವು ಸ್ವಾತಂತ್ರ್ಯವೆಂಬ ಹೆಮ್ಮರದ ಫಲದ ಸಿಹಿಯನ್ನು ಅನಭವಿಸುತ್ತಿದ್ದೇವೆ. ಆದರೆ ನಮಗೆ ಈ ಹಣ್ಣನ್ನು ನೀಡುವಲ್ಲಿ ಅದೆಷ್ಟು ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಹೀಗಾಗಿ ಅವರ ತ್ಯಾಗವನ್ನು ಎಂದೂ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದರು.
ಜಾಲಿಗೆ ಗ್ರಾಪಂ ಉಪಾಧ್ಯಕ್ಷೆ ಕೆ. ಭವ್ಯ. ಸದಸ್ಯರಾದ ಮಹೇಶ್ ಕುಮಾರ್ ,ಕೆಂಪರಾಜು,ಅಪ್ಪಯ್ಯ,ರಾಧಮ್ಮ ,ಮಂಜುಳಾ ,ಶೋಭಾ, ಗೋಪಿ , ಗ್ರಾಪಂ ಮಾಜಿ ಅಧ್ಯಕ್ಷ ಶ್ರೀ ರಾಮಣ್ಣ, ಪಿಡಿಒ ಪ್ರಕಾಶ್, ಕಾರ್ಯದರ್ಶಿ ನರಸಿಂಹಮೂರ್ತಿ ಸೇರಿ ಪಂಚಾಯತಿ ಸದಸ್ಯರು, ಸಿಬ್ಬಂದಿ ವರ್ಗದವರು ಮತ್ತಿತರರು ಇದ್ದರು.