ಕನ್ನಡಪ್ರಭ ವಾರ್ತೆ ಪಾಂಡವಪುರ
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ನಾರಾಯಣಪುರದ ಜೆ.ಎಂ.ಪುಟ್ಟಸ್ವಾಮಿ, ಎನ್.ಎಸ್.ಯೋಗನರಸಿಂಹ್ಮೇಗೌಡ, ಸಣಬದ ಎಸ್.ಜೆ.ಚನ್ನಕೃಷ್ಣೇಗೌಡ, ಕಾಮನಾಯಕಹಳ್ಳಿಯ ಕೆ.ವಿ.ಶ್ರೀನಿವಾಸ್, ನಳ್ಳೇನಹಳ್ಳಿಯ ಎನ್.ಎಸ್.ಆನಂದ (ಸಾಮಾನ್ಯ ವರ್ಗ), ಹೊಸಹಳ್ಳಿಯ ಎನ್.ಎಸ್.ವಿನೋದ, ವಳಗೆರೆದೇವರಹಳ್ಳಿಯ ಎಲ್.ಚಂದ್ರವತಿ (ಮಹಿಳಾ ಮೀಸಲು), ಸಿಂಗಾಪುರದ ಕರಿಯಯ್ಯ (ಪರಿಶಿಷ್ಟ ಜಾತಿ), ವಳಗೆರೆ ದೇವರಹಳ್ಳಿಯ ನಂಜೇಗೌಡ (ಬಿಸಿಎಂ ಎ), ಟಿ.ದೇವರಾಜು (ಬಿಸಿಎಂ ಬಿ), ನಾರಾಯಣಪುರದ ಜವರಯ್ಯ (ಪರಿಶಿಷ್ಟ ಪಂಗಡ) ಅವಿರೋಧ ಆಯ್ಕೆ, ಸಾಲಗಾರರಲ್ಲದ ಕ್ಷೇತ್ರದಿಂದ ನಳ್ಳೇನಹಳ್ಳಿಯ ಎನ್.ಜಿ.ಅಶೋಕ (ಸಾಮಾನ್ಯ) ಅವರು ಚುನಾಯಿತರಾದರು.
ಈ ವೇಳೆ ನೂತನ ನಿರ್ದೇಶಕರನ್ನು ಅಭಿನಂದಿದ ಜೆಡಿಎಸ್ ಮುಖಂಡ ಕೋಡಾಲ ರಾಧಾಕೃಷ್ಣ ಅವರು ಮಾತನಾಡಿ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ನಾಯಕತ್ವದಲ್ಲಿ ನಾರಾಯಣಪುರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು 8 ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಷೇರುದಾರರ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಎಲ್ಲಾ ನಿರ್ದೇಶಕರು ಶ್ರಮಿಸಲಿದ್ದಾರೆ ಎಂದರು.ಈ ವೇಳೆ ಮುಖಂಡರಾದ ನಾರಾಯಣಪುರ ಸುಂದ್ರಣ್ಣ, ಎನ್.ಕೆ.ಜಯರಾಂ, ಕಡಬ ಬಲರಾಂ, ಕಾಮನಾಯಕನಹಳ್ಳಿ ರಾಮಚಂದ್ರ, ಕುಮಾರ, ಅನಿಲ್ ಇತರರಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಬಳಕದ ಅಧ್ಯಕ್ಷ ರವಿ ಕಿರಣ, ಅಂದು ಬೆಳಗ್ಗೆ 10 ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕವಿಗಳ ಕವಿತೆಯನ್ನು ಪದ್ಯದ ರೀತಿಯಲ್ಲಿ ಪ್ರಸ್ತುತ ಪಡಿಸಲಾಗುವುದು ಎಂದರು.
ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ, ತೋಟಗಾರಿಕೆ ಇಲಾಖೆ ಕೆ.ಎಂ.ರೇಖಾ, ಜಾನಪದ ವಿದ್ವಾಂಸ ಡಾ.ಜೆ.ರಾಜು ಗುಂಡಾಪುರ ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಬಾಲ ಸುಬ್ರಮಣ್ಯ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಇದ್ದರು.