ಚಿತ್ರದುರ್ಗ: ಎಲ್ಲರ ಮನೆಯಲ್ಲು ಮಾನವರು ಹುಟ್ಟುತ್ತಾರೆ. ಆದರೆ ಮನುಷ್ಯತ್ವ ಹುಟ್ಟುವುದಿಲ್ಲ. ಪ್ರತಿ ಮನೆಯಲ್ಲಿ ಮಾನವೀಯತೆ ಕಾರ್ಯಗಳು ನಡೆದಾಗ ಆ ಮನೆಯ ವ್ಯಕ್ತಿ ನಿಜವಾದ ಮಾನವನಾಗತ್ತಾನೆ ಎಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮಿಗಳು ನುಡಿದರು.
ನಾವು ಮಾನವರಾಗಿ ಹುಟ್ಟುತ್ತೇವೆ. ಮಾನವರ ಜತೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಆಗ ಜೀವನ ಸಾರ್ಥಕವಾಗುತ್ತದೆ. ಮಾನವತೆಯಿಲ್ಲದಾಗ ಅವನು ದಾನವನಾಗುತ್ತಾನೆ. ಜಗತ್ತಿನಲ್ಲಿ ಮಾನವೀಯತೆ ದೊಡ್ಡದು. ವಧು ವರರು ಮಾನವೀಯ ಗುಣಗಳಿಂದ ಹಿರಿಯರನ್ನು ಕಾಣಬೇಕೆಂದರು.
ಪ್ರಭುಲಿಂಗ ಸ್ವಾಮಿಗಳು ಮಾತನಾಡಿ, ಚಿತ್ರದುರ್ಗ ಮುರುಘಾಮಠದಲ್ಲಿ ಬಡವರ ಕಲ್ಯಾಣ ನಡೆಸಿಕೊಡುವುದರ ಮುಖೇನ ಆರ್ಥಿಕವಾಗಿ ದುರ್ಬಲವಾಗಿರುವ ಬಡವರ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿರುವುದು ಸ್ಮರಣೀಯ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜಪೀರ್ ಮಾತನಾಡಿದರು. ಕಾರ್ಯಕ್ರಮದಲ್ಲಿ 8 ಜೋಡಿಗಳ ವಿವಾಹ ನೆರವೇರಿಸಲಾಯಿತು.ಜಮುರಾ ಕಲಾಲೋಕದ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.